<p><strong>ಮೈಸೂರು:</strong> ‘ಭಾರತಕ್ಕೆ ಬಹುತ್ವವೇ ಜೀವಾಳ. ಭಾಷೆ, ಆಹಾರ, ಸಂಸ್ಕೃತಿಯ ವೈವಿಧ್ಯತೆ ಸಂಭ್ರಮಿಸಬೇಕೇ ಹೊರತು ಇಲ್ಲಿನ ಜಾತಿ ಪದ್ಧತಿಯನ್ನಲ್ಲ’ ಎಂದು ವಿಮರ್ಶಕ ಪ್ರೊ.ರಹಮತ್ ತರೀಕೆರೆ ಹೇಳಿದರು. </p>.<p>ನಗರದ ಶೇಷಾದ್ರಿಪುರಂ ಪ್ರಥಮ ದರ್ಜೆ ಕಾಲೇಜಿನಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ಮತ್ತು ವಿಸ್ತರಣ ಕೇಂದ್ರವು ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಬಹುತ್ವದ ಭಾರತ’ ಕುರಿತು ಉಪನ್ಯಾಸ ನೀಡಿದರು. </p>.<p>‘ದೇಶದಲ್ಲಿರುವಷ್ಟು ಭಾಷೆ, ಆಹಾರ, ಉಡುಪು ವೈವಿಧ್ಯ ಬೇರೆಲ್ಲೂ ಇಲ್ಲ. ದಿನವೂ ರಾಗಿಮುದ್ದೆ ಮಾಡಿದರೆ, 365 ವೈವಿಧ್ಯದ ಸಾರುಗಳನ್ನು ಮಾಡುತ್ತಾರೆ’ ಎಂದು ಉದಾಹರಿಸಿದರು. </p>.<p>‘ವಾತಾವರಣಕ್ಕೆ ತಕ್ಕಂತೆ ವಿವಿಧ ಉಡುಪು, ಆಹಾರ, ಭಾಷೆ ಬೆಳೆದು ಬಂದಿದೆ. ರಾಜ್ಯಗಳ ಒಕ್ಕೂಟವಾಗಿರುವ ದೇಶದ ಭಿನ್ನ ಪರಂಪರೆಯ ಧಾರೆಗಳನ್ನು ಗೌರವಿಸಬೇಕು. ಒಂದು ಭಾಷೆ, ಧರ್ಮ, ಪಂಥವನ್ನು ಮತ್ತೊಂದರ ಮೇಲೆ ಹೇರಿಕೆ ಮಾಡಿದರೆ, ಬಹುತ್ವ ನಾಶವಾಗುತ್ತದೆ’ ಎಂದರು. </p>.<p>‘ಉತ್ತರ ಭಾರತದವರಿಗೆ ಎರಡು ಭಾಷೆ, ದಕ್ಷಿಣದ ರಾಜ್ಯಗಳಲ್ಲಿ ತ್ರಿಭಾಷೆ ಭಾಷೆ ಕಲಿಕೆಯ ಹೇರಿಕೆ ಮಾಡಲಾಗಿದೆ. ನೀವು ಯಾಕೆ ಎರಡು ಭಾಷೆ ಕಲಿಯುತ್ತಿದ್ದೀರಾ ಎಂದು ಉತ್ತರದವರನ್ನು ದಕ್ಷಿಣದವರು ಪ್ರಶ್ನೆ ಮಾಡಿದ್ದಾರಾ’ ಎಂದರು.</p>.<p>‘ದೇಶದ ಜಾತಿಗಳನ್ನು ಸಂಭ್ರಮಿಸಲು ಆಗದು. ತಾರತಮ್ಯ ಇದ್ದುದರಿಂದಲೇ ಅಂಬೇಡ್ಕರ್ ಜಾತಿ ವಿನಾಶಕ್ಕೆ ಕರೆ ನೀಡಿದ್ದರು. ಸಾಮಾಜಿಕ ಸಮಾನತೆಯನ್ನು ಸಾಧಿಸಬೇಕಿದೆ’ ಎಂದು ಹೇಳಿದರು. </p>.<p>ಕೇಂದ್ರದ ನಿರ್ದೇಶಕ ಪ್ರೊ.ಜೆ.ಸೋಮಶೇಖರ್, ಪ್ರೊ.ನರೇಂದ್ರ ಕುಮಾರ್, ಕಾಲೇಜು ಪ್ರಾಂಶುಪಾಲರಾದ ಪ್ರೊ.ಸೌಮ್ಯಾ ಈರಪ್ಪ ಪಾಲ್ಗೊಂಡಿದ್ದರು. </p>.<blockquote>ಭಾರತಕ್ಕೆ ಬಹುತ್ವವೇ ಜೀವಾಳ ಭಾಷೆ | ಸಂಸ್ಕೃತಿ ಹೇರಿಕೆ ಆಗಬಾರದು | ಉತ್ತರ ಭಾರತದಲ್ಲೇಕೆ ದ್ವಿಭಾಷಾ ನೀತಿ? </blockquote>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ‘ಭಾರತಕ್ಕೆ ಬಹುತ್ವವೇ ಜೀವಾಳ. ಭಾಷೆ, ಆಹಾರ, ಸಂಸ್ಕೃತಿಯ ವೈವಿಧ್ಯತೆ ಸಂಭ್ರಮಿಸಬೇಕೇ ಹೊರತು ಇಲ್ಲಿನ ಜಾತಿ ಪದ್ಧತಿಯನ್ನಲ್ಲ’ ಎಂದು ವಿಮರ್ಶಕ ಪ್ರೊ.ರಹಮತ್ ತರೀಕೆರೆ ಹೇಳಿದರು. </p>.<p>ನಗರದ ಶೇಷಾದ್ರಿಪುರಂ ಪ್ರಥಮ ದರ್ಜೆ ಕಾಲೇಜಿನಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ಮತ್ತು ವಿಸ್ತರಣ ಕೇಂದ್ರವು ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಬಹುತ್ವದ ಭಾರತ’ ಕುರಿತು ಉಪನ್ಯಾಸ ನೀಡಿದರು. </p>.<p>‘ದೇಶದಲ್ಲಿರುವಷ್ಟು ಭಾಷೆ, ಆಹಾರ, ಉಡುಪು ವೈವಿಧ್ಯ ಬೇರೆಲ್ಲೂ ಇಲ್ಲ. ದಿನವೂ ರಾಗಿಮುದ್ದೆ ಮಾಡಿದರೆ, 365 ವೈವಿಧ್ಯದ ಸಾರುಗಳನ್ನು ಮಾಡುತ್ತಾರೆ’ ಎಂದು ಉದಾಹರಿಸಿದರು. </p>.<p>‘ವಾತಾವರಣಕ್ಕೆ ತಕ್ಕಂತೆ ವಿವಿಧ ಉಡುಪು, ಆಹಾರ, ಭಾಷೆ ಬೆಳೆದು ಬಂದಿದೆ. ರಾಜ್ಯಗಳ ಒಕ್ಕೂಟವಾಗಿರುವ ದೇಶದ ಭಿನ್ನ ಪರಂಪರೆಯ ಧಾರೆಗಳನ್ನು ಗೌರವಿಸಬೇಕು. ಒಂದು ಭಾಷೆ, ಧರ್ಮ, ಪಂಥವನ್ನು ಮತ್ತೊಂದರ ಮೇಲೆ ಹೇರಿಕೆ ಮಾಡಿದರೆ, ಬಹುತ್ವ ನಾಶವಾಗುತ್ತದೆ’ ಎಂದರು. </p>.<p>‘ಉತ್ತರ ಭಾರತದವರಿಗೆ ಎರಡು ಭಾಷೆ, ದಕ್ಷಿಣದ ರಾಜ್ಯಗಳಲ್ಲಿ ತ್ರಿಭಾಷೆ ಭಾಷೆ ಕಲಿಕೆಯ ಹೇರಿಕೆ ಮಾಡಲಾಗಿದೆ. ನೀವು ಯಾಕೆ ಎರಡು ಭಾಷೆ ಕಲಿಯುತ್ತಿದ್ದೀರಾ ಎಂದು ಉತ್ತರದವರನ್ನು ದಕ್ಷಿಣದವರು ಪ್ರಶ್ನೆ ಮಾಡಿದ್ದಾರಾ’ ಎಂದರು.</p>.<p>‘ದೇಶದ ಜಾತಿಗಳನ್ನು ಸಂಭ್ರಮಿಸಲು ಆಗದು. ತಾರತಮ್ಯ ಇದ್ದುದರಿಂದಲೇ ಅಂಬೇಡ್ಕರ್ ಜಾತಿ ವಿನಾಶಕ್ಕೆ ಕರೆ ನೀಡಿದ್ದರು. ಸಾಮಾಜಿಕ ಸಮಾನತೆಯನ್ನು ಸಾಧಿಸಬೇಕಿದೆ’ ಎಂದು ಹೇಳಿದರು. </p>.<p>ಕೇಂದ್ರದ ನಿರ್ದೇಶಕ ಪ್ರೊ.ಜೆ.ಸೋಮಶೇಖರ್, ಪ್ರೊ.ನರೇಂದ್ರ ಕುಮಾರ್, ಕಾಲೇಜು ಪ್ರಾಂಶುಪಾಲರಾದ ಪ್ರೊ.ಸೌಮ್ಯಾ ಈರಪ್ಪ ಪಾಲ್ಗೊಂಡಿದ್ದರು. </p>.<blockquote>ಭಾರತಕ್ಕೆ ಬಹುತ್ವವೇ ಜೀವಾಳ ಭಾಷೆ | ಸಂಸ್ಕೃತಿ ಹೇರಿಕೆ ಆಗಬಾರದು | ಉತ್ತರ ಭಾರತದಲ್ಲೇಕೆ ದ್ವಿಭಾಷಾ ನೀತಿ? </blockquote>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>