ಬೆಳಿಗ್ಗೆ 6 ಗಂಟೆಯಿಂದ ದೇವರಿಗೆ ರುದ್ರಾಭಿಷೇಕ, ರುದ್ರ ಪಾರಾಯಣ, ಸಹಸ್ರನಾಮ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ಹಾಗೂ ಸಂಜೆ 6 ಗಂಟೆಗೆ ವಿವಿಧ ಪೂಜೆ, ಹೋಮ, ದೀಪ ಪೂಜೆ ಹಾಗೂ ಕೃತಿಕೋತ್ಸವ ನಂತರ ಉತ್ಸವ ನಡೆಯುತ್ತದೆ. ನಂತರ ಪ್ರಸಾದ ವಿನಿಯೋಗ ಇರುತ್ತದೆ ಎಂದು ದೇವಸ್ಥಾನದ ಅರ್ಚಕ ಎಸ್. ಉಮೇಶ್ ತಿಳಿಸಿದ್ದಾರೆ.