<p><strong>ಸುತ್ತೂರು (ಮೈಸೂರು ಜಿಲ್ಲೆ):</strong> ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವದ ಭಾಗವಾಗಿ ಶುಕ್ರವಾರ ಇಲ್ಲಿ ನಡೆದ ಸಾಮೂಹಿಕ ವಿವಾಹದಲ್ಲಿ 11 ಅಂತರ್ಜಾತಿ, 3 ಮರು ಮದುವೆ ಸೇರಿ 135 ಜೋಡಿಗಳು ದಾಂಪತ್ಯ ಬದುಕಿಗೆ ಕಾಲಿಟ್ಟವು. </p>.<p>4 ವೀರಶೈವ ಲಿಂಗಾಯತ, 84 ಪರಿಶಿಷ್ಟ ಜಾತಿ, 15 ಪರಿಶಿಷ್ಟ ಪಂಗಡ, 21 ಹಿಂದುಳಿದ ವರ್ಗ, 3 ಅಂಗವಿಕಲ, 5 ತಮಿಳುನಾಡಿನ ಜೋಡಿಗಳು ಮಧ್ಯಾಹ್ನ 12.10ಕ್ಕೆ ಮಂಗಳವಾದ್ಯ ಮೊಳಗುತ್ತಿದ್ದಂತೆ ಹೊಸ ಬಾಳಿಗೆ ಕಾಲಿಟ್ಟರು. ಹರುಷದ ಹೊನಲು ಹರಿದಿತ್ತು. ಸರಳ ವಿವಾಹದ ಮೌಲ್ಯವನ್ನು ಸಾರಿದ ಸಂತಸದ ಜೊತೆಗೆ ಕಣ್ಗಳು ತುಂಬಿಬಂದವು. ಕನ್ನಡ, ಮಲಯಾಳ, ತಮಿಳು ಸೇರಿ ಬಹುಭಾಷಿಕ ದಂಪತಿಗಳೂ ಇದ್ದದ್ದು, ವೈವಿಧ್ಯವನ್ನು ಸಾರಿತು. </p>.<p>ಚಾಮರಾಜನಗರದ ಕಾವುದವಾಡಿಯ ಟಿ.ಎನ್.ಸುದೀಪ್, ತಮಿಳುನಾಡಿನ ತಿರುಪ್ಪೂರಿನ ಬಿ.ಬೃಂದಾ ಅವರನ್ನು ಕೈಹಿಡಿದರು. ಬೃಂದಾ ಮಾತೃಭಾಷೆ ಮಲಯಾಳ, ಕೆಲಸಕ್ಕೆಂದು ಸುದೀಪ್ ತಿರುಪ್ಪೂರಿಗೆ ಹೋಗಿದ್ದಾಗ ಪ್ರೀತಿ ಮೂಡಿತ್ತು. ‘ಇಬ್ಬರ ಭಾಷೆ ಬೇರೆ. ಭಾಷೆ ಅರ್ಥವಾಗಲು ಕಷ್ಟವಾದರೂ ಪ್ರೀತಿಯ ಭಾಷೆ ಅರಿತೆವು’ ಎಂದು ಸುದೀಪ್ ನಕ್ಕರು. </p>.<p>ಕಲಬುರಗಿಯ ಅಫ್ಜಲ್ಪುರದ ದಣ್ಣೂರು ಗ್ರಾಮದ ಆನಂದ, ಮೈಸೂರಿನ ಹೆಬ್ಬಾಳದ ವೈಷ್ಣವಿ ಅವರನ್ನು ವರಿಸಿದರು. ಇವರದ್ದೂ ಅಂತರ್ಜಾತಿ ವಿವಾಹ. ‘5 ವರ್ಷದಿಂದ ಪ್ರೀತಿಸುತ್ತಿದ್ದೆವು. ನಾನು ಟೈಲರಿಂಗ್ ಮಾಡುತ್ತಿದ್ದೇನೆ. ಆನಂದ್ ಪೇಂಟರ್. ಮನೆಯವರನ್ನು ಒಪ್ಪಿಸಿ ಶ್ರೀಕ್ಷೇತ್ರದಲ್ಲಿ ಮದುವೆ ಆದೆವು’ ಎಂದು ನುಡಿದರು. </p>.<p>ಚಾಮರಾಜನಗರ ತಾಲ್ಲೂಕು ರಾಮಸಮುದ್ರದ ಮಹೇಶ್ ಮತ್ತು ಚಂದ್ರಮ್ಮ ಅವರಿಗೆ 2ನೇ ಮದುವೆ. ‘ಮೊದಲ ಪತಿ ನಿಧನರಾಗಿದ್ದರು. ಜೀವನ ನಡೆಸುವುದು ಕಷ್ಟವಿತ್ತು. ಈ ವೇಳೆ ಮಹೇಶ್ ಸಿಕ್ಕರು’ ಎಂದು ಚಂದ್ರಮ್ಮ ಹೇಳಿದರು.</p>.<p>ದೃಷ್ಟಿದೋಷವುಳ್ಳ ಎಚ್.ಡಿ.ಕೋಟೆ ತಾಲ್ಲೂಕಿನ ನೇರಳೆ ಗ್ರಾಮದ ರೇಖಾ, ಸರಗೂರು ತಾಲ್ಲೂಕಿನ ಹೂವಿನಕೊಳ ಗ್ರಾಮದ ಎಚ್.ಎಂ.ಸುರೇಶ, ಕೊಳ್ಳೇಗಾಲದ ಹೇಮಾವತಿ– ಹನೂರಿನ ಜಡೇಸ್ವಾಮಿ, ಚಾಮರಾಜನಗರದ ಸಾಕಮ್ಮ– ನಂಜನಗೂಡಿನ ಚಿನ್ನಸ್ವಾಮಿ ಒಬ್ಬರಿಗೊಬ್ಬರು ಆಸರೆಯಾದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸುತ್ತೂರು (ಮೈಸೂರು ಜಿಲ್ಲೆ):</strong> ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವದ ಭಾಗವಾಗಿ ಶುಕ್ರವಾರ ಇಲ್ಲಿ ನಡೆದ ಸಾಮೂಹಿಕ ವಿವಾಹದಲ್ಲಿ 11 ಅಂತರ್ಜಾತಿ, 3 ಮರು ಮದುವೆ ಸೇರಿ 135 ಜೋಡಿಗಳು ದಾಂಪತ್ಯ ಬದುಕಿಗೆ ಕಾಲಿಟ್ಟವು. </p>.<p>4 ವೀರಶೈವ ಲಿಂಗಾಯತ, 84 ಪರಿಶಿಷ್ಟ ಜಾತಿ, 15 ಪರಿಶಿಷ್ಟ ಪಂಗಡ, 21 ಹಿಂದುಳಿದ ವರ್ಗ, 3 ಅಂಗವಿಕಲ, 5 ತಮಿಳುನಾಡಿನ ಜೋಡಿಗಳು ಮಧ್ಯಾಹ್ನ 12.10ಕ್ಕೆ ಮಂಗಳವಾದ್ಯ ಮೊಳಗುತ್ತಿದ್ದಂತೆ ಹೊಸ ಬಾಳಿಗೆ ಕಾಲಿಟ್ಟರು. ಹರುಷದ ಹೊನಲು ಹರಿದಿತ್ತು. ಸರಳ ವಿವಾಹದ ಮೌಲ್ಯವನ್ನು ಸಾರಿದ ಸಂತಸದ ಜೊತೆಗೆ ಕಣ್ಗಳು ತುಂಬಿಬಂದವು. ಕನ್ನಡ, ಮಲಯಾಳ, ತಮಿಳು ಸೇರಿ ಬಹುಭಾಷಿಕ ದಂಪತಿಗಳೂ ಇದ್ದದ್ದು, ವೈವಿಧ್ಯವನ್ನು ಸಾರಿತು. </p>.<p>ಚಾಮರಾಜನಗರದ ಕಾವುದವಾಡಿಯ ಟಿ.ಎನ್.ಸುದೀಪ್, ತಮಿಳುನಾಡಿನ ತಿರುಪ್ಪೂರಿನ ಬಿ.ಬೃಂದಾ ಅವರನ್ನು ಕೈಹಿಡಿದರು. ಬೃಂದಾ ಮಾತೃಭಾಷೆ ಮಲಯಾಳ, ಕೆಲಸಕ್ಕೆಂದು ಸುದೀಪ್ ತಿರುಪ್ಪೂರಿಗೆ ಹೋಗಿದ್ದಾಗ ಪ್ರೀತಿ ಮೂಡಿತ್ತು. ‘ಇಬ್ಬರ ಭಾಷೆ ಬೇರೆ. ಭಾಷೆ ಅರ್ಥವಾಗಲು ಕಷ್ಟವಾದರೂ ಪ್ರೀತಿಯ ಭಾಷೆ ಅರಿತೆವು’ ಎಂದು ಸುದೀಪ್ ನಕ್ಕರು. </p>.<p>ಕಲಬುರಗಿಯ ಅಫ್ಜಲ್ಪುರದ ದಣ್ಣೂರು ಗ್ರಾಮದ ಆನಂದ, ಮೈಸೂರಿನ ಹೆಬ್ಬಾಳದ ವೈಷ್ಣವಿ ಅವರನ್ನು ವರಿಸಿದರು. ಇವರದ್ದೂ ಅಂತರ್ಜಾತಿ ವಿವಾಹ. ‘5 ವರ್ಷದಿಂದ ಪ್ರೀತಿಸುತ್ತಿದ್ದೆವು. ನಾನು ಟೈಲರಿಂಗ್ ಮಾಡುತ್ತಿದ್ದೇನೆ. ಆನಂದ್ ಪೇಂಟರ್. ಮನೆಯವರನ್ನು ಒಪ್ಪಿಸಿ ಶ್ರೀಕ್ಷೇತ್ರದಲ್ಲಿ ಮದುವೆ ಆದೆವು’ ಎಂದು ನುಡಿದರು. </p>.<p>ಚಾಮರಾಜನಗರ ತಾಲ್ಲೂಕು ರಾಮಸಮುದ್ರದ ಮಹೇಶ್ ಮತ್ತು ಚಂದ್ರಮ್ಮ ಅವರಿಗೆ 2ನೇ ಮದುವೆ. ‘ಮೊದಲ ಪತಿ ನಿಧನರಾಗಿದ್ದರು. ಜೀವನ ನಡೆಸುವುದು ಕಷ್ಟವಿತ್ತು. ಈ ವೇಳೆ ಮಹೇಶ್ ಸಿಕ್ಕರು’ ಎಂದು ಚಂದ್ರಮ್ಮ ಹೇಳಿದರು.</p>.<p>ದೃಷ್ಟಿದೋಷವುಳ್ಳ ಎಚ್.ಡಿ.ಕೋಟೆ ತಾಲ್ಲೂಕಿನ ನೇರಳೆ ಗ್ರಾಮದ ರೇಖಾ, ಸರಗೂರು ತಾಲ್ಲೂಕಿನ ಹೂವಿನಕೊಳ ಗ್ರಾಮದ ಎಚ್.ಎಂ.ಸುರೇಶ, ಕೊಳ್ಳೇಗಾಲದ ಹೇಮಾವತಿ– ಹನೂರಿನ ಜಡೇಸ್ವಾಮಿ, ಚಾಮರಾಜನಗರದ ಸಾಕಮ್ಮ– ನಂಜನಗೂಡಿನ ಚಿನ್ನಸ್ವಾಮಿ ಒಬ್ಬರಿಗೊಬ್ಬರು ಆಸರೆಯಾದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>