<p><strong>ಹುಣಸೂರು</strong>: ತೆಂಗಿನ ತೋಟದಲ್ಲಿ ಕೆಂಪು ಮೂತಿ ಹುಳುವಿನ ಬಾಧೆಗೆ ಮರಗಳು ನಲುಗುತ್ತಿದ್ದು, ಈ ಬಗ್ಗೆ ರೈತರು ಆತಂಕಗೊಳ್ಳದೆ ತಜ್ಞರು ನೀಡಿದ ಸಲಹೆಯಂತೆ ಕ್ರಮವಹಿಸುವುದರಿಂದ ಮರವನ್ನು ರಕ್ಷಿಸಬಹುದಾಗಿದೆ ಎಂದು ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ನಾಗರಾಜ್ ತಿಳಿಸಿದ್ದಾರೆ.</p><p>‘ತಾಲ್ಲೂಕಿನಲ್ಲಿ 4 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆದಿದ್ದು, ವಾಣಿಜ್ಯ ಬೆಳೆಗೆ ಇತ್ತೀಚಿನ ದಿನಗಳಲ್ಲಿ ಕೆಂಪು ಮೂತಿ ಹುಳುಬಾಧೆ ಕಾಡುತ್ತಿದ್ದು, ಸುಳಿ ಒಣಗಿ ಮರದ ಕಾಂಡದಲ್ಲಿ ನೀರು ಸೋರುವಿಕೆ ಕಾಣಿಸಿಕೊಂಡು ಕ್ರಮೇಣ ಮರ ನಾಶವಾಗುತ್ತಿದೆ. ಈ ರೀತಿಯಾಗಿ ತಾಲ್ಲೂಕಿನ 2 ರಿಂದ 3 ಮೂರು ಸಾವಿರ ಮರಗಳಲ್ಲಿ ಬಾಧೆ ಕಾಣಿಸಿಕೊಂಡಿದೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.</p><p><strong>ನಿಯಂತ್ರಣ:</strong> ಕೆಂಪು ಮೂತಿ ಹುಳುವಿನ ಬಾಧೆಗೊಳಗಾದ ತೆಂಗಿನ ಮರದಲ್ಲಿ ಹುಳು ಪತ್ತೆಯಾದಲ್ಲಿ ಸಾಯಿಸುವ ಕ್ರಮ ಪ್ರಥಮ ಹಂತದಲ್ಲೇ ಆಗಬೇಕು. ನಂತರದಲ್ಲಿ ಮರಕ್ಕೆ ಅಂತರ ಬೇಸಾಯ ಮಾಡುವ ಹಂತದಲ್ಲಿ ಗಾಯಗೊಂಡಲ್ಲಿ ಆ ಭಾಗಕ್ಕೆ ಕ್ಲೋರೋಪೈರಿಪಾಸ್ ಹಾಗೂ ಮಣ್ಣಿನ ದ್ರಾವಣವನ್ನು ಹಾಕಿ ಗಾಯಗೊಂಡ ಭಾಗವನ್ನು ಮುಚ್ಚಬೇಕು. ಹಸಿ ಗರಿಗಳನ್ನು ಮನಸೋ ಇಚ್ಚೆಯಂತೆ ಕತ್ತರಿಸದೆ ಗಿಡದಿಂದ 2 ಅಡಿ ಬಿಟ್ಟು ಕತ್ತರಿಸಬೇಕು. ಪ್ರತಿ ಹೆಕ್ಟೇರ್ ಪ್ರದೇಶದಲ್ಲಿ ತೆಂಗಿನ ಮಧ್ಯೆ ಮೋಹಕ ಬಲೆಯನ್ನು ತೂಗು ಹಾಕುವುದರಿಂದ ಕೆಂಪು ಮೂತಿ ಹುಳು ಆಕರ್ಷಿತಗೊಂಡು ಬಲೆಗೆ ಸಿಲುಕುವುದರಿಂದ ಅತಿ ವೇಗವಾಗಿ ಹುಳು ನಿಯಂತ್ರಿಸಬಹುದಾಗಿದೆ’ ಎಂದು ಸಲಹೆ ನೀಡಿದರು.</p><p><strong>ಪೋಷಕಾಂಶ:</strong> ‘ತೆಂಗಿನ ತೋಟದ ನಿರ್ವಹಣೆ ಪ್ರಮುಖವಾಗಿದ್ದು, ಕೊಟ್ಟಿಗೆ ಗೊಬ್ಬರ ಪ್ರತಿ ಗಿಡಕ್ಕೆ 20ರಿಂದ 25 ಕೆ.ಜಿ ಬೇವಿನ ಹಿಂಡಿ 3 ಕೆ.ಜಿ. ರಾಸಾಯನಿಕ ಗೊಬ್ಬರಗಳಾದ ಅಮೋನಿಯಂ ಸಲ್ಫೈಟ್ 500 ಗ್ರಾಂ. ಡಿಎಪಿ 750 ಗ್ರಾಂ, ಎಂಒಪಿ 1 ಕೆಜಿ ಪ್ರತಿ ಗಿಡಕ್ಕೆ ಪಾತಿ ಮಾಡಿ ನೀಡಬೇಕು.</p><p>‘ಕೆಂಪು ಮೂತಿ ರೋಗಕ್ಕೆ ತುತ್ತಾದ ಗಿಡಗಳಿಗೆ ಪ್ರತಿ ಲೀಟರ್ ನೀರಿಗೆ 10 ಮಿಲಿ ಡೈಕ್ಲೋರ್ವಾಸ್ 10 ಇ.ಸಿ. ದ್ರಾವಣವನ್ನು ಬೆರೆಸಿ ರಂಧ್ರಗಳಿಗೆ ಸುರಿಯಬೇಕು ಅಥವಾ ಅಲ್ಯೂಮಿನಿಯಂ ಫಾಸ್ಪೇಟ್ ಮಾತ್ರೆಯನ್ನು ಹಾಕಿ ರಂಧ್ರವನ್ನು ಸಗಣಿಯಿಂದ ಮುಚ್ಚಬೇಕು. ಇದರೊಂದಿಗೆ ಲೆಸೆನ್ಟಾ ಕೀಟನಾಶಕವನ್ನು 1 ಗ್ರಾಂ 1 ಲೀಟರ್ ನೀರಿಗೆ ಮಿಶ್ರಣ ಮಾಡಿ ತೆಂಗಿನ ಸುಳಿಗೆ ಸುರಿದಲ್ಲಿ ಬಾಧೆ ನಿಯಂತ್ರಣ ಮಾಡಬಹುದು’ ಎಂದರು.</p><p>‘ಬೇರಿನ ಮೂಲಕವೂ ಈ ಮೇಲಿನ ಔಷಧವನ್ನು ಮಣ್ಣಿನ ಬಣ್ಣ ಹೋಲುವ ಬೇರನ್ನು ಅಡ್ಡಲಾಗಿ ಕತ್ತರಿಸಿ ಪ್ಲಾಸ್ಟಿಕ್ ಚೀಲದಲ್ಲಿ ಸಿದ್ಧಪಡಿಸಿದ ಔಷಧ ಕಟ್ಟಿದ್ದಲ್ಲಿ ಬೇರಿನ ಮೂಲಕ ಔಷಧ ಗಿಡ ಸಂಪೂರ್ಣ ಆವರಿಸಲಿದೆ. ಔಷಧ ನೀಡಿದ 15 ದಿನಗಳ ಕಾಲ ಎಳನೀರು ಕಟಾವು ಮಾಡದಂತೆ ರೈತರು ಎಚ್ಚರವಹಿಸಬೇಕು’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಣಸೂರು</strong>: ತೆಂಗಿನ ತೋಟದಲ್ಲಿ ಕೆಂಪು ಮೂತಿ ಹುಳುವಿನ ಬಾಧೆಗೆ ಮರಗಳು ನಲುಗುತ್ತಿದ್ದು, ಈ ಬಗ್ಗೆ ರೈತರು ಆತಂಕಗೊಳ್ಳದೆ ತಜ್ಞರು ನೀಡಿದ ಸಲಹೆಯಂತೆ ಕ್ರಮವಹಿಸುವುದರಿಂದ ಮರವನ್ನು ರಕ್ಷಿಸಬಹುದಾಗಿದೆ ಎಂದು ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ನಾಗರಾಜ್ ತಿಳಿಸಿದ್ದಾರೆ.</p><p>‘ತಾಲ್ಲೂಕಿನಲ್ಲಿ 4 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆದಿದ್ದು, ವಾಣಿಜ್ಯ ಬೆಳೆಗೆ ಇತ್ತೀಚಿನ ದಿನಗಳಲ್ಲಿ ಕೆಂಪು ಮೂತಿ ಹುಳುಬಾಧೆ ಕಾಡುತ್ತಿದ್ದು, ಸುಳಿ ಒಣಗಿ ಮರದ ಕಾಂಡದಲ್ಲಿ ನೀರು ಸೋರುವಿಕೆ ಕಾಣಿಸಿಕೊಂಡು ಕ್ರಮೇಣ ಮರ ನಾಶವಾಗುತ್ತಿದೆ. ಈ ರೀತಿಯಾಗಿ ತಾಲ್ಲೂಕಿನ 2 ರಿಂದ 3 ಮೂರು ಸಾವಿರ ಮರಗಳಲ್ಲಿ ಬಾಧೆ ಕಾಣಿಸಿಕೊಂಡಿದೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.</p><p><strong>ನಿಯಂತ್ರಣ:</strong> ಕೆಂಪು ಮೂತಿ ಹುಳುವಿನ ಬಾಧೆಗೊಳಗಾದ ತೆಂಗಿನ ಮರದಲ್ಲಿ ಹುಳು ಪತ್ತೆಯಾದಲ್ಲಿ ಸಾಯಿಸುವ ಕ್ರಮ ಪ್ರಥಮ ಹಂತದಲ್ಲೇ ಆಗಬೇಕು. ನಂತರದಲ್ಲಿ ಮರಕ್ಕೆ ಅಂತರ ಬೇಸಾಯ ಮಾಡುವ ಹಂತದಲ್ಲಿ ಗಾಯಗೊಂಡಲ್ಲಿ ಆ ಭಾಗಕ್ಕೆ ಕ್ಲೋರೋಪೈರಿಪಾಸ್ ಹಾಗೂ ಮಣ್ಣಿನ ದ್ರಾವಣವನ್ನು ಹಾಕಿ ಗಾಯಗೊಂಡ ಭಾಗವನ್ನು ಮುಚ್ಚಬೇಕು. ಹಸಿ ಗರಿಗಳನ್ನು ಮನಸೋ ಇಚ್ಚೆಯಂತೆ ಕತ್ತರಿಸದೆ ಗಿಡದಿಂದ 2 ಅಡಿ ಬಿಟ್ಟು ಕತ್ತರಿಸಬೇಕು. ಪ್ರತಿ ಹೆಕ್ಟೇರ್ ಪ್ರದೇಶದಲ್ಲಿ ತೆಂಗಿನ ಮಧ್ಯೆ ಮೋಹಕ ಬಲೆಯನ್ನು ತೂಗು ಹಾಕುವುದರಿಂದ ಕೆಂಪು ಮೂತಿ ಹುಳು ಆಕರ್ಷಿತಗೊಂಡು ಬಲೆಗೆ ಸಿಲುಕುವುದರಿಂದ ಅತಿ ವೇಗವಾಗಿ ಹುಳು ನಿಯಂತ್ರಿಸಬಹುದಾಗಿದೆ’ ಎಂದು ಸಲಹೆ ನೀಡಿದರು.</p><p><strong>ಪೋಷಕಾಂಶ:</strong> ‘ತೆಂಗಿನ ತೋಟದ ನಿರ್ವಹಣೆ ಪ್ರಮುಖವಾಗಿದ್ದು, ಕೊಟ್ಟಿಗೆ ಗೊಬ್ಬರ ಪ್ರತಿ ಗಿಡಕ್ಕೆ 20ರಿಂದ 25 ಕೆ.ಜಿ ಬೇವಿನ ಹಿಂಡಿ 3 ಕೆ.ಜಿ. ರಾಸಾಯನಿಕ ಗೊಬ್ಬರಗಳಾದ ಅಮೋನಿಯಂ ಸಲ್ಫೈಟ್ 500 ಗ್ರಾಂ. ಡಿಎಪಿ 750 ಗ್ರಾಂ, ಎಂಒಪಿ 1 ಕೆಜಿ ಪ್ರತಿ ಗಿಡಕ್ಕೆ ಪಾತಿ ಮಾಡಿ ನೀಡಬೇಕು.</p><p>‘ಕೆಂಪು ಮೂತಿ ರೋಗಕ್ಕೆ ತುತ್ತಾದ ಗಿಡಗಳಿಗೆ ಪ್ರತಿ ಲೀಟರ್ ನೀರಿಗೆ 10 ಮಿಲಿ ಡೈಕ್ಲೋರ್ವಾಸ್ 10 ಇ.ಸಿ. ದ್ರಾವಣವನ್ನು ಬೆರೆಸಿ ರಂಧ್ರಗಳಿಗೆ ಸುರಿಯಬೇಕು ಅಥವಾ ಅಲ್ಯೂಮಿನಿಯಂ ಫಾಸ್ಪೇಟ್ ಮಾತ್ರೆಯನ್ನು ಹಾಕಿ ರಂಧ್ರವನ್ನು ಸಗಣಿಯಿಂದ ಮುಚ್ಚಬೇಕು. ಇದರೊಂದಿಗೆ ಲೆಸೆನ್ಟಾ ಕೀಟನಾಶಕವನ್ನು 1 ಗ್ರಾಂ 1 ಲೀಟರ್ ನೀರಿಗೆ ಮಿಶ್ರಣ ಮಾಡಿ ತೆಂಗಿನ ಸುಳಿಗೆ ಸುರಿದಲ್ಲಿ ಬಾಧೆ ನಿಯಂತ್ರಣ ಮಾಡಬಹುದು’ ಎಂದರು.</p><p>‘ಬೇರಿನ ಮೂಲಕವೂ ಈ ಮೇಲಿನ ಔಷಧವನ್ನು ಮಣ್ಣಿನ ಬಣ್ಣ ಹೋಲುವ ಬೇರನ್ನು ಅಡ್ಡಲಾಗಿ ಕತ್ತರಿಸಿ ಪ್ಲಾಸ್ಟಿಕ್ ಚೀಲದಲ್ಲಿ ಸಿದ್ಧಪಡಿಸಿದ ಔಷಧ ಕಟ್ಟಿದ್ದಲ್ಲಿ ಬೇರಿನ ಮೂಲಕ ಔಷಧ ಗಿಡ ಸಂಪೂರ್ಣ ಆವರಿಸಲಿದೆ. ಔಷಧ ನೀಡಿದ 15 ದಿನಗಳ ಕಾಲ ಎಳನೀರು ಕಟಾವು ಮಾಡದಂತೆ ರೈತರು ಎಚ್ಚರವಹಿಸಬೇಕು’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>