<p><strong>ಮೈಸೂರು:</strong> ಖ್ಯಾತ ಚಿತ್ರ ಕಲಾವಿದ ಎಸ್.ಆರ್.ಅಯ್ಯಂಗಾರ್ ಅವರು ರಚಿಸಿದ್ದ ಅಪರೂಪದ ಕಲಾಕೃತಿಗಳನ್ನು ನೋಡಿದ ವಿದ್ಯಾರ್ಥಿಗಳು, ತಮ್ಮ ಭಾವಭಿತ್ತಿಯನ್ನು ಸ್ನೇಹಿತರೊಂದಿಗೆ ಹಂಚಿಕೊಂಡರು. ಚಿತ್ರಗಳ ವಿಶಿಷ್ಟತೆಯನ್ನು ಪ್ರಾಧ್ಯಾಪಕರಿಂದ ಅರಿತು ವಿಶ್ಲೇಷಿಸಿದರು. </p>.<p>ಇಲ್ಲಿನ ಒಡೆಯರ್ ಸ್ಕೂಲ್ ಆಫ್ ಆರ್ಕಿಟೆಕ್ಚರ್ನಲ್ಲಿ ಬುಧವಾರ ಆರಂಭವಾದ ಮೂರು ದಿನಗಳ ಚಿತ್ರಕಲಾಕೃತಿಗಳ ಪ್ರದರ್ಶನವು ಅಪರೂಪದ ಸಂವಾದಕ್ಕೆ ಸಾಕ್ಷಿಯಾಯಿತು. ಮೈಸೂರು ಅರಮನೆಯ ಒಳಾಂಗಣದಲ್ಲಿನ ಕಲಾಕೃತಿಗಳನ್ನು ಸೃಷ್ಟಿಸಿದ ಎಸ್.ಆರ್.ಅಯ್ಯಂಗಾರ್ ಅವರ ಜೀವನ ಸಾಧನೆಯ ಪರಿಚಯವನ್ನು ವಿದ್ಯಾರ್ಥಿಗಳು ಮಾಡಿಕೊಂಡರು. </p>.<p>ಇದ್ದಿಲಿನಲ್ಲಿ 1926ರಲ್ಲಿ ಬರೆದ ‘ಗಹನವಾಗಿ ಯೋಚಿಸುತ್ತಿರುವ ವ್ಯಾಪಾರಿ’, ಜಲವರ್ಣದ ‘ನೀರಿನಲ್ಲಿ ಮಿನುಗುವ ಮೇಲುಕೋಟೆಯ ದೇಗುಲದ ಬಿಂಬ’, ‘ನಾಗರಿಕರನ್ನು ನದಿ ದಾಟಿಸುತ್ತಿರುವ ಅಂಬಿಗರು’, ‘ಕಾಡನ್ನು ಸೀಳಿದ ಹಾದಿ’, ‘ಭತ್ತದ ಬಯಲಿನ ಗದ್ದೆಗಳು’, ‘ಹಾಯಿ ದೋಣಿ’ ಕಲಾಕೃತಿಗಳು ಸೆಳೆದವು. </p>.<p>ಸೀತಕ್ಕ ಅಯ್ಯಂಗಾರ್, ಆರ್ಯಮೂರ್ತಿ, ರಾಮನ್, ಪದ್ಮ ಸೇರಿದಂತೆ ಹಲವು ತೈಲಚಿತ್ರದ ವಿವಿಧ ವ್ಯಕ್ತಿಚಿತ್ರಗಳು, ಎಸ್.ಆರ್.ಅಯ್ಯಂಗಾರ್ ಅವರು ಬರೆದುಕೊಂಡ ತಮ್ಮದೇ ಭಾವಚಿತ್ರವೂ ವಿಸ್ಮಯಗೊಳಿಸಿತು. ಬಣ್ಣದ ಬಳಕೆಯಲ್ಲಿ ವಯಸ್ಸು, ಆಲೋಚನೆ ಹಾಗೂ ಭಾವವನ್ನು ಅನಾವರಣಗೊಳಿಸಿದ ಜಾಣ್ಮೆಯನ್ನು ವಿದ್ಯಾರ್ಥಿಗಳು ವಿಶ್ಲೇಷಿಸಿದರು. </p>.<p>ಚಿತ್ರಕಲಾ ಪ್ರದರ್ಶನಕ್ಕೆ ಚಾಲನೆ ನೀಡಿದ ಗಂಜೀಫ ರಘುಪತಿ ಭಟ್ ಮಾತನಾಡಿ, ‘ಎಸ್.ಆರ್.ಅಯ್ಯಂಗಾರ್ ಅವರ ಕಲಾಕೃತಿಗಳು ಶ್ರೇಷ್ಠವಾದವು. ಅವುಗಳ ವಿಶಿಷ್ಟತೆಯನ್ನು ಅರಿಯಲು ಪ್ರದರ್ಶನ ಏರ್ಪಡಿಸಿರುವುದು ಸ್ವಾಗತಾರ್ಹ’ ಎಂದರು. </p>.<p>‘ಮೈಸೂರಿನಲ್ಲಿ ಕಲಾ ಸಂಸ್ಕೃತಿ ಉಳಿಸಬೇಕೆಂದರೆ ಅಗತ್ಯ ಪ್ರೋತ್ಸಾಹ ಬೇಕಿದೆ. ಈ ಜಾಗದಲ್ಲಿ ಶಾಶ್ವತವಾದ ಗ್ಯಾಲರಿಯನ್ನು ಮಾಡಿದರೆ, ಹಿರಿಯ ಕಲಾವಿದರು ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ’ ಎಂದು ಹೇಳಿದರು. </p>.<p>ಸಹಾಯಕ ಪ್ರಾಧ್ಯಾಪಕ ಮಧ್ವೇಶ್ ಎನ್.ಪಾಂಡುರಂಗಿ, ಒಡೆಯರ್ ಸ್ಕೂಲ್ ಆಫ್ ಆರ್ಕಿಟೆಕ್ಚರ್ನ ಸಂಸ್ಥಾಪಕ ಸದಸ್ಯ ಬಿ.ಮಂಜುನಾಥ್, ಅನಿಮೇಷನ್ ಕಲಾವಿದ ಹಾಗೂ ಎಸ್.ಆರ್.ಅಯ್ಯಂಗಾರ್ ಮೊಮ್ಮಗ ಅವನೀಶ್ ಪಾಠಕ್ ಪಾಲ್ಗೊಂಡಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ಖ್ಯಾತ ಚಿತ್ರ ಕಲಾವಿದ ಎಸ್.ಆರ್.ಅಯ್ಯಂಗಾರ್ ಅವರು ರಚಿಸಿದ್ದ ಅಪರೂಪದ ಕಲಾಕೃತಿಗಳನ್ನು ನೋಡಿದ ವಿದ್ಯಾರ್ಥಿಗಳು, ತಮ್ಮ ಭಾವಭಿತ್ತಿಯನ್ನು ಸ್ನೇಹಿತರೊಂದಿಗೆ ಹಂಚಿಕೊಂಡರು. ಚಿತ್ರಗಳ ವಿಶಿಷ್ಟತೆಯನ್ನು ಪ್ರಾಧ್ಯಾಪಕರಿಂದ ಅರಿತು ವಿಶ್ಲೇಷಿಸಿದರು. </p>.<p>ಇಲ್ಲಿನ ಒಡೆಯರ್ ಸ್ಕೂಲ್ ಆಫ್ ಆರ್ಕಿಟೆಕ್ಚರ್ನಲ್ಲಿ ಬುಧವಾರ ಆರಂಭವಾದ ಮೂರು ದಿನಗಳ ಚಿತ್ರಕಲಾಕೃತಿಗಳ ಪ್ರದರ್ಶನವು ಅಪರೂಪದ ಸಂವಾದಕ್ಕೆ ಸಾಕ್ಷಿಯಾಯಿತು. ಮೈಸೂರು ಅರಮನೆಯ ಒಳಾಂಗಣದಲ್ಲಿನ ಕಲಾಕೃತಿಗಳನ್ನು ಸೃಷ್ಟಿಸಿದ ಎಸ್.ಆರ್.ಅಯ್ಯಂಗಾರ್ ಅವರ ಜೀವನ ಸಾಧನೆಯ ಪರಿಚಯವನ್ನು ವಿದ್ಯಾರ್ಥಿಗಳು ಮಾಡಿಕೊಂಡರು. </p>.<p>ಇದ್ದಿಲಿನಲ್ಲಿ 1926ರಲ್ಲಿ ಬರೆದ ‘ಗಹನವಾಗಿ ಯೋಚಿಸುತ್ತಿರುವ ವ್ಯಾಪಾರಿ’, ಜಲವರ್ಣದ ‘ನೀರಿನಲ್ಲಿ ಮಿನುಗುವ ಮೇಲುಕೋಟೆಯ ದೇಗುಲದ ಬಿಂಬ’, ‘ನಾಗರಿಕರನ್ನು ನದಿ ದಾಟಿಸುತ್ತಿರುವ ಅಂಬಿಗರು’, ‘ಕಾಡನ್ನು ಸೀಳಿದ ಹಾದಿ’, ‘ಭತ್ತದ ಬಯಲಿನ ಗದ್ದೆಗಳು’, ‘ಹಾಯಿ ದೋಣಿ’ ಕಲಾಕೃತಿಗಳು ಸೆಳೆದವು. </p>.<p>ಸೀತಕ್ಕ ಅಯ್ಯಂಗಾರ್, ಆರ್ಯಮೂರ್ತಿ, ರಾಮನ್, ಪದ್ಮ ಸೇರಿದಂತೆ ಹಲವು ತೈಲಚಿತ್ರದ ವಿವಿಧ ವ್ಯಕ್ತಿಚಿತ್ರಗಳು, ಎಸ್.ಆರ್.ಅಯ್ಯಂಗಾರ್ ಅವರು ಬರೆದುಕೊಂಡ ತಮ್ಮದೇ ಭಾವಚಿತ್ರವೂ ವಿಸ್ಮಯಗೊಳಿಸಿತು. ಬಣ್ಣದ ಬಳಕೆಯಲ್ಲಿ ವಯಸ್ಸು, ಆಲೋಚನೆ ಹಾಗೂ ಭಾವವನ್ನು ಅನಾವರಣಗೊಳಿಸಿದ ಜಾಣ್ಮೆಯನ್ನು ವಿದ್ಯಾರ್ಥಿಗಳು ವಿಶ್ಲೇಷಿಸಿದರು. </p>.<p>ಚಿತ್ರಕಲಾ ಪ್ರದರ್ಶನಕ್ಕೆ ಚಾಲನೆ ನೀಡಿದ ಗಂಜೀಫ ರಘುಪತಿ ಭಟ್ ಮಾತನಾಡಿ, ‘ಎಸ್.ಆರ್.ಅಯ್ಯಂಗಾರ್ ಅವರ ಕಲಾಕೃತಿಗಳು ಶ್ರೇಷ್ಠವಾದವು. ಅವುಗಳ ವಿಶಿಷ್ಟತೆಯನ್ನು ಅರಿಯಲು ಪ್ರದರ್ಶನ ಏರ್ಪಡಿಸಿರುವುದು ಸ್ವಾಗತಾರ್ಹ’ ಎಂದರು. </p>.<p>‘ಮೈಸೂರಿನಲ್ಲಿ ಕಲಾ ಸಂಸ್ಕೃತಿ ಉಳಿಸಬೇಕೆಂದರೆ ಅಗತ್ಯ ಪ್ರೋತ್ಸಾಹ ಬೇಕಿದೆ. ಈ ಜಾಗದಲ್ಲಿ ಶಾಶ್ವತವಾದ ಗ್ಯಾಲರಿಯನ್ನು ಮಾಡಿದರೆ, ಹಿರಿಯ ಕಲಾವಿದರು ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ’ ಎಂದು ಹೇಳಿದರು. </p>.<p>ಸಹಾಯಕ ಪ್ರಾಧ್ಯಾಪಕ ಮಧ್ವೇಶ್ ಎನ್.ಪಾಂಡುರಂಗಿ, ಒಡೆಯರ್ ಸ್ಕೂಲ್ ಆಫ್ ಆರ್ಕಿಟೆಕ್ಚರ್ನ ಸಂಸ್ಥಾಪಕ ಸದಸ್ಯ ಬಿ.ಮಂಜುನಾಥ್, ಅನಿಮೇಷನ್ ಕಲಾವಿದ ಹಾಗೂ ಎಸ್.ಆರ್.ಅಯ್ಯಂಗಾರ್ ಮೊಮ್ಮಗ ಅವನೀಶ್ ಪಾಠಕ್ ಪಾಲ್ಗೊಂಡಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>