ಮಳೆನೀರು ಕಾಲುವೆಯಲ್ಲಿ ಕಲುಷಿತ ನೀರು ಶೇಖರಣೆಯಾಗಿರುವುದು
ಕೆ.ಸಾಲುಂಡಿ ಗ್ರಾಮದ ಮನೆಯೊಂದರ ಮುಂಭಾಗದ ಚರಂಡಿಯಲ್ಲಿ ನೀರು ನಿಂತಿರುವುದು
ಯುಡಿಜಿ ನೀರು ಚರಂಡಿಗೆ ಹರಿಬಿಟ್ಟಿರುವುದು
ಮಳೆ ನೀರಿನ ಚರಂಡಿಯಲ್ಲಿ ಕಲುಷಿತ ನೀರು ಯುಡಿಜಿ ಕಾರ್ಯ ಅಪೂರ್ಣ ಪ್ರಕರಣದ ಬಳಿಕ ಎಚ್ಚೆತ್ತ ಅಧಿಕಾರಿಗಳು
‘ಒಆರ್ಎಸ್ ನೀಡಿದ್ದರೆ ಬದುಕುತ್ತಿದ್ದ’
‘ವಾಂತಿ ಭೇದಿಯಿಂದ ಸುಸ್ತಾದ ಕನಕರಾಜುನನ್ನು ಸೋಮವಾರ ಬೆಳಗಿನ ಜಾವ ಖಾಸಗಿ ಆಸ್ಪತ್ರೆಗೆ ಕರೆದೊಯ್ದೆ. ಅಲ್ಲಿ ಇಂಜೆಕ್ಷನ್ ಕೊಟ್ಟರು. ದಾಖಲಿಸಿಕೊಳ್ಳಲು ₹30 ಸಾವಿರ ಕೇಳಿದರು. ನಮ್ಮಲ್ಲಿ ಅಷ್ಟು ಹಣವಿಲ್ಲದೆ ವಾಪಸ್ ಕರೆತಂದೆವು. ಸಂಜೆಯಾಗುತ್ತಿದ್ದಂತೆ ವಿಪರೀತ ವಾಂತಿ ಭೇದಿಯಾಯಿತು. ಆಸ್ಪತ್ರೆಗೆ ಕರೆದೊಯ್ದರೂ ಬದುಕುಳಿಯಲಿಲ್ಲ’ ಎಂದು ಮೃತನ ಅಣ್ಣ ರವಿ ಕಣ್ಣೀರಾದರು. ‘ಊರಿನಲ್ಲಿ ಕಲುಷಿತ ನೀರಿನಿಂದ ಸಮಸ್ಯೆಯಾದ ಬಗ್ಗೆ ನಮಗೂ ಮಾಹಿತಿ ನೀಡಿದ್ದರೆ ತಮ್ಮ ಬದುಕುಳಿಯುತ್ತಿದ್ದ. ನಾವು ಸಾಮಾನ್ಯ ಭೇದಿ ಅಂದುಕೊಂಡೆವು. ಪಕ್ಕದ ಬೀದಿಯಲ್ಲಿ ಒಆರ್ಎಸ್ ನೀಡಿದ್ದರು. ನಮ್ಮ ಮನೆಗೆ ಅದೂ ಸಿಕ್ಕಿರಲಿಲ್ಲ’ ಎಂದು ದುಃಖಿಸಿದರು.
‘ಸಮಸ್ಯೆ ಮರುಕಳಿಸುವ ಸಾಧ್ಯತೆ’
‘ಕುಡಿಯುವ ನೀರಿಗಾಗಿ ಈಗ ಇರುವ ಕೊಳವೆಬಾವಿಯನ್ನೇ ಮತ್ತೆ ಬಳಸಿದರೆ ಸಮಸ್ಯೆ ಮರುಕಳಿಸುವ ಸಾಧ್ಯತೆಯಿದೆ. ಯುಡಿಜಿ ನೀರು ಸಪ್ಟಿಕ್ ಟ್ಯಾಂಕ್ಗೇ ಬೀಳುವಂತೆ ಮಾಡಬೇಕು. ಮಳೆ ನೀರು ಸರಾಗವಾಗಿ ಹಾದು ಹೋಗುವಂತೆ ಚರಂಡಿ ಸರಿಪಡಿಸಬೇಕು. ನೀರಿಗಾಗಿ ಪ್ರತ್ಯೇಕ ಕೊಳವೆಬಾವಿ ಕೊರೆಸಬೇಕು’ ಎಂಬುದು ಗ್ರಾಮಸ್ಥರ ಆಗ್ರಹ.