<p><strong>ಮೈಸೂರು:</strong> ರಷ್ಯಾ–ಉಕ್ರೇನ್ ಯುದ್ಧದಿಂದಾಗಿ ಗಗನಮುಖಿ ಆಗಿದ್ದ ಅಡುಗೆ ಎಣ್ಣೆ ದರವು ನಿರಂತರವಾಗಿ ಇಳಿಕೆ ಆಗುತ್ತಿದ್ದು, ಗ್ರಾಹಕರ ಮೇಲಿನ ಹೊರೆ ತಗ್ಗಿದೆ.</p>.<p>ಮಾರುಕಟ್ಟೆಯಲ್ಲಿ ಸದ್ಯ ರಿಫೈನ್ಡ್ ಸೂರ್ಯಕಾಂತಿ ಎಣ್ಣೆಯ ದರವು ಪ್ರತಿ ಲೀಟರ್ನ ಪ್ಯಾಕೆಟ್ಗೆ ₹115–130ರ ದರದಲ್ಲಿ ಮಾರಾಟ ನಡೆದಿದೆ. ಮಾಲ್ಗಳಲ್ಲಿ ಸನ್ಪ್ಯೂರ್, ಫ್ರೀಡಂ, ಸನ್ಡ್ರಾಪ್, ಫಾರ್ಚುನ್ ಮೊದಲಾದ ಬ್ರಾಂಡ್ಗಳ ಎಣ್ಣೆ ದರವು ಇದಕ್ಕಿಂತ ಕಡಿಮೆ ದರದಲ್ಲಿ ಮಾರಾಟ ಆಗುತ್ತಿದೆ. ಪ್ಯಾಕೆಟ್ ರೂಪದ ತಾಳೆ ಎಣ್ಣೆ ದರ ಸಹ ಲೀಟರ್ಗೆ ₹80–90ಕ್ಕೆ ಇಳಿದಿದೆ.</p>.<p>ರಷ್ಯಾ ಉಕ್ರೇನ್ ಯುದ್ಧದ ಸಂದರ್ಭ ಭಾರತಕ್ಕೆ ಆಮದು ಆಗುತ್ತಿದ್ದ ಸೂರ್ಯಕಾಂತಿ ಎಣ್ಣೆ ಪೂರೈಕೆಯಲ್ಲಿ ವ್ಯತ್ಯಾಸ ಆಗಿತ್ತು. ಈ ಹಿನ್ನೆಲೆಯಲ್ಲಿ ರಿಫೈನ್ಡ್ ಎಣ್ಣೆ ಬೆಲೆಯೂ ಗಗನಮುಖಿ ಆಗಿದ್ದು, ಲೀಟರ್ಗೆ ₹180–200ರವರೆಗೂ ಏರಿಕೆ ಆಗಿತ್ತು. ಇದೀಗ ಇದರ ಬೆಲೆ ನಿಧಾನವಾಗಿ ಇಳಿಯತೊಡಗಿದೆ.</p>.<p>ಆದಾಗ್ಯೂ ಗಾಣದ ಮಾದರಿಯಲ್ಲಿ ತೆಗೆಯುವ ಎಣ್ಣೆಯ ಧಾರಣೆಯಲ್ಲಿ ಹೆಚ್ಚು ವ್ಯತ್ಯಾಸ ಆಗಿಲ್ಲ. ಗಾಣದಲ್ಲಿನ ಸೂರ್ಯಕಾಂತಿ ಎಣ್ಣೆ ಲೀಟರ್ಗೆ ₹330 ಹಾಗೂ ಕಡಲೆಕಾಯಿ ಎಣ್ಣೆ ₹280–300ರಂತೆ ಮಾರಾಟ ನಡೆದಿದೆ.</p>.<p>ಟೊಮೆಟೊ ದಿಢೀರ್ ತುಟ್ಟಿ: ಎರಡು ವಾರದ ಹಿಂದಷ್ಟೇ ಪ್ರತಿ ಕೆ.ಜಿ.ಗೆ ₹15–20ರಂತೆ ಮಾರಾಟ ನಡೆದಿದ್ದ ಟೊಮೆಟೊ ಧಾರಣೆಯಲ್ಲಿ ಕಳೆದ ಮೂರ್ನಾಲ್ಕು ದಿನದಿಂದ ದಿಢೀರ್ ಏರಿಕೆಯಾಗುತ್ತಿರುವುದು ಅಚ್ಚರಿ ಉಂಟು ಮಾಡಿದೆ. ಬೆಲೆ ಕುಸಿತದಿಂದ ರೈತರು ಟೊಮೆಟೊ ಬೆಳೆಯಲು ನಿರಾಸಕ್ತಿ ತೋರಿದ್ದು, ಮಾರುಕಟ್ಟೆಗೆ ಉತ್ಪನ್ನದ ಆವಕ ತಗ್ಗಿದ ಹಿನ್ನೆಲೆಯಲ್ಲಿ ಬೆಲೆ ಹೆಚ್ಚಳವಾಗಿದೆ.</p>.<p>ಕಳೆದ ವಾರವಷ್ಟೇ ಮಾರುಕಟ್ಟೆಯಲ್ಲಿ ಟೊಮೆಟೊ ₹40ರಂತೆ ಮಾರಾಟ ಆಗಿತ್ತು. ಈಗ ಎಪಿಎಂಸಿಯಲ್ಲಿನ ಸಗಟು ದರವೇ ₹50–55ಕ್ಕೆ ತಲುಪಿದೆ. ಮಳೆ ಕಡಿಮೆ ಆಗಿರುವುದು ಮತ್ತು ರೋಗ ಬಾಧೆಯ ಕಾರಣಕ್ಕೆ ಉತ್ಪನ್ನ ಕಡಿಮೆ ಆಗಿದೆ. ಮಳೆಗಾಲದಲ್ಲಿ ಟೊಮೆಟೊ ಕಳೆಯುತ್ತದೆ ಎಂಬ ಕಾರಣಕ್ಕೂ ಕೆಲ ರೈತರು ಬೆಳೆಯಲು ಮುಂದಾಗದೇ ಇರುವುದು ಇದಕ್ಕೆ ಕಾರಣ ಎಂದು ವರ್ತಕರು ಹೇಳುತ್ತಾರೆ.</p>.<p>ಟೊಮೆಟೊ ಜೊತೆಗೆ ಹಸಿ ಮೆಣಸಿನಕಾಯಿ ಸಹ ಈ ವಾರ ಗ್ರಾಹಕರಿಗೆ ಖಾರವಾಗಿದೆ. ಶುಂಠಿ, ಕ್ಯಾರೆಟ್ ಆದಿಯಾಗಿ ಹೆಚ್ಚಿನ ತರಕಾರಿಗಳು ಏರಿಕೆಯ ಹಾದಿಯಲ್ಲಿವೆ. ತರಕಾರಿಗೆ ಹೋಲಿಸಿದರೆ ಈ ಬಾರಿ ಸೊಪ್ಪು ಹೆಚ್ಚು ದುಬಾರಿ ಆಗಿಲ್ಲ. ಸಣ್ಣ ಕೊತ್ತಂಬರಿ ಕಟ್ಟು ₹10ಕ್ಕೆ 3, ಕೀರೆ, ಕಿಲ್ಕೀರೆ, ದಂಟು ₹10ಕ್ಕೆ 4ರಂತೆ ಮಾರಾಟ ನಡೆದಿದೆ. ಸಬ್ಬಸ್ಸಿಗೆ ಮತ್ತು ಮೆಂತ್ಯೆ ಮಾತ್ರ ತುಟ್ಟಿಯಾಗಿಯೇ ಉಳಿದಿವೆ. ಮಳೆ ಹೆಚ್ಚಾದಲ್ಲಿ ಸೊಪ್ಪಿನ ಬೆಲೆಯೂ ಏರುವ ಸಾಧ್ಯತೆ ಇದೆ.</p>.<p>undefined undefined</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ರಷ್ಯಾ–ಉಕ್ರೇನ್ ಯುದ್ಧದಿಂದಾಗಿ ಗಗನಮುಖಿ ಆಗಿದ್ದ ಅಡುಗೆ ಎಣ್ಣೆ ದರವು ನಿರಂತರವಾಗಿ ಇಳಿಕೆ ಆಗುತ್ತಿದ್ದು, ಗ್ರಾಹಕರ ಮೇಲಿನ ಹೊರೆ ತಗ್ಗಿದೆ.</p>.<p>ಮಾರುಕಟ್ಟೆಯಲ್ಲಿ ಸದ್ಯ ರಿಫೈನ್ಡ್ ಸೂರ್ಯಕಾಂತಿ ಎಣ್ಣೆಯ ದರವು ಪ್ರತಿ ಲೀಟರ್ನ ಪ್ಯಾಕೆಟ್ಗೆ ₹115–130ರ ದರದಲ್ಲಿ ಮಾರಾಟ ನಡೆದಿದೆ. ಮಾಲ್ಗಳಲ್ಲಿ ಸನ್ಪ್ಯೂರ್, ಫ್ರೀಡಂ, ಸನ್ಡ್ರಾಪ್, ಫಾರ್ಚುನ್ ಮೊದಲಾದ ಬ್ರಾಂಡ್ಗಳ ಎಣ್ಣೆ ದರವು ಇದಕ್ಕಿಂತ ಕಡಿಮೆ ದರದಲ್ಲಿ ಮಾರಾಟ ಆಗುತ್ತಿದೆ. ಪ್ಯಾಕೆಟ್ ರೂಪದ ತಾಳೆ ಎಣ್ಣೆ ದರ ಸಹ ಲೀಟರ್ಗೆ ₹80–90ಕ್ಕೆ ಇಳಿದಿದೆ.</p>.<p>ರಷ್ಯಾ ಉಕ್ರೇನ್ ಯುದ್ಧದ ಸಂದರ್ಭ ಭಾರತಕ್ಕೆ ಆಮದು ಆಗುತ್ತಿದ್ದ ಸೂರ್ಯಕಾಂತಿ ಎಣ್ಣೆ ಪೂರೈಕೆಯಲ್ಲಿ ವ್ಯತ್ಯಾಸ ಆಗಿತ್ತು. ಈ ಹಿನ್ನೆಲೆಯಲ್ಲಿ ರಿಫೈನ್ಡ್ ಎಣ್ಣೆ ಬೆಲೆಯೂ ಗಗನಮುಖಿ ಆಗಿದ್ದು, ಲೀಟರ್ಗೆ ₹180–200ರವರೆಗೂ ಏರಿಕೆ ಆಗಿತ್ತು. ಇದೀಗ ಇದರ ಬೆಲೆ ನಿಧಾನವಾಗಿ ಇಳಿಯತೊಡಗಿದೆ.</p>.<p>ಆದಾಗ್ಯೂ ಗಾಣದ ಮಾದರಿಯಲ್ಲಿ ತೆಗೆಯುವ ಎಣ್ಣೆಯ ಧಾರಣೆಯಲ್ಲಿ ಹೆಚ್ಚು ವ್ಯತ್ಯಾಸ ಆಗಿಲ್ಲ. ಗಾಣದಲ್ಲಿನ ಸೂರ್ಯಕಾಂತಿ ಎಣ್ಣೆ ಲೀಟರ್ಗೆ ₹330 ಹಾಗೂ ಕಡಲೆಕಾಯಿ ಎಣ್ಣೆ ₹280–300ರಂತೆ ಮಾರಾಟ ನಡೆದಿದೆ.</p>.<p>ಟೊಮೆಟೊ ದಿಢೀರ್ ತುಟ್ಟಿ: ಎರಡು ವಾರದ ಹಿಂದಷ್ಟೇ ಪ್ರತಿ ಕೆ.ಜಿ.ಗೆ ₹15–20ರಂತೆ ಮಾರಾಟ ನಡೆದಿದ್ದ ಟೊಮೆಟೊ ಧಾರಣೆಯಲ್ಲಿ ಕಳೆದ ಮೂರ್ನಾಲ್ಕು ದಿನದಿಂದ ದಿಢೀರ್ ಏರಿಕೆಯಾಗುತ್ತಿರುವುದು ಅಚ್ಚರಿ ಉಂಟು ಮಾಡಿದೆ. ಬೆಲೆ ಕುಸಿತದಿಂದ ರೈತರು ಟೊಮೆಟೊ ಬೆಳೆಯಲು ನಿರಾಸಕ್ತಿ ತೋರಿದ್ದು, ಮಾರುಕಟ್ಟೆಗೆ ಉತ್ಪನ್ನದ ಆವಕ ತಗ್ಗಿದ ಹಿನ್ನೆಲೆಯಲ್ಲಿ ಬೆಲೆ ಹೆಚ್ಚಳವಾಗಿದೆ.</p>.<p>ಕಳೆದ ವಾರವಷ್ಟೇ ಮಾರುಕಟ್ಟೆಯಲ್ಲಿ ಟೊಮೆಟೊ ₹40ರಂತೆ ಮಾರಾಟ ಆಗಿತ್ತು. ಈಗ ಎಪಿಎಂಸಿಯಲ್ಲಿನ ಸಗಟು ದರವೇ ₹50–55ಕ್ಕೆ ತಲುಪಿದೆ. ಮಳೆ ಕಡಿಮೆ ಆಗಿರುವುದು ಮತ್ತು ರೋಗ ಬಾಧೆಯ ಕಾರಣಕ್ಕೆ ಉತ್ಪನ್ನ ಕಡಿಮೆ ಆಗಿದೆ. ಮಳೆಗಾಲದಲ್ಲಿ ಟೊಮೆಟೊ ಕಳೆಯುತ್ತದೆ ಎಂಬ ಕಾರಣಕ್ಕೂ ಕೆಲ ರೈತರು ಬೆಳೆಯಲು ಮುಂದಾಗದೇ ಇರುವುದು ಇದಕ್ಕೆ ಕಾರಣ ಎಂದು ವರ್ತಕರು ಹೇಳುತ್ತಾರೆ.</p>.<p>ಟೊಮೆಟೊ ಜೊತೆಗೆ ಹಸಿ ಮೆಣಸಿನಕಾಯಿ ಸಹ ಈ ವಾರ ಗ್ರಾಹಕರಿಗೆ ಖಾರವಾಗಿದೆ. ಶುಂಠಿ, ಕ್ಯಾರೆಟ್ ಆದಿಯಾಗಿ ಹೆಚ್ಚಿನ ತರಕಾರಿಗಳು ಏರಿಕೆಯ ಹಾದಿಯಲ್ಲಿವೆ. ತರಕಾರಿಗೆ ಹೋಲಿಸಿದರೆ ಈ ಬಾರಿ ಸೊಪ್ಪು ಹೆಚ್ಚು ದುಬಾರಿ ಆಗಿಲ್ಲ. ಸಣ್ಣ ಕೊತ್ತಂಬರಿ ಕಟ್ಟು ₹10ಕ್ಕೆ 3, ಕೀರೆ, ಕಿಲ್ಕೀರೆ, ದಂಟು ₹10ಕ್ಕೆ 4ರಂತೆ ಮಾರಾಟ ನಡೆದಿದೆ. ಸಬ್ಬಸ್ಸಿಗೆ ಮತ್ತು ಮೆಂತ್ಯೆ ಮಾತ್ರ ತುಟ್ಟಿಯಾಗಿಯೇ ಉಳಿದಿವೆ. ಮಳೆ ಹೆಚ್ಚಾದಲ್ಲಿ ಸೊಪ್ಪಿನ ಬೆಲೆಯೂ ಏರುವ ಸಾಧ್ಯತೆ ಇದೆ.</p>.<p>undefined undefined</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>