<p><strong>ಮೈಸೂರು:</strong> ಬೆಂಗಳೂರಿನ ಕರ್ನಾಟಕ ಗಾನಕಲಾ ಪರಿಷತ್ತು ಹಾಗೂ ಗಾನಭಾರತಿ ವೀಣೆ ಶೇಷಣ್ಣ ಭವನದ ಸಹಯೋಗದಲ್ಲಿ ನ.5ರಿಂದ 9ರವರೆಗೆ ಕುವೆಂಪುನಗರದ ಗಾನಭಾರತಿ ರಮಾಗೋವಿಂದ ಕಲಾ ವೇದಿಕೆಯಲ್ಲಿ 54ನೇ ಹಿರಿಯ ಸಂಗೀತ ವಿದ್ವಾಂಸರ ಮತ್ತು 36ನೇ ಯುವ ಸಂಗೀತ ವಿದ್ವಾಂಸರ ರಾಜ್ಯ ಸಂಗೀತ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ.</p>.<p>ಹಿರಿಯ ಸಂಗೀತ ವಿದ್ವಾಂಸರ ಸಮ್ಮೇಳನದ ಅಧ್ಯಕ್ಷರನನ್ನಾಗಿ ಸಿ.ಎ. ಶ್ರೀಧರ, ಯುವ ಸಂಗೀತ ವಿದ್ವಾಂಸರ ಸಮ್ಮೇಳನದ ಅಧ್ಯಕ್ಷರನ್ನಾಗಿ ಮತ್ತೂರು ಆರ್. ಶ್ರೀಧರ್ ಮತ್ತು ತಜ್ಞರ ಸಮಿತಿಯ ಅಧ್ಯಕ್ಷರನ್ನಾಗಿ ಕಲಾವತಿ ಅವಧೂತ್ ಅವರನ್ನು ಆಯ್ಕೆ ಮಾಡಲಾಗಿದೆ.</p>.<p>5ರಂದು ಬೆಳಿಗ್ಗೆ 9.30ರಿಂದ ಹರೀಶ್ ಪಾಂಡವ್ ಅವರಿಂದ ಸ್ಯಾಕ್ಸೊಫೋನ್ ವಾದನ ಪ್ರಸ್ತುತಿ ಇದೆ. 10.30ಕ್ಕೆ ಉದ್ಘಾಟನೆಯನ್ನು ಸಾಹಿತಿ ಕಬ್ಬಿನಾಲೆ ವಸಂತ ಭಾರದ್ವಾಜ್ ಉದ್ಘಾಟಿಸುವರು. ಸಂಜೆ 4.15ಕ್ಕೆ ಸಂಗೀತ ಕಾರ್ಯಕ್ರಮ ನಡೆಯಲಿದೆ.</p>.<p>ನ.6ರಿಂದ 8ರವರೆಗೆ ನಿತ್ಯ ಬೆಳಿಗ್ಗೆ 10ರಿಂದ ವಿದ್ವತ್ ಗೋಷ್ಠಿ ನಡೆಯಲಿದ್ದು, ತಜ್ಞರು ವಿವಿಧ ವಿಷಯಗಳನ್ನು ಮಂಡಿಸುವರು. ಸಂಜೆ 4.15ಕ್ಕೆ ಸಂಗೀತ ಕಾರ್ಯಕ್ರಮ ಜರುಗಲಿದೆ. </p>.<p>9ರಂದು ಬೆಳಿಗ್ಗೆ 10.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಸಿ.ಎ. ಶ್ರೀಧರ ಅವರಿಗೆ ‘ಗಾನಕಲಾಭೂಷಣ’ ಬಿರುದು ಮತ್ತು ‘ವಾದಿರಾಜ ಪ್ರಶಸ್ತಿ’ ಹಾಗೂ ಮತ್ತೂರು ಆರ್. ಶ್ರೀಧರ್ ಅವರಿಗೆ ‘ಗಾನಕಲಾಶ್ರೀ’ ಬಿರುದು ಹಾಗೂ ‘ರಾಮಸುಧಾ’ ಪ್ರಶಸ್ತಿ ಪ್ರದಾನ ಮಾಡಲಾಗುವುದು.</p>.<p>ಉಪ ಲೋಕಾಯುಕ್ತ ನ್ಯಾ.ಕೆ.ಎನ್. ಫಣೀಂದ್ರ ಹಾಗೂ ಬೆಂಗಳೂರಿನ ವಾಣಿ ವಿದ್ಯಾಕೇಂದ್ರದ ವ್ಯವಸ್ಥಾಪಕ ಟ್ರಸ್ಟಿ ಆರ್.ಎಚ್. ಶಾರದಾಪ್ರಸಾದ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.</p>.<p>ಸಂಗೀತ ಸಾಧನೆಗಾಗಿ ಕೆ.ಆರ್. ವೆಂಕಟೇಶ್, ಎಲ್. ಲೀಲಾ, ಕೋವಿಲಾಡಿ ಆರ್. ಕಲಾ, ಹೊಸಹಳ್ಳಿ ಕೆ.ಸುಬ್ಬರಾವ್, ಎಂ.ಆರ್. ಅನಂತರಾಜು ಹಾಗೂ ಎಚ್.ಎನ್. ಸುರೇಶ್ ಅವರಿಗೆ ‘ವಿದ್ವತ್ ಸದಸ್’ ಸನ್ಮಾನ ನೀಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ಬೆಂಗಳೂರಿನ ಕರ್ನಾಟಕ ಗಾನಕಲಾ ಪರಿಷತ್ತು ಹಾಗೂ ಗಾನಭಾರತಿ ವೀಣೆ ಶೇಷಣ್ಣ ಭವನದ ಸಹಯೋಗದಲ್ಲಿ ನ.5ರಿಂದ 9ರವರೆಗೆ ಕುವೆಂಪುನಗರದ ಗಾನಭಾರತಿ ರಮಾಗೋವಿಂದ ಕಲಾ ವೇದಿಕೆಯಲ್ಲಿ 54ನೇ ಹಿರಿಯ ಸಂಗೀತ ವಿದ್ವಾಂಸರ ಮತ್ತು 36ನೇ ಯುವ ಸಂಗೀತ ವಿದ್ವಾಂಸರ ರಾಜ್ಯ ಸಂಗೀತ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ.</p>.<p>ಹಿರಿಯ ಸಂಗೀತ ವಿದ್ವಾಂಸರ ಸಮ್ಮೇಳನದ ಅಧ್ಯಕ್ಷರನನ್ನಾಗಿ ಸಿ.ಎ. ಶ್ರೀಧರ, ಯುವ ಸಂಗೀತ ವಿದ್ವಾಂಸರ ಸಮ್ಮೇಳನದ ಅಧ್ಯಕ್ಷರನ್ನಾಗಿ ಮತ್ತೂರು ಆರ್. ಶ್ರೀಧರ್ ಮತ್ತು ತಜ್ಞರ ಸಮಿತಿಯ ಅಧ್ಯಕ್ಷರನ್ನಾಗಿ ಕಲಾವತಿ ಅವಧೂತ್ ಅವರನ್ನು ಆಯ್ಕೆ ಮಾಡಲಾಗಿದೆ.</p>.<p>5ರಂದು ಬೆಳಿಗ್ಗೆ 9.30ರಿಂದ ಹರೀಶ್ ಪಾಂಡವ್ ಅವರಿಂದ ಸ್ಯಾಕ್ಸೊಫೋನ್ ವಾದನ ಪ್ರಸ್ತುತಿ ಇದೆ. 10.30ಕ್ಕೆ ಉದ್ಘಾಟನೆಯನ್ನು ಸಾಹಿತಿ ಕಬ್ಬಿನಾಲೆ ವಸಂತ ಭಾರದ್ವಾಜ್ ಉದ್ಘಾಟಿಸುವರು. ಸಂಜೆ 4.15ಕ್ಕೆ ಸಂಗೀತ ಕಾರ್ಯಕ್ರಮ ನಡೆಯಲಿದೆ.</p>.<p>ನ.6ರಿಂದ 8ರವರೆಗೆ ನಿತ್ಯ ಬೆಳಿಗ್ಗೆ 10ರಿಂದ ವಿದ್ವತ್ ಗೋಷ್ಠಿ ನಡೆಯಲಿದ್ದು, ತಜ್ಞರು ವಿವಿಧ ವಿಷಯಗಳನ್ನು ಮಂಡಿಸುವರು. ಸಂಜೆ 4.15ಕ್ಕೆ ಸಂಗೀತ ಕಾರ್ಯಕ್ರಮ ಜರುಗಲಿದೆ. </p>.<p>9ರಂದು ಬೆಳಿಗ್ಗೆ 10.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಸಿ.ಎ. ಶ್ರೀಧರ ಅವರಿಗೆ ‘ಗಾನಕಲಾಭೂಷಣ’ ಬಿರುದು ಮತ್ತು ‘ವಾದಿರಾಜ ಪ್ರಶಸ್ತಿ’ ಹಾಗೂ ಮತ್ತೂರು ಆರ್. ಶ್ರೀಧರ್ ಅವರಿಗೆ ‘ಗಾನಕಲಾಶ್ರೀ’ ಬಿರುದು ಹಾಗೂ ‘ರಾಮಸುಧಾ’ ಪ್ರಶಸ್ತಿ ಪ್ರದಾನ ಮಾಡಲಾಗುವುದು.</p>.<p>ಉಪ ಲೋಕಾಯುಕ್ತ ನ್ಯಾ.ಕೆ.ಎನ್. ಫಣೀಂದ್ರ ಹಾಗೂ ಬೆಂಗಳೂರಿನ ವಾಣಿ ವಿದ್ಯಾಕೇಂದ್ರದ ವ್ಯವಸ್ಥಾಪಕ ಟ್ರಸ್ಟಿ ಆರ್.ಎಚ್. ಶಾರದಾಪ್ರಸಾದ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.</p>.<p>ಸಂಗೀತ ಸಾಧನೆಗಾಗಿ ಕೆ.ಆರ್. ವೆಂಕಟೇಶ್, ಎಲ್. ಲೀಲಾ, ಕೋವಿಲಾಡಿ ಆರ್. ಕಲಾ, ಹೊಸಹಳ್ಳಿ ಕೆ.ಸುಬ್ಬರಾವ್, ಎಂ.ಆರ್. ಅನಂತರಾಜು ಹಾಗೂ ಎಚ್.ಎನ್. ಸುರೇಶ್ ಅವರಿಗೆ ‘ವಿದ್ವತ್ ಸದಸ್’ ಸನ್ಮಾನ ನೀಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>