<p><strong>ಮೈಸೂರು</strong>: ‘ಒನಕೆ ಓಬವ್ವ ನಾಡಿನ ಮಹಿಳೆಯರ ಸ್ಫೂರ್ತಿಯಾಗಿದ್ದು, ಸಮಯ ಪ್ರಜ್ಞೆ ಹಾಗೂ ಕರ್ತವ್ಯ ನಿಷ್ಠೆ ಅನುಕರಣೀಯವಾಗಿದೆ’ ಎಂದು ವಿಧಾನಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ ಹೇಳಿದರು. </p>.<p>ನಗರದ ಕಿರುರಂಗಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಮಂಗಳವಾರ ಆಯೋಜಿಸಿದ್ದ ವೀರವನಿತೆ ಒನಕೆ ಓಬವ್ವ ಜಯಂತಿಯಲ್ಲಿ ಮಾತನಾಡಿದರು.</p>.<p>‘ಕಿತ್ತೂರು ಚೆನ್ನಮ್ಮ, ರಾಣಿ ಅಬ್ಬಕ್ಕರ ಸಾಲಿನಲ್ಲಿ ಓಬವ್ವ ಅವರನ್ನೂ ಸ್ಮರಿಸಲಾಗುತ್ತದೆ. ರಾಣಿಯಷ್ಟೇ ಅಲ್ಲ ಸಾಮಾನ್ಯ ಮಹಿಳೆಯೂ ನಾಡಿನ ರಕ್ಷಣೆಗೆ ನಿಲ್ಲಬಲ್ಲಳು ಎಂಬುದಕ್ಕೆ ಉದಾಹರಣೆಯಾಗಿದ್ದಾರೆ’ ಎಂದರು. </p>.<p>‘ಅವರ ಆತ್ಮಸ್ಥೈರ್ಯ, ದೇಶಭಕ್ತಿಯ ಬೆಳಕು ನಮ್ಮಲ್ಲಿಯೂ ಸದಾ ಬೆಳಗಬೇಕಿದೆ. ತ್ಯಾಗ, ಬಲಿದಾನವನ್ನು ಸ್ಫೂರ್ತಿಯಾಗಿ ತೆಗೆದುಕೊಳ್ಳಬೇಕಿದೆ. ಇಂದು ಎಲ್ಲ ರಂಗದಲ್ಲೂ ಮಹಿಳೆಯರು ಸಾಧನೆ ಮಾಡುತ್ತಿದ್ದು, ಸಮಾಜಕ್ಕೆ ಮಾದರಿ ಆಗಬೇಕು. ಓಬವ್ವರಂತೆಯೇ ಪ್ರತಿಯೊಬ್ಬರೂ ಸಮಾಜದಲ್ಲಿ ಒಳ್ಳೆಯ ಗುರುತುಗಳನ್ನು ಬಿಟ್ಟು ಹೋಗಬೇಕು’ ಎಂದು ಹೇಳಿದರು. </p>.<p>‘ಹೈದರಾಲಿಯ ಮೈಸೂರು ಸೈನ್ಯವು ಚಿತ್ರದುರ್ಗದ ಕೋಟೆಯನ್ನು ಮುತ್ತಿದಾಗ ತಾಯಿನಾಡಿನ ರಕ್ಷಣೆಗೆ ನಿಂತರು. ಯಾವುದೇ ಸಂದರ್ಭದಲ್ಲೂ ಧೃತಿಗೆಡದೇ ಧೈರ್ಯ ಪ್ರದರ್ಶಿಸಬೇಕು ಎಂಬ ಶೌರ್ಯವನ್ನು ಅವರು ತೋರಿದ್ದರು’ ಎಂದು ಸ್ಮರಿಸಿದರು. </p>.<p>ಎಸ್ಡಿಎಂ ಮಹಿಳಾ ಕಾಲೇಜಿನ ಪ್ರಾಧ್ಯಾಪಕ ಪ್ರೊ.ವಿನೋದಾ ಮಾತನಾಡಿ, ‘ಚಿತ್ರದುರ್ಗದ ಕೋಟೆ ಉಳಿಸಿದ ಓಬವ್ವ ಅವರ ಸಮಯಪ್ರಜ್ಞೆಯು ಪ್ರೇರಣಾದಾಯಕ. ಎದುರಾಗುವ ಸವಾಲುಗಳನ್ನು ಮೆಟ್ಟಿ ನಿಲ್ಲುವ ಬಗೆಯನ್ನು ಅವರು ತೋರಿಸಿಕೊಟ್ಟರು. ದುರ್ಗೆಯ ಜ್ಯೋತಿಯಂತೆ ಇಂದಿಗೂ ಪ್ರಜ್ವಲಿಸುತ್ತಿದ್ದಾರೆ’ ಎಂದು ಬಣ್ಣಿಸಿದರು. </p>.<p>ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನಸ್ವಾಮಿ, ಸಹಾಯಕ ನಿರ್ದೇಶಕ ಎಂ.ಡಿ.ಸುದರ್ಶನ್, ಕನ್ನಡ ಕಲಾಕೂಟದ ಅಧ್ಯಕ್ಷ ಎಂ.ಚಂದ್ರಶೇಖರ್, ಹೋರಾಟಗಾರ ಸುಶಂಕರ್ ಪಾಲ್ಗೊಂಡಿದ್ದರು. </p>.<h2> ‘ಹೆಣ್ಣುಮಕ್ಕಳಿಗೆ ಸ್ಫೂರ್ತಿ’ </h2><p> ‘ಓಬವ್ವ ಅವರ ಧೈರ್ಯ ಸಾಹಸಗಳು ನಾಡಿನ ಹೆಣ್ಣು ಮಕ್ಕಳಿಗೆ ಸ್ಫೂರ್ತಿಯಾಗಬೇಕು’ ಎಂದು ಬಿಜೆಪಿ ನಗರ ಮಹಿಳಾ ಮೋರ್ಚಾ ಅಧ್ಯಕ್ಷೆ ರೇಣುಕಾ ರಾಜ್ ಹೇಳಿದರು. </p> <p> ನಾರಾಯಣ ಶಾಸ್ತ್ರಿ ರಸ್ತೆಯಲ್ಲಿರುವ ಸ್ವಾತಂತ್ರ್ಯ ಹೋರಾಟಗಾರರ ಉದ್ಯಾನದಲ್ಲಿ ಪ್ರಜ್ಞಾವಂತ ನಾಗರಿಕ ವೇದಿಕೆ ಆಯೋಜಿಸಿದ್ದ ಜಯಂತಿಯನ್ನು ಗಿಡ ನೆಡುವ ಮೂಲಕ ಉದ್ಘಾಟಿಸಿದ ಅವರು ‘ಹೈದರಾಲಿ ಸೈನಿಕರು ಚಿತ್ರದುರ್ಗ ಕೋಟೆಯನ್ನು ಮುತ್ತಿದಾಗ ಒನಕೆಯನ್ನೇ ಆಯುಧವಾಗಿ ಬಳಸಿ ಕೋಟೆ ರಕ್ಷಿಸಿದ ಮಹಾಮಾತೆ’ ಎಂದರು. </p> <p>ಪ್ರಮೀಳಾ ಭರತ್ ಮಾತನಾಡಿ ‘ನಮ್ಮ ಓಬವ್ವ ಸೇರಿದಂತೆ ಮಹಿಳೆಯರ ಚರಿತ್ರೆಗಳನ್ನು ನಾಡಿನಾಚೆಗೂ ಪಸರಿಸುವ ಕೆಲಸ ಮಾಡಬೇಕಿದೆ’ ಎಂದು ಹೇಳಿದರು. </p> <p>ಕೆಪಿಸಿಸಿ ಸದಸ್ಯ ನಜರ್ಬಾದ್ ನಟರಾಜ್ ಕರ್ನಾಟಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ ವಿನಯ್ ಕುಮಾರ್ ಪ್ರಜ್ಞಾವಂತ ನಾಗರಿಕ ವೇದಿಕೆ ಅಧ್ಯಕ್ಷ ಕಡಕೊಳ ಜಗದೀಶ್ ಶ್ರುತಿ ಅಪೂರ್ವ ಸುರೇಶ್ ಎಸ್.ಎನ್.ರಾಜೇಶ್ ಚರಣ್ ದಿನೇಶ್ ಸದಾಶಿವ್ ಸುಚೇಂದ್ರ ಪಾಲ್ಗೊಂಡಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು</strong>: ‘ಒನಕೆ ಓಬವ್ವ ನಾಡಿನ ಮಹಿಳೆಯರ ಸ್ಫೂರ್ತಿಯಾಗಿದ್ದು, ಸಮಯ ಪ್ರಜ್ಞೆ ಹಾಗೂ ಕರ್ತವ್ಯ ನಿಷ್ಠೆ ಅನುಕರಣೀಯವಾಗಿದೆ’ ಎಂದು ವಿಧಾನಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ ಹೇಳಿದರು. </p>.<p>ನಗರದ ಕಿರುರಂಗಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಮಂಗಳವಾರ ಆಯೋಜಿಸಿದ್ದ ವೀರವನಿತೆ ಒನಕೆ ಓಬವ್ವ ಜಯಂತಿಯಲ್ಲಿ ಮಾತನಾಡಿದರು.</p>.<p>‘ಕಿತ್ತೂರು ಚೆನ್ನಮ್ಮ, ರಾಣಿ ಅಬ್ಬಕ್ಕರ ಸಾಲಿನಲ್ಲಿ ಓಬವ್ವ ಅವರನ್ನೂ ಸ್ಮರಿಸಲಾಗುತ್ತದೆ. ರಾಣಿಯಷ್ಟೇ ಅಲ್ಲ ಸಾಮಾನ್ಯ ಮಹಿಳೆಯೂ ನಾಡಿನ ರಕ್ಷಣೆಗೆ ನಿಲ್ಲಬಲ್ಲಳು ಎಂಬುದಕ್ಕೆ ಉದಾಹರಣೆಯಾಗಿದ್ದಾರೆ’ ಎಂದರು. </p>.<p>‘ಅವರ ಆತ್ಮಸ್ಥೈರ್ಯ, ದೇಶಭಕ್ತಿಯ ಬೆಳಕು ನಮ್ಮಲ್ಲಿಯೂ ಸದಾ ಬೆಳಗಬೇಕಿದೆ. ತ್ಯಾಗ, ಬಲಿದಾನವನ್ನು ಸ್ಫೂರ್ತಿಯಾಗಿ ತೆಗೆದುಕೊಳ್ಳಬೇಕಿದೆ. ಇಂದು ಎಲ್ಲ ರಂಗದಲ್ಲೂ ಮಹಿಳೆಯರು ಸಾಧನೆ ಮಾಡುತ್ತಿದ್ದು, ಸಮಾಜಕ್ಕೆ ಮಾದರಿ ಆಗಬೇಕು. ಓಬವ್ವರಂತೆಯೇ ಪ್ರತಿಯೊಬ್ಬರೂ ಸಮಾಜದಲ್ಲಿ ಒಳ್ಳೆಯ ಗುರುತುಗಳನ್ನು ಬಿಟ್ಟು ಹೋಗಬೇಕು’ ಎಂದು ಹೇಳಿದರು. </p>.<p>‘ಹೈದರಾಲಿಯ ಮೈಸೂರು ಸೈನ್ಯವು ಚಿತ್ರದುರ್ಗದ ಕೋಟೆಯನ್ನು ಮುತ್ತಿದಾಗ ತಾಯಿನಾಡಿನ ರಕ್ಷಣೆಗೆ ನಿಂತರು. ಯಾವುದೇ ಸಂದರ್ಭದಲ್ಲೂ ಧೃತಿಗೆಡದೇ ಧೈರ್ಯ ಪ್ರದರ್ಶಿಸಬೇಕು ಎಂಬ ಶೌರ್ಯವನ್ನು ಅವರು ತೋರಿದ್ದರು’ ಎಂದು ಸ್ಮರಿಸಿದರು. </p>.<p>ಎಸ್ಡಿಎಂ ಮಹಿಳಾ ಕಾಲೇಜಿನ ಪ್ರಾಧ್ಯಾಪಕ ಪ್ರೊ.ವಿನೋದಾ ಮಾತನಾಡಿ, ‘ಚಿತ್ರದುರ್ಗದ ಕೋಟೆ ಉಳಿಸಿದ ಓಬವ್ವ ಅವರ ಸಮಯಪ್ರಜ್ಞೆಯು ಪ್ರೇರಣಾದಾಯಕ. ಎದುರಾಗುವ ಸವಾಲುಗಳನ್ನು ಮೆಟ್ಟಿ ನಿಲ್ಲುವ ಬಗೆಯನ್ನು ಅವರು ತೋರಿಸಿಕೊಟ್ಟರು. ದುರ್ಗೆಯ ಜ್ಯೋತಿಯಂತೆ ಇಂದಿಗೂ ಪ್ರಜ್ವಲಿಸುತ್ತಿದ್ದಾರೆ’ ಎಂದು ಬಣ್ಣಿಸಿದರು. </p>.<p>ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನಸ್ವಾಮಿ, ಸಹಾಯಕ ನಿರ್ದೇಶಕ ಎಂ.ಡಿ.ಸುದರ್ಶನ್, ಕನ್ನಡ ಕಲಾಕೂಟದ ಅಧ್ಯಕ್ಷ ಎಂ.ಚಂದ್ರಶೇಖರ್, ಹೋರಾಟಗಾರ ಸುಶಂಕರ್ ಪಾಲ್ಗೊಂಡಿದ್ದರು. </p>.<h2> ‘ಹೆಣ್ಣುಮಕ್ಕಳಿಗೆ ಸ್ಫೂರ್ತಿ’ </h2><p> ‘ಓಬವ್ವ ಅವರ ಧೈರ್ಯ ಸಾಹಸಗಳು ನಾಡಿನ ಹೆಣ್ಣು ಮಕ್ಕಳಿಗೆ ಸ್ಫೂರ್ತಿಯಾಗಬೇಕು’ ಎಂದು ಬಿಜೆಪಿ ನಗರ ಮಹಿಳಾ ಮೋರ್ಚಾ ಅಧ್ಯಕ್ಷೆ ರೇಣುಕಾ ರಾಜ್ ಹೇಳಿದರು. </p> <p> ನಾರಾಯಣ ಶಾಸ್ತ್ರಿ ರಸ್ತೆಯಲ್ಲಿರುವ ಸ್ವಾತಂತ್ರ್ಯ ಹೋರಾಟಗಾರರ ಉದ್ಯಾನದಲ್ಲಿ ಪ್ರಜ್ಞಾವಂತ ನಾಗರಿಕ ವೇದಿಕೆ ಆಯೋಜಿಸಿದ್ದ ಜಯಂತಿಯನ್ನು ಗಿಡ ನೆಡುವ ಮೂಲಕ ಉದ್ಘಾಟಿಸಿದ ಅವರು ‘ಹೈದರಾಲಿ ಸೈನಿಕರು ಚಿತ್ರದುರ್ಗ ಕೋಟೆಯನ್ನು ಮುತ್ತಿದಾಗ ಒನಕೆಯನ್ನೇ ಆಯುಧವಾಗಿ ಬಳಸಿ ಕೋಟೆ ರಕ್ಷಿಸಿದ ಮಹಾಮಾತೆ’ ಎಂದರು. </p> <p>ಪ್ರಮೀಳಾ ಭರತ್ ಮಾತನಾಡಿ ‘ನಮ್ಮ ಓಬವ್ವ ಸೇರಿದಂತೆ ಮಹಿಳೆಯರ ಚರಿತ್ರೆಗಳನ್ನು ನಾಡಿನಾಚೆಗೂ ಪಸರಿಸುವ ಕೆಲಸ ಮಾಡಬೇಕಿದೆ’ ಎಂದು ಹೇಳಿದರು. </p> <p>ಕೆಪಿಸಿಸಿ ಸದಸ್ಯ ನಜರ್ಬಾದ್ ನಟರಾಜ್ ಕರ್ನಾಟಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ ವಿನಯ್ ಕುಮಾರ್ ಪ್ರಜ್ಞಾವಂತ ನಾಗರಿಕ ವೇದಿಕೆ ಅಧ್ಯಕ್ಷ ಕಡಕೊಳ ಜಗದೀಶ್ ಶ್ರುತಿ ಅಪೂರ್ವ ಸುರೇಶ್ ಎಸ್.ಎನ್.ರಾಜೇಶ್ ಚರಣ್ ದಿನೇಶ್ ಸದಾಶಿವ್ ಸುಚೇಂದ್ರ ಪಾಲ್ಗೊಂಡಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>