ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲ್ಲೂಕಿನ ಅವಿನಾಶ್ ದಮ್ನಳ್ಳಿ ಫೋಟೊಗ್ರಫಿ ಚಪಲದಿಂದಾಗಿ ಪತ್ರಕರ್ತ ವೃತ್ತಿಗೆ ವಿದಾಯ ಹೇಳಿದರು. ಈಗ ಮಳೆ, ಚಳಿ, ಗಾಳಿ, ಬಿಸಿಲೆನ್ನದೇ ಸೈಕಲ್ನ ಪೆಡಲ್ ತುಳಿಯುತ್ತಾ ರಾಜ್ಯವನ್ನೆಲ್ಲ ಸುತ್ತುತ್ತಿದ್ದಾರೆ. ಮುಂದೆ ಆ ಸೈಕಲ್ಗೆ ದೇಶವನ್ನೆಲ್ಲಾ ಸುತ್ತುವ ಹಂಬಲ.
ಒಮ್ಮೆ ಮೈಸೂರಿನ ರಸ್ತೆಗಳಲ್ಲಿ ಸುತ್ತುತ್ತಾ ಬಿಡಿಚಿತ್ರಗಳನ್ನು ಜೇಬಿಗೆ ತುಂಬಿಕೊಳ್ಳುತ್ತಾ ಸಾಗಿದ ದಿನದ ಚಿತ್ರಣ ಇಲ್ಲಿದೆ.