<p><strong>ಮೈಸೂರು:</strong> ‘ಮನುಷ್ಯನ ಸೇವೆಯಲ್ಲಿಯೇ ಧರ್ಮ ಮತ್ತು ಭಕ್ತಿ ಅಡಗಿದೆ’ ಎಂದು ಅವಧೂತ ದತ್ತ ಪೀಠ ದತ್ತ ವಿಜಯಾನಂದತೀರ್ಥ ಸ್ವಾಮೀಜಿ ಹೇಳಿದರು.</p>.<p>ಇಲ್ಲಿನ ರಾಮಕೃಷ್ಣ ಆಶ್ರಮದ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಭಾನುವಾರ ನಡೆದ ಸಂತ ಸಮಾಗಮದಲ್ಲಿ ‘ಮಾನವನ ದೈವೀಕರಣವೇ ಧರ್ಮದ ಉದ್ದೇಶ ಮತ್ತು ಶಕ್ತಿ’ ವಿಷಯ ಕುರಿತು ಮಾತನಾಡಿ, ‘ಧರ್ಮವು ಬಹಳ ಸೂಕ್ಷ ಹಾಗೂ ನಿಗೂಢ, ಅದನ್ನು ಅರ್ಥ ಮಾಡಿಕೊಳ್ಳುವುದೇ ನಮ್ಮ ಸಾಧನೆ’ ಎಂದರು.</p>.<p>‘ಧರ್ಮದಲ್ಲಿ ಎಲ್ಲವೂ ಪ್ರತಿಷ್ಠಾಪನೆಯಾಗಿದೆ. ವ್ಯಕ್ತಿಯ ಬೆಳವಣಿಗೆ ಹಾಗೂ ಸಮಷ್ಟಿಯ ಅಭಿವೃದ್ಧಿ ಎರಡೂ ಅಗತ್ಯ. ಯಾವಾಗ ಸಮಾಜದಲ್ಲಿ ಧರ್ಮ ಕಳೆಗುಂದುತ್ತದೆಯೋ ಆಗೆಲ್ಲಾ ಮಹಾನ್ ಚೇತನಗಳು ಅವತರಿಸಿ ಮನುಕುಲದ ಸೇವೆ ಮೂಲಕ ಧರ್ಮ ಜಾಗೃತಗೊಳಿಸಿವೆ. ರಾಮಕೃಷ್ಣ ಪರಮಹಂಸರೂ ಅಂತಹ ಮಹಾನ್ ಸಂತ’ ಎಂದು ಸ್ಮರಿಸಿದರು.</p>.<p>‘ಧರ್ಮ ಅನುಸರಿಸುವ ಸುಲಭ ಮಾರ್ಗವೆಂದರೆ, ಕಷ್ಟದಲ್ಲಿರುವವರಿಗೆ ಅಗತ್ಯವಾದದ್ದನ್ನು ದಾನ ಮಾಡುವುದು. ಇಂಥ ಅನೇಕ ಧರ್ಮ ಕಾರ್ಯಗಳನ್ನು ಮಾಡುವ ಮೂಲಕ ಮನುಷ್ಯ ರಥವನ್ನು ಹತ್ತಿರುವ ನಾವೆಲ್ಲರೂ ದೈವ ರಥ ಹತ್ತಬೇಕಿದೆ’ ಎಂದು ಆಶಿಸಿದರು.</p>.<p>ಉತ್ತರಪ್ರದೇಶ ಬೃಂದಾವನದ ಉದಾಸೀನ್ ಕಾರ್ಷ್ಣಿ ಆಶ್ರಮ ಪೀಠಾಧೀಶ ಸ್ವಾಮಿ ಗುರುಶರಣಾನಂದ ಮಾತನಾಡಿ, ‘ಭಕ್ತಿಯ ಹೊರತಾಗಿ ಜ್ಞಾನ ಪ್ರಾಪ್ತಿ ಆಗುವುದಿಲ್ಲ. ಮನುಷ್ಯ ಮತ್ತು ಭಗವಂತನ ಸಂಬಂಧ ತಾಯಿ, ಮಗುವಿನಂತಿರಬೇಕು. ಮೋಕ್ಷ ಪಡೆಯಲು ಯಾವುದೋ ಹೊಸ ಮಾರ್ಗಕ್ಕಾಗಿ ಒದ್ದಾಡಬೇಡಿ, ತಾಯಿಯೊಂದಿಗಿನ ಸಂಬಂಧವನ್ನೇ ದೇವರೆಡೆಗೆ ಪರಿವರ್ತಿಸಿ. ಆ ಪ್ರೀತಿಯೇ ಧರ್ಮ, ಭಕ್ತಿ’ ಎಂದರು.</p>.<p>ಅರುಣಾಚಲ ಪ್ರದೇಶದ ನರೋತ್ತಮ್ನಗರದ ರಾಮಕೃಷ್ಣ ಮಿಷನ್ನ ಸ್ವಾಮಿ ಅಚ್ಯುತೇಶಾನಂದ ಮಾತನಾಡಿದರು.</p>.<p>ರಾಮಕೃಷ್ಣ ಮಿಷನ್ ಅಧ್ಯಕ್ಷ, ಬೇಲೂರು ಮಠದ ಸ್ವಾಮಿ ಗೌತಮಾನಂದ ಸಾನ್ನಿಧ್ಯ ವಹಿಸಿದ್ದರು. ಮೈಸೂರು ಆಶ್ರಮದ ಅಧ್ಯಕ್ಷ ಸ್ವಾಮಿ ಮುಕ್ತಿದಾನಂದ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ‘ಮನುಷ್ಯನ ಸೇವೆಯಲ್ಲಿಯೇ ಧರ್ಮ ಮತ್ತು ಭಕ್ತಿ ಅಡಗಿದೆ’ ಎಂದು ಅವಧೂತ ದತ್ತ ಪೀಠ ದತ್ತ ವಿಜಯಾನಂದತೀರ್ಥ ಸ್ವಾಮೀಜಿ ಹೇಳಿದರು.</p>.<p>ಇಲ್ಲಿನ ರಾಮಕೃಷ್ಣ ಆಶ್ರಮದ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಭಾನುವಾರ ನಡೆದ ಸಂತ ಸಮಾಗಮದಲ್ಲಿ ‘ಮಾನವನ ದೈವೀಕರಣವೇ ಧರ್ಮದ ಉದ್ದೇಶ ಮತ್ತು ಶಕ್ತಿ’ ವಿಷಯ ಕುರಿತು ಮಾತನಾಡಿ, ‘ಧರ್ಮವು ಬಹಳ ಸೂಕ್ಷ ಹಾಗೂ ನಿಗೂಢ, ಅದನ್ನು ಅರ್ಥ ಮಾಡಿಕೊಳ್ಳುವುದೇ ನಮ್ಮ ಸಾಧನೆ’ ಎಂದರು.</p>.<p>‘ಧರ್ಮದಲ್ಲಿ ಎಲ್ಲವೂ ಪ್ರತಿಷ್ಠಾಪನೆಯಾಗಿದೆ. ವ್ಯಕ್ತಿಯ ಬೆಳವಣಿಗೆ ಹಾಗೂ ಸಮಷ್ಟಿಯ ಅಭಿವೃದ್ಧಿ ಎರಡೂ ಅಗತ್ಯ. ಯಾವಾಗ ಸಮಾಜದಲ್ಲಿ ಧರ್ಮ ಕಳೆಗುಂದುತ್ತದೆಯೋ ಆಗೆಲ್ಲಾ ಮಹಾನ್ ಚೇತನಗಳು ಅವತರಿಸಿ ಮನುಕುಲದ ಸೇವೆ ಮೂಲಕ ಧರ್ಮ ಜಾಗೃತಗೊಳಿಸಿವೆ. ರಾಮಕೃಷ್ಣ ಪರಮಹಂಸರೂ ಅಂತಹ ಮಹಾನ್ ಸಂತ’ ಎಂದು ಸ್ಮರಿಸಿದರು.</p>.<p>‘ಧರ್ಮ ಅನುಸರಿಸುವ ಸುಲಭ ಮಾರ್ಗವೆಂದರೆ, ಕಷ್ಟದಲ್ಲಿರುವವರಿಗೆ ಅಗತ್ಯವಾದದ್ದನ್ನು ದಾನ ಮಾಡುವುದು. ಇಂಥ ಅನೇಕ ಧರ್ಮ ಕಾರ್ಯಗಳನ್ನು ಮಾಡುವ ಮೂಲಕ ಮನುಷ್ಯ ರಥವನ್ನು ಹತ್ತಿರುವ ನಾವೆಲ್ಲರೂ ದೈವ ರಥ ಹತ್ತಬೇಕಿದೆ’ ಎಂದು ಆಶಿಸಿದರು.</p>.<p>ಉತ್ತರಪ್ರದೇಶ ಬೃಂದಾವನದ ಉದಾಸೀನ್ ಕಾರ್ಷ್ಣಿ ಆಶ್ರಮ ಪೀಠಾಧೀಶ ಸ್ವಾಮಿ ಗುರುಶರಣಾನಂದ ಮಾತನಾಡಿ, ‘ಭಕ್ತಿಯ ಹೊರತಾಗಿ ಜ್ಞಾನ ಪ್ರಾಪ್ತಿ ಆಗುವುದಿಲ್ಲ. ಮನುಷ್ಯ ಮತ್ತು ಭಗವಂತನ ಸಂಬಂಧ ತಾಯಿ, ಮಗುವಿನಂತಿರಬೇಕು. ಮೋಕ್ಷ ಪಡೆಯಲು ಯಾವುದೋ ಹೊಸ ಮಾರ್ಗಕ್ಕಾಗಿ ಒದ್ದಾಡಬೇಡಿ, ತಾಯಿಯೊಂದಿಗಿನ ಸಂಬಂಧವನ್ನೇ ದೇವರೆಡೆಗೆ ಪರಿವರ್ತಿಸಿ. ಆ ಪ್ರೀತಿಯೇ ಧರ್ಮ, ಭಕ್ತಿ’ ಎಂದರು.</p>.<p>ಅರುಣಾಚಲ ಪ್ರದೇಶದ ನರೋತ್ತಮ್ನಗರದ ರಾಮಕೃಷ್ಣ ಮಿಷನ್ನ ಸ್ವಾಮಿ ಅಚ್ಯುತೇಶಾನಂದ ಮಾತನಾಡಿದರು.</p>.<p>ರಾಮಕೃಷ್ಣ ಮಿಷನ್ ಅಧ್ಯಕ್ಷ, ಬೇಲೂರು ಮಠದ ಸ್ವಾಮಿ ಗೌತಮಾನಂದ ಸಾನ್ನಿಧ್ಯ ವಹಿಸಿದ್ದರು. ಮೈಸೂರು ಆಶ್ರಮದ ಅಧ್ಯಕ್ಷ ಸ್ವಾಮಿ ಮುಕ್ತಿದಾನಂದ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>