ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ಪ್ರಕರಣದಲ್ಲಿ ನೂರಾರು ಹೆಣ್ಣು ಮಕ್ಕಳ ಅಸಹಾಯಕತೆಯನ್ನು ಬಳಸಿಕೊಂಡು ಅಕ್ಷಮ್ಯ ಅಪರಾಧ ಎಸಗಲಾಗಿದೆ. ವಯಸ್ಸು, ಸಂಬಂಧಗಳನ್ನು ಅರಿಯದೆ ವಿಕೃತವಾಗಿ ವರ್ತಿಸಲಾಗಿದೆ. ಇಂಥದ್ದೇ ಹಿನ್ನೆಲೆಯಿರುವ ಅನೇಕರು ಆಧುನಿಕ ಕೀಚಕ ಕಾಮುಕರು ಸಮಾಜದಲ್ಲಿದ್ದು, ಅವರೆಲ್ಲರ ವಿರುದ್ಧ ಸರ್ಕಾರ ಕ್ರಮಕ್ಕೆ ಮುಂದಾಗಬೇಕು’ ಎಂದು ಒತ್ತಾಯಿಸಿದರು.