<p><strong>ಮೈಸೂರು:</strong> ‘ದೃಷ್ಟಿದೋಷವುಳ್ಳವರಿಗೆ ಅನುಕೂಲವಾಗುವಂತೆ ಔಷಧಗಳ ಮೇಲೆ ಕ್ಯುಆರ್ ಕೋಡ್ ಆಧಾರಿತ ಮಾಹಿತಿ ವ್ಯವಸ್ಥೆ ಜಾರಿಗೊಳಿಸಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.</p>.<p>ಇಲ್ಲಿನ ಜೆಎಸ್ಎಸ್ ಫಾರ್ಮಸಿ ಕಾಲೇಜಿನಲ್ಲಿ ಸೋಮವಾರ ಜೆಎಸ್ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ ಹಾಗೂ ಜಪಾನ್ನ ಅಂತರರಾಷ್ಟ್ರೀಯ ಸಹಕಾರ ಸಂಸ್ಥೆ (ಜಿಕಾ) ಸಹಯೋಗದಲ್ಲಿ ನಡೆದ ದುಂಡುಮೇಜಿನ ಸಭೆಯಲ್ಲಿ ಅವರು ಮಾತನಾಡಿದರು.</p>.<p>‘ಜಪಾನ್ನಲ್ಲಿ ದೃಷ್ಟಿವಂಚಿತರಿಗೆ ಇಂತಹ ವ್ಯವಸ್ಥೆ ಬಳಕೆಯಲ್ಲಿದೆ. ಔಷಧದ ವಿವರ ಧ್ವನಿ ಮೂಲಕ ಸಿಗುತ್ತದೆ. ಭಾರತದಲ್ಲೂ ಜಪಾನ್ ಹಾಗೂ ಜೆಎಸ್ಎಸ್ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಈ ಬಗ್ಗೆ ಅಧ್ಯಯನ ನಡೆದಿರುವುದು ಉತ್ತಮ ಬೆಳವಣಿಗೆ. ಈ ಕ್ರಮದಿಂದ ಔಷಧ, ಅದರ ಬಳಕೆ, ಬೆಲೆ, ಅವಧಿ ಎಲ್ಲವೂ ದೃಷ್ಟಿವಂಚಿತರಿಗೂ ತಿಳಿಯಲಿದೆ. ಅನ್ಯರನ್ನು ಅವಲಂಬಿಸುವುದು ತಪ್ಪಲಿದೆ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಲಿದೆ’ ಎಂದರು.</p>.<p>‘ಔಷಧಗಳ ಮೇಲೆ ಕ್ಯುಆರ್ ಕೋಡ್ ಕಡ್ಡಾಯಗೊಳಿಸುವ ಬಗ್ಗೆ ಪರಿಶೀಲಿಸಲಾಗುವುದು. ಫಾರ್ಮಾ ಕಂಪನಿಗಳೊಂದಿಗೆ ಚರ್ಚಿಸಲಾಗುವುದು. ಇದರಿಂದ ಕಂಪನಿಗಳಿಗೆ ಹೆಚ್ಚುವರಿ ವೆಚ್ಚ ಬೀಳುವುದಿಲ್ಲ. ಕಂಪನಿಗಳು ಮುಂದೆ ಬಂದರೆ ನೆರವು ಒದಗಿಸಲಾಗುವುದು’ ಎಂದರು.</p>.<p>ಕಾಲೇಜಿನ ಸಿಬ್ಬಂದಿ ಹರ್ಷ ಚಲಸಾನಿ, ‘ಜಪಾನ್ನ ಮಾದರಿ ಅನುಸರಿಸಿ ದಕ್ಷಿಣ ಭಾರತದ ನಾಲ್ಕು ರಾಜ್ಯಗಳ 513 ಮಂದಿ ದೃಷ್ಟಿವಂಚಿತರ ಸಮೀಕ್ಷೆ ನಡೆಸಿದ್ದು, ಅವರಲ್ಲಿ 485 ಮಂದಿ ಮೊಬೈಲ್ ಬಳಸುತ್ತಿದ್ದು, ಕ್ಯುಆರ್ ಕೋಡ್ ಮೂಲಕ ಮಾಹಿತಿ ಪಡೆಯುತ್ತಿದ್ದಾರೆ’ ಎಂದರು.</p>.<p>ಜಪಾನ್ ಪ್ರತಿನಿಧಿ ಬ್ರಿಟ್ನಿ ಪಾರ್ಟಿನ್, ‘ಜಪಾನ್ನ ಕೆಲವು ಪ್ರಸಿದ್ಧ ಕಂಪನಿಗಳು ಉತ್ಪನ್ನಗಳ ಮೇಲೆ ಕ್ಯುಆರ್ ಕೋಡ್ ಮುದ್ರಿಸುತ್ತಿದ್ದು, ಔಷಧಗಳ ಸಮಗ್ರ ಮಾಹಿತಿ ನೀಡುತ್ತಿವೆ. ಆದರೆ ಸರ್ಕಾರ ಕಡ್ಡಾಯಗೊಳಿಸಿಲ್ಲ. ತಂತ್ರಜ್ಞಾನ ಬಳಸಿ ಉತ್ತಮ ವೈದ್ಯಕೀಯ ಸೇವೆ ಒದಗಿಸುವುದೇ ಉದ್ದೇಶ’ ಎಂದು ವಿವರಿಸಿದರು. </p>.<p>ಯೋಜನೆಯ ಸಾಧ್ಯತೆಗಳ ಕುರಿತು ಜಪಾನ್ ಪ್ರತಿನಿಧಿಗಳಾದ ಟೊಕುಹಿರೊ ಅರಕಾವ, ಜೊಟಾರೊ ಸುನಹಾರಾ, ಕೆಂಟ ಮಿಯೊಮೊಟೊ ವಿವರಿಸಿದರು.</p>.<p>ಜೆಎಸ್ಎಸ್ ಎಎಚ್ಇಆರ್ ಕುಲಪತಿ ಡಾ.ಎಚ್.ಬಸನಗೌಡಪ್ಪ, ಕುಲಸಚಿವ ಡಾ. ಬಿ. ಮಂಜುನಾಥ, ಕಾಲೇಜು ಪ್ರಾಂಶುಪಾಲ ಡಾ. ಟಿ.ಎಂ. ಪ್ರಮೋದ್ಕುಮಾರ್, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಕುಮಾರಸ್ವಾಮಿ ಪಾಲ್ಗೊಂಡರು.</p>.<div><blockquote>ದೃಷ್ಟಿವಂಚಿತರು ಜೀವನ ನಡೆಸಲು ಸಾಕಷ್ಟು ಸವಾಲು ಎದುರಿಸುತ್ತಿದ್ದಾರೆ. ಅವರು ಇತರರ ಮೇಲೆ ಅವಲಂಬಿಸುವುದನ್ನು ತಪ್ಪಿಸಲು ಈ ತಂತ್ರಜ್ಞಾನವು ಸಹಕಾರಿ ಆಗಲಿದೆ </blockquote><span class="attribution">-ಡಾ. ಎಚ್. ಬಸನಗೌಡಪ್ಪ, ಕುಲಪತಿ ಜೆಎಸ್ಎಸ್ ಎಎಚ್ಇಆರ್</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ‘ದೃಷ್ಟಿದೋಷವುಳ್ಳವರಿಗೆ ಅನುಕೂಲವಾಗುವಂತೆ ಔಷಧಗಳ ಮೇಲೆ ಕ್ಯುಆರ್ ಕೋಡ್ ಆಧಾರಿತ ಮಾಹಿತಿ ವ್ಯವಸ್ಥೆ ಜಾರಿಗೊಳಿಸಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.</p>.<p>ಇಲ್ಲಿನ ಜೆಎಸ್ಎಸ್ ಫಾರ್ಮಸಿ ಕಾಲೇಜಿನಲ್ಲಿ ಸೋಮವಾರ ಜೆಎಸ್ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ ಹಾಗೂ ಜಪಾನ್ನ ಅಂತರರಾಷ್ಟ್ರೀಯ ಸಹಕಾರ ಸಂಸ್ಥೆ (ಜಿಕಾ) ಸಹಯೋಗದಲ್ಲಿ ನಡೆದ ದುಂಡುಮೇಜಿನ ಸಭೆಯಲ್ಲಿ ಅವರು ಮಾತನಾಡಿದರು.</p>.<p>‘ಜಪಾನ್ನಲ್ಲಿ ದೃಷ್ಟಿವಂಚಿತರಿಗೆ ಇಂತಹ ವ್ಯವಸ್ಥೆ ಬಳಕೆಯಲ್ಲಿದೆ. ಔಷಧದ ವಿವರ ಧ್ವನಿ ಮೂಲಕ ಸಿಗುತ್ತದೆ. ಭಾರತದಲ್ಲೂ ಜಪಾನ್ ಹಾಗೂ ಜೆಎಸ್ಎಸ್ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಈ ಬಗ್ಗೆ ಅಧ್ಯಯನ ನಡೆದಿರುವುದು ಉತ್ತಮ ಬೆಳವಣಿಗೆ. ಈ ಕ್ರಮದಿಂದ ಔಷಧ, ಅದರ ಬಳಕೆ, ಬೆಲೆ, ಅವಧಿ ಎಲ್ಲವೂ ದೃಷ್ಟಿವಂಚಿತರಿಗೂ ತಿಳಿಯಲಿದೆ. ಅನ್ಯರನ್ನು ಅವಲಂಬಿಸುವುದು ತಪ್ಪಲಿದೆ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಲಿದೆ’ ಎಂದರು.</p>.<p>‘ಔಷಧಗಳ ಮೇಲೆ ಕ್ಯುಆರ್ ಕೋಡ್ ಕಡ್ಡಾಯಗೊಳಿಸುವ ಬಗ್ಗೆ ಪರಿಶೀಲಿಸಲಾಗುವುದು. ಫಾರ್ಮಾ ಕಂಪನಿಗಳೊಂದಿಗೆ ಚರ್ಚಿಸಲಾಗುವುದು. ಇದರಿಂದ ಕಂಪನಿಗಳಿಗೆ ಹೆಚ್ಚುವರಿ ವೆಚ್ಚ ಬೀಳುವುದಿಲ್ಲ. ಕಂಪನಿಗಳು ಮುಂದೆ ಬಂದರೆ ನೆರವು ಒದಗಿಸಲಾಗುವುದು’ ಎಂದರು.</p>.<p>ಕಾಲೇಜಿನ ಸಿಬ್ಬಂದಿ ಹರ್ಷ ಚಲಸಾನಿ, ‘ಜಪಾನ್ನ ಮಾದರಿ ಅನುಸರಿಸಿ ದಕ್ಷಿಣ ಭಾರತದ ನಾಲ್ಕು ರಾಜ್ಯಗಳ 513 ಮಂದಿ ದೃಷ್ಟಿವಂಚಿತರ ಸಮೀಕ್ಷೆ ನಡೆಸಿದ್ದು, ಅವರಲ್ಲಿ 485 ಮಂದಿ ಮೊಬೈಲ್ ಬಳಸುತ್ತಿದ್ದು, ಕ್ಯುಆರ್ ಕೋಡ್ ಮೂಲಕ ಮಾಹಿತಿ ಪಡೆಯುತ್ತಿದ್ದಾರೆ’ ಎಂದರು.</p>.<p>ಜಪಾನ್ ಪ್ರತಿನಿಧಿ ಬ್ರಿಟ್ನಿ ಪಾರ್ಟಿನ್, ‘ಜಪಾನ್ನ ಕೆಲವು ಪ್ರಸಿದ್ಧ ಕಂಪನಿಗಳು ಉತ್ಪನ್ನಗಳ ಮೇಲೆ ಕ್ಯುಆರ್ ಕೋಡ್ ಮುದ್ರಿಸುತ್ತಿದ್ದು, ಔಷಧಗಳ ಸಮಗ್ರ ಮಾಹಿತಿ ನೀಡುತ್ತಿವೆ. ಆದರೆ ಸರ್ಕಾರ ಕಡ್ಡಾಯಗೊಳಿಸಿಲ್ಲ. ತಂತ್ರಜ್ಞಾನ ಬಳಸಿ ಉತ್ತಮ ವೈದ್ಯಕೀಯ ಸೇವೆ ಒದಗಿಸುವುದೇ ಉದ್ದೇಶ’ ಎಂದು ವಿವರಿಸಿದರು. </p>.<p>ಯೋಜನೆಯ ಸಾಧ್ಯತೆಗಳ ಕುರಿತು ಜಪಾನ್ ಪ್ರತಿನಿಧಿಗಳಾದ ಟೊಕುಹಿರೊ ಅರಕಾವ, ಜೊಟಾರೊ ಸುನಹಾರಾ, ಕೆಂಟ ಮಿಯೊಮೊಟೊ ವಿವರಿಸಿದರು.</p>.<p>ಜೆಎಸ್ಎಸ್ ಎಎಚ್ಇಆರ್ ಕುಲಪತಿ ಡಾ.ಎಚ್.ಬಸನಗೌಡಪ್ಪ, ಕುಲಸಚಿವ ಡಾ. ಬಿ. ಮಂಜುನಾಥ, ಕಾಲೇಜು ಪ್ರಾಂಶುಪಾಲ ಡಾ. ಟಿ.ಎಂ. ಪ್ರಮೋದ್ಕುಮಾರ್, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಕುಮಾರಸ್ವಾಮಿ ಪಾಲ್ಗೊಂಡರು.</p>.<div><blockquote>ದೃಷ್ಟಿವಂಚಿತರು ಜೀವನ ನಡೆಸಲು ಸಾಕಷ್ಟು ಸವಾಲು ಎದುರಿಸುತ್ತಿದ್ದಾರೆ. ಅವರು ಇತರರ ಮೇಲೆ ಅವಲಂಬಿಸುವುದನ್ನು ತಪ್ಪಿಸಲು ಈ ತಂತ್ರಜ್ಞಾನವು ಸಹಕಾರಿ ಆಗಲಿದೆ </blockquote><span class="attribution">-ಡಾ. ಎಚ್. ಬಸನಗೌಡಪ್ಪ, ಕುಲಪತಿ ಜೆಎಸ್ಎಸ್ ಎಎಚ್ಇಆರ್</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>