‘ಅದ್ಯಾವ ವಿವೇಕರಹಿತ, ವಿವೇಕ ಶೂನ್ಯ ಹಾಗೂ ವಿವೇಕಹೀನ ವ್ಯಕ್ತಿಯಿಂದ ಈ ವಿವಾದ ಉಂಟಾಯಿತೋ? ನಿರಂಜನ ಮಠವನ್ನು ಕಿತ್ತುಕೊಳ್ಳುವುದು ವಿವೇಕಾನಂದರಿಗೆ ಮಾಡುವ ಅವಮಾನವೇ ಸರಿ. 46ಸಾವಿರ ಚ.ಅಡಿಯಲ್ಲಿ ಒಂದು ಚ.ಅಡಿ ಜಾಗವನ್ನು ಕಿತ್ತುಕೊಂಡರೂ ಸುಮ್ಮನಿರೆವು. ಬಸವ ಕಲ್ಯಾಣ, ಕೂಡಲಸಂಗಮ ಮತ್ತು ಉಳವಿ ಕ್ಷೇತ್ರದಿಂದ ನಿರಂಜನ ಮಠದವರೆಗೆ ಯಾತ್ರೆ ನಡೆಸಬೇಕಾಗುತ್ತದೆ. ನಮ್ಮ ಪೂಜಾ ಸ್ಥಳದ ತಂಟೆಗೆ ಬಂದರೆ ಸಹಿಸಲಾಗದು’ ಎಂದು ಎಚ್ಚರಿಕೆ ನೀಡಿದರು.