<p><strong>ನಂಜನಗೂಡು:</strong> ಅಕ್ರಮ ಸಂಬಂಧದ ಕಾರಣ ಪತ್ನಿ ಪ್ರಿಯಕರನ ಜೊತೆ ಸೇರಿ ಪತಿಯನ್ನು ಕೊಲೆಮಾಡಿರುವ ಘಟನೆ ಸರಗೂರು ತಾಲ್ಲೂಕಿನ ಅಡ್ಡಹಳ್ಳಿ ಗ್ರಾಮದಲ್ಲಿ ನಡೆದಿದೆ. ತನಿಖೆ ನಡೆಸಿ ಕೊಲೆಯ ಹಿಂದಿನ ರಹಸ್ಯವನ್ನು ನಂಜನಗೂಡು ಪೊಲೀಸರು ಪತ್ತೆ ಹಚ್ಚಿದ್ದು, ಪತ್ನಿ ಸೇರಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.</p>.<p>ಸರಗೂರು ತಾಲ್ಲೂಕಿನ ಅಡ್ಡಹಳ್ಳಿ ಗ್ರಾಮದ ಶಿವರಾಜು (39) ಕೊಲೆಯಾದವರು. ಕೊಲೆ ಆರೋಪದ ಮೇಲೆ ಪತ್ನಿ ಸೌಮ್ಯಾ (31), ಪ್ರಿಯಕರ ಯೋಗೀಶ್, ಆತನ ಸ್ನೇಹಿತ ಚೆಲುವನನ್ನು ಪೊಲೀಸರು ಬಂಧಿಸಿದ್ದಾರೆ.</p>.<p>5 ದಿನಗಳ ಹಿಂದೆ ಶಿವರಾಜು ಅವರ ಶವ ತಾಲ್ಲೂಕಿನ ಕಪ್ಪಸೋಗೆ ಗ್ರಾಮದ ನಾಲೆಯೊಂದರಲ್ಲಿ ಪತ್ತೆಯಾಗಿತ್ತು. ಈ ಸಂಬಂಧ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಅಪರಿಚಿತ ಶವವೆಂದು ದೂರು ದಾಖಲಾಗಿತ್ತು. ಈ ಪ್ರಕರಣವನ್ನು ಪತ್ತೆಹಚ್ಚುವ ಸಲುವಾಗಿ ಸಿಪಿಐ ಲಕ್ಷ್ಮಿಕಾಂತ ತಳವಾರ್, ದೇವರಾಜು, ಸತೀಶ್, ಗುರು, ನವೀನ್, ಮಹೇಶ್, ಕಾಂತಮ್ಮ ಸೇರಿ 6 ಮಂದಿಯ ತಂಡವನ್ನು ರಚಿಸಿದ್ದರು.</p>.<p>ಅಡ್ಡಹಳ್ಳಿ ಗ್ರಾಮದ ಶಿವರಾಜು, ಸೌಮ್ಯಾ ಅವರನ್ನು ಮದುವೆಯಾಗಿ 15 ವರ್ಷಗಳಾಗಿದ್ದು, ದಂಪತಿಗಳಿಗೆ ಇಬ್ಬರು ಮಕ್ಕಳಿದ್ದಾರೆ. ಈ ನಡುವೆ ಶುಂಠಿ ತೋಟದ ಕೆಲಸಕ್ಕೆಂದು ಆಟೋದಲ್ಲಿ ಹೋಗುತ್ತಿದ್ದ ಸೌಮ್ಯಾ ಚಿಕ್ಕೋಡು ಗ್ರಾಮದ ಆಟೊ ಚಾಲಕ ಯೋಗೀಶ್ ನಡುವೆ ಸ್ನೇಹ ಬೆಳೆದು ಅಕ್ರಮ ಸಂಬಂಧವೂ ಇತ್ತು. ಈ ವಿಷಯ ತಿಳಿದ ಶಿವರಾಜು ಪತ್ನಿಯೊಂದಿಗೆ ಜಗಳ ತೆಗೆಯುತ್ತಿದ್ದ ಎನ್ನಲಾಗಿದೆ. ಗಲಾಟೆ ವಿಷಯವನ್ನು ಪ್ರಿಯಕರ ಯೋಗೀಶ್ನಿಗೆ ತಿಳಿಸಿದಾಗ ಆತನ ಸ್ನೇಹಿತ ಚೆಲುವನ ಜೊತೆ ಸೇರಿ ಮೂವರು ಸೇರಿ ಶಿವರಾಜುವನ್ನು ಕೊಲೆ ಮಾಡಿ ನಾಲೆಗೆ ಎಸೆದಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನಂಜನಗೂಡು:</strong> ಅಕ್ರಮ ಸಂಬಂಧದ ಕಾರಣ ಪತ್ನಿ ಪ್ರಿಯಕರನ ಜೊತೆ ಸೇರಿ ಪತಿಯನ್ನು ಕೊಲೆಮಾಡಿರುವ ಘಟನೆ ಸರಗೂರು ತಾಲ್ಲೂಕಿನ ಅಡ್ಡಹಳ್ಳಿ ಗ್ರಾಮದಲ್ಲಿ ನಡೆದಿದೆ. ತನಿಖೆ ನಡೆಸಿ ಕೊಲೆಯ ಹಿಂದಿನ ರಹಸ್ಯವನ್ನು ನಂಜನಗೂಡು ಪೊಲೀಸರು ಪತ್ತೆ ಹಚ್ಚಿದ್ದು, ಪತ್ನಿ ಸೇರಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.</p>.<p>ಸರಗೂರು ತಾಲ್ಲೂಕಿನ ಅಡ್ಡಹಳ್ಳಿ ಗ್ರಾಮದ ಶಿವರಾಜು (39) ಕೊಲೆಯಾದವರು. ಕೊಲೆ ಆರೋಪದ ಮೇಲೆ ಪತ್ನಿ ಸೌಮ್ಯಾ (31), ಪ್ರಿಯಕರ ಯೋಗೀಶ್, ಆತನ ಸ್ನೇಹಿತ ಚೆಲುವನನ್ನು ಪೊಲೀಸರು ಬಂಧಿಸಿದ್ದಾರೆ.</p>.<p>5 ದಿನಗಳ ಹಿಂದೆ ಶಿವರಾಜು ಅವರ ಶವ ತಾಲ್ಲೂಕಿನ ಕಪ್ಪಸೋಗೆ ಗ್ರಾಮದ ನಾಲೆಯೊಂದರಲ್ಲಿ ಪತ್ತೆಯಾಗಿತ್ತು. ಈ ಸಂಬಂಧ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಅಪರಿಚಿತ ಶವವೆಂದು ದೂರು ದಾಖಲಾಗಿತ್ತು. ಈ ಪ್ರಕರಣವನ್ನು ಪತ್ತೆಹಚ್ಚುವ ಸಲುವಾಗಿ ಸಿಪಿಐ ಲಕ್ಷ್ಮಿಕಾಂತ ತಳವಾರ್, ದೇವರಾಜು, ಸತೀಶ್, ಗುರು, ನವೀನ್, ಮಹೇಶ್, ಕಾಂತಮ್ಮ ಸೇರಿ 6 ಮಂದಿಯ ತಂಡವನ್ನು ರಚಿಸಿದ್ದರು.</p>.<p>ಅಡ್ಡಹಳ್ಳಿ ಗ್ರಾಮದ ಶಿವರಾಜು, ಸೌಮ್ಯಾ ಅವರನ್ನು ಮದುವೆಯಾಗಿ 15 ವರ್ಷಗಳಾಗಿದ್ದು, ದಂಪತಿಗಳಿಗೆ ಇಬ್ಬರು ಮಕ್ಕಳಿದ್ದಾರೆ. ಈ ನಡುವೆ ಶುಂಠಿ ತೋಟದ ಕೆಲಸಕ್ಕೆಂದು ಆಟೋದಲ್ಲಿ ಹೋಗುತ್ತಿದ್ದ ಸೌಮ್ಯಾ ಚಿಕ್ಕೋಡು ಗ್ರಾಮದ ಆಟೊ ಚಾಲಕ ಯೋಗೀಶ್ ನಡುವೆ ಸ್ನೇಹ ಬೆಳೆದು ಅಕ್ರಮ ಸಂಬಂಧವೂ ಇತ್ತು. ಈ ವಿಷಯ ತಿಳಿದ ಶಿವರಾಜು ಪತ್ನಿಯೊಂದಿಗೆ ಜಗಳ ತೆಗೆಯುತ್ತಿದ್ದ ಎನ್ನಲಾಗಿದೆ. ಗಲಾಟೆ ವಿಷಯವನ್ನು ಪ್ರಿಯಕರ ಯೋಗೀಶ್ನಿಗೆ ತಿಳಿಸಿದಾಗ ಆತನ ಸ್ನೇಹಿತ ಚೆಲುವನ ಜೊತೆ ಸೇರಿ ಮೂವರು ಸೇರಿ ಶಿವರಾಜುವನ್ನು ಕೊಲೆ ಮಾಡಿ ನಾಲೆಗೆ ಎಸೆದಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>