<p><strong>ಮೈಸೂರು: ‘</strong>ಮಾನವ ಕುಲದ ಸೇವೆಗೆ ಶ್ರಮಿಸುತ್ತಿರುವ ವೈದ್ಯರನ್ನು ಸ್ಮರಿಸುವುದು ಅಗತ್ಯ’ ಎಂದು ಸಿಗ್ಮಾ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಎಸ್.ಜ್ಞಾನಶಂಕರ್ ಹೇಳಿದರು.</p>.<p>ನಗರದ ಸಿಗ್ಮಾ ಆಸ್ಪತ್ರೆಯುಲ್ಲಿ ಸೋಮವಾರ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆಯಲ್ಲಿ ಮಾತನಾಡಿದ ಅವರು, ‘ಭಾರತದ ವೈದ್ಯಕೀಯ ಕ್ಷೇತ್ರದಲ್ಲಿ ಡಾ.ಬಿ.ಸಿ.ರಾಯ್ ಅವರ ಸೇವೆ ಶ್ಲಾಘನೀಯ. ಇಂದು ಅವರ ಸ್ಮರಣೆಯ ದಿನ. ವೈದ್ಯರ ಮಹತ್ವ ಅರಿಯಲು ಈ ದಿನವೂ ಒಂದು ವೇದಿಕೆಯಾಗಲಿ’ ಎಂದರು.</p>.<p>ಆಸ್ಪತ್ರೆಯ ನಿರ್ದೇಶಕ ಡಾ.ಮಾದಪ್ಪ ಮಾತನಾಡಿ, ‘ಕಿಡ್ನಿ ಕಸಿ ಮಾಡುವಲ್ಲಿ ನಮ್ಮ ಆಸ್ಪತ್ರೆ ಉತ್ತಮ ಸೌಲಭ್ಯ ಹೊಂದಿದೆ. ಆಸ್ಪತ್ರೆಯಲ್ಲಿ ಸರ್ಕಾರಿ ಹಾಗೂ ಸಹಕಾರಿ ಯೋಜನೆಗಳು ಆರ್ಥಿಕವಾಗಿ ಹಿಂದುಳಿದ ವರ್ಗದವರಿಗಾಗಿ ಲಭ್ಯವಿದೆ’ ಎಂದು ತಿಳಿಸಿದರು.</p>.<p>ಬನ್ನೂರಿನ ಪುರುಷೋತ್ತಮ ಮಾತನಾಡಿ, ‘ಹತ್ತು ವರ್ಷದಿಂದ ಉದರ ಸಮಸ್ಯೆಯಿಂದ ಬಳಲುತ್ತಿದ್ದು, ಕೆಲ ಆಸ್ಪತ್ರೆಗಳಲ್ಲಿ ತೋರಿಸಿ ಶಮನ ಆಗದಿದ್ದಾಗ ಈ ಆಸ್ಪತ್ರೆಯಲ್ಲಿ ಉದರ ಶಸ್ತ್ರಚಿಕಿತ್ಸೆ ಮಾಡಿ, ಗುಣಮುಖನಾಗಿದ್ದೇನೆ’ ಎಂದು ತಮ್ಮ ಅನುಭವ ಹಂಚಿಕೊಂಡರು, ವೈದ್ಯರಿಗೆ ಕೃತಜ್ಞತೆ ತಿಳಿಸಿದರು.</p>.<p>ಆಸ್ಪತ್ರೆಯ ನಿರ್ದೇಶಕಿ ಮಕ್ಕಳ ಹಿರಿಯ ತಜ್ಞರಾದ ಡಾ.ರಾಜೇಶ್ವರಿ ಮಾದಪ್ಪ, ರಕ್ತ ಪರೀಕ್ಷಕಿ ಡಾ.ಶ್ರೀದೇವಿ, ಹೃದಯ ತಜ್ಞ ಡಾ.ಕೃಷ್ಣಪ್ರಸನ್ನ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು: ‘</strong>ಮಾನವ ಕುಲದ ಸೇವೆಗೆ ಶ್ರಮಿಸುತ್ತಿರುವ ವೈದ್ಯರನ್ನು ಸ್ಮರಿಸುವುದು ಅಗತ್ಯ’ ಎಂದು ಸಿಗ್ಮಾ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಎಸ್.ಜ್ಞಾನಶಂಕರ್ ಹೇಳಿದರು.</p>.<p>ನಗರದ ಸಿಗ್ಮಾ ಆಸ್ಪತ್ರೆಯುಲ್ಲಿ ಸೋಮವಾರ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆಯಲ್ಲಿ ಮಾತನಾಡಿದ ಅವರು, ‘ಭಾರತದ ವೈದ್ಯಕೀಯ ಕ್ಷೇತ್ರದಲ್ಲಿ ಡಾ.ಬಿ.ಸಿ.ರಾಯ್ ಅವರ ಸೇವೆ ಶ್ಲಾಘನೀಯ. ಇಂದು ಅವರ ಸ್ಮರಣೆಯ ದಿನ. ವೈದ್ಯರ ಮಹತ್ವ ಅರಿಯಲು ಈ ದಿನವೂ ಒಂದು ವೇದಿಕೆಯಾಗಲಿ’ ಎಂದರು.</p>.<p>ಆಸ್ಪತ್ರೆಯ ನಿರ್ದೇಶಕ ಡಾ.ಮಾದಪ್ಪ ಮಾತನಾಡಿ, ‘ಕಿಡ್ನಿ ಕಸಿ ಮಾಡುವಲ್ಲಿ ನಮ್ಮ ಆಸ್ಪತ್ರೆ ಉತ್ತಮ ಸೌಲಭ್ಯ ಹೊಂದಿದೆ. ಆಸ್ಪತ್ರೆಯಲ್ಲಿ ಸರ್ಕಾರಿ ಹಾಗೂ ಸಹಕಾರಿ ಯೋಜನೆಗಳು ಆರ್ಥಿಕವಾಗಿ ಹಿಂದುಳಿದ ವರ್ಗದವರಿಗಾಗಿ ಲಭ್ಯವಿದೆ’ ಎಂದು ತಿಳಿಸಿದರು.</p>.<p>ಬನ್ನೂರಿನ ಪುರುಷೋತ್ತಮ ಮಾತನಾಡಿ, ‘ಹತ್ತು ವರ್ಷದಿಂದ ಉದರ ಸಮಸ್ಯೆಯಿಂದ ಬಳಲುತ್ತಿದ್ದು, ಕೆಲ ಆಸ್ಪತ್ರೆಗಳಲ್ಲಿ ತೋರಿಸಿ ಶಮನ ಆಗದಿದ್ದಾಗ ಈ ಆಸ್ಪತ್ರೆಯಲ್ಲಿ ಉದರ ಶಸ್ತ್ರಚಿಕಿತ್ಸೆ ಮಾಡಿ, ಗುಣಮುಖನಾಗಿದ್ದೇನೆ’ ಎಂದು ತಮ್ಮ ಅನುಭವ ಹಂಚಿಕೊಂಡರು, ವೈದ್ಯರಿಗೆ ಕೃತಜ್ಞತೆ ತಿಳಿಸಿದರು.</p>.<p>ಆಸ್ಪತ್ರೆಯ ನಿರ್ದೇಶಕಿ ಮಕ್ಕಳ ಹಿರಿಯ ತಜ್ಞರಾದ ಡಾ.ರಾಜೇಶ್ವರಿ ಮಾದಪ್ಪ, ರಕ್ತ ಪರೀಕ್ಷಕಿ ಡಾ.ಶ್ರೀದೇವಿ, ಹೃದಯ ತಜ್ಞ ಡಾ.ಕೃಷ್ಣಪ್ರಸನ್ನ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>