<p><strong>ಮೈಸೂರು:</strong> ‘ಭಾರತೀಯ ಕೃಷಿಯು ಇಂದು ಕವಲು ದಾರಿಯಲ್ಲಿದೆ’ ಎಂದು ನಾಗನಹಳ್ಳಿ ಸಾವಯವ ಕೃಷಿ ಸಂಶೋಧನಾ ಕೇಂದ್ರದ ಹಿರಿಯ ಕ್ಷೇತ್ರ ಸೂಪರಿಂಟೆಂಡೆಂಟ್ ಡಾ.ಪಿ.ಪ್ರಕಾಶ್ ಹೇಳಿದರು.</p>.<p>ಅವಧೂತ ಗಣಪತಿ ಸಚ್ಚಿದಾನಂದ ಆಶ್ರಮದ ನಾದ ಮಂಟಪದಲ್ಲಿ ಭಾನುವಾರ ಆಯೋಜಿಸಿದ್ದ ‘ಕೃಷಿ ವಿಕಾಸ ಸಂಗಮ-ಸಾವಯವ ಕೃಷಿ’ ವಿಚಾರಸಂಕಿರಣದಲ್ಲಿ ‘ಸಾವಯವ ಕೃಷಿಯ ಅವಕಾಶಗಳು’ ಕುರಿತು ಅವರು ಮಾತನಾಡಿದರು.</p>.<p>‘ಮಣ್ಣಿನ ಆರೋಗ್ಯ ಕಾಪಾಡಿ, ಮುಂದಿನ ಪೀಳಿಗೆಗೆ ಉಳಿಸಬೇಕು. ಅದಕ್ಕಾಗಿ ಸಮಗ್ರ ಮತ್ತು ಸಾವಯವ ಕೃಷಿ ಮಾಡಬೇಕು’ ಎಂದು ಸಲಹೆ ನೀಡಿದರು.</p>.<p>‘ಕ್ರಿಮಿ, ಕೀಟ ಹಾಗೂ ಕಳೆನಾಶಕಗಳನ್ನು ವಿಪರೀತವಾಗಿ ಬಳಸುತ್ತಿರುವುದರಿಂದ ಮಣ್ಣಿನ ಫಲವತ್ತತೆ ನಾಶವಾಗಿ ಹಲವು ರೋಗಗಳಿಗೆ ಕಾರಣವಾಗುತ್ತಿದೆ’ ಎಂದು ತಿಳಿಸಿದರು.</p>.<p>‘ರಾಸಾಯನಿಕ ಗೊಬ್ಬರವನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸುವುದರಿಂದ ಹಲವು ರೀತಿಯ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ. ಜೈವಿಕ ಗುಣಧರ್ಮದಲ್ಲಿ ವ್ಯತ್ಯಾಸ ಆಗುತ್ತದೆ. ಮಣ್ಣಿನ ಫಲವತ್ತತೆ ಇಳಿಮುಖವಾಗುತ್ತದೆ’ ಎಂದು ಹೇಳಿದರು.</p>.<p>‘ಕೃಷಿ ಮಾಡುವವರು ಋಷಿಗಳಿದ್ದಂತೆ. ಇಡೀ ದೇಶ ರೈತರ ಮೇಲೆ ಅವಲಂಬನೆ ಆಗಿದ್ದರೂ ಅವರಿಗೆ ಸಿಗುವ ಗೌರವ ಕಡಿಮೆ’ ಎಂದು ಗಣಪತಿ ಸಚ್ಚಿದಾನಂದ ಆಶ್ರಮದ ದತ್ತವಿಜಯಾನಂದ ಸ್ವಾಮೀಜಿ ವಿಷಾದಿಸಿದರು.</p>.<p>‘ಪ್ರಪಂಚಕ್ಕೆ ವ್ಯವಸಾಯ ಹೇಳಿಕೊಟ್ಟ ದೇಶ ಭಾರತ. ಇಂದು ಬೇರೆಯವರು ಬಂದು ಕೃಷಿ ಮಾಡುವುದನ್ನು ಹೇಳಿಕೊಡುವ ಸ್ಥಿತಿ ನಿರ್ಮಾಣವಾಗಿದೆ’ ಎಂದರು.</p>.<p>ಡಾ.ಬಿ.ಎಸ್.ಚಂದ್ರಶೇಖರ್, ಸಹಜ ಸಮೃದ್ಧ ತಂಡದ ಕೃಷ್ಣಪ್ರಸಾದ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ‘ಭಾರತೀಯ ಕೃಷಿಯು ಇಂದು ಕವಲು ದಾರಿಯಲ್ಲಿದೆ’ ಎಂದು ನಾಗನಹಳ್ಳಿ ಸಾವಯವ ಕೃಷಿ ಸಂಶೋಧನಾ ಕೇಂದ್ರದ ಹಿರಿಯ ಕ್ಷೇತ್ರ ಸೂಪರಿಂಟೆಂಡೆಂಟ್ ಡಾ.ಪಿ.ಪ್ರಕಾಶ್ ಹೇಳಿದರು.</p>.<p>ಅವಧೂತ ಗಣಪತಿ ಸಚ್ಚಿದಾನಂದ ಆಶ್ರಮದ ನಾದ ಮಂಟಪದಲ್ಲಿ ಭಾನುವಾರ ಆಯೋಜಿಸಿದ್ದ ‘ಕೃಷಿ ವಿಕಾಸ ಸಂಗಮ-ಸಾವಯವ ಕೃಷಿ’ ವಿಚಾರಸಂಕಿರಣದಲ್ಲಿ ‘ಸಾವಯವ ಕೃಷಿಯ ಅವಕಾಶಗಳು’ ಕುರಿತು ಅವರು ಮಾತನಾಡಿದರು.</p>.<p>‘ಮಣ್ಣಿನ ಆರೋಗ್ಯ ಕಾಪಾಡಿ, ಮುಂದಿನ ಪೀಳಿಗೆಗೆ ಉಳಿಸಬೇಕು. ಅದಕ್ಕಾಗಿ ಸಮಗ್ರ ಮತ್ತು ಸಾವಯವ ಕೃಷಿ ಮಾಡಬೇಕು’ ಎಂದು ಸಲಹೆ ನೀಡಿದರು.</p>.<p>‘ಕ್ರಿಮಿ, ಕೀಟ ಹಾಗೂ ಕಳೆನಾಶಕಗಳನ್ನು ವಿಪರೀತವಾಗಿ ಬಳಸುತ್ತಿರುವುದರಿಂದ ಮಣ್ಣಿನ ಫಲವತ್ತತೆ ನಾಶವಾಗಿ ಹಲವು ರೋಗಗಳಿಗೆ ಕಾರಣವಾಗುತ್ತಿದೆ’ ಎಂದು ತಿಳಿಸಿದರು.</p>.<p>‘ರಾಸಾಯನಿಕ ಗೊಬ್ಬರವನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸುವುದರಿಂದ ಹಲವು ರೀತಿಯ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ. ಜೈವಿಕ ಗುಣಧರ್ಮದಲ್ಲಿ ವ್ಯತ್ಯಾಸ ಆಗುತ್ತದೆ. ಮಣ್ಣಿನ ಫಲವತ್ತತೆ ಇಳಿಮುಖವಾಗುತ್ತದೆ’ ಎಂದು ಹೇಳಿದರು.</p>.<p>‘ಕೃಷಿ ಮಾಡುವವರು ಋಷಿಗಳಿದ್ದಂತೆ. ಇಡೀ ದೇಶ ರೈತರ ಮೇಲೆ ಅವಲಂಬನೆ ಆಗಿದ್ದರೂ ಅವರಿಗೆ ಸಿಗುವ ಗೌರವ ಕಡಿಮೆ’ ಎಂದು ಗಣಪತಿ ಸಚ್ಚಿದಾನಂದ ಆಶ್ರಮದ ದತ್ತವಿಜಯಾನಂದ ಸ್ವಾಮೀಜಿ ವಿಷಾದಿಸಿದರು.</p>.<p>‘ಪ್ರಪಂಚಕ್ಕೆ ವ್ಯವಸಾಯ ಹೇಳಿಕೊಟ್ಟ ದೇಶ ಭಾರತ. ಇಂದು ಬೇರೆಯವರು ಬಂದು ಕೃಷಿ ಮಾಡುವುದನ್ನು ಹೇಳಿಕೊಡುವ ಸ್ಥಿತಿ ನಿರ್ಮಾಣವಾಗಿದೆ’ ಎಂದರು.</p>.<p>ಡಾ.ಬಿ.ಎಸ್.ಚಂದ್ರಶೇಖರ್, ಸಹಜ ಸಮೃದ್ಧ ತಂಡದ ಕೃಷ್ಣಪ್ರಸಾದ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>