ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಕಲುಷಿತ ನೀರು ಕುಡಿದು ಯುವಕನ ಸಾವು: ಅಧಿಕಾರಿಗಳ ನಿರ್ಲಕ್ಷ್ಯ ಕಾರಣವಾಯಿತೇ?

ಅರ್ಧಕ್ಕೆ ನಿಂತ ಒಳಚರಂಡಿ ಕಾಮಗಾರಿ: ಚರಂಡಿಯಲ್ಲೇ ಇದೆ ಕುಡಿಯುವ ನೀರಿನ ಕೊಳವೆಬಾವಿ!
Published : 23 ಮೇ 2024, 7:19 IST
Last Updated : 23 ಮೇ 2024, 7:19 IST
ಫಾಲೋ ಮಾಡಿ
Comments
ಮಳೆನೀರು ಕಾಲುವೆಯಲ್ಲಿ ಕಲುಷಿತ ನೀರು ಶೇಖರಣೆಯಾಗಿರುವುದು
ಮಳೆನೀರು ಕಾಲುವೆಯಲ್ಲಿ ಕಲುಷಿತ ನೀರು ಶೇಖರಣೆಯಾಗಿರುವುದು
ಕೆ.ಸಾಲುಂಡಿ ಗ್ರಾಮದ ಮನೆಯೊಂದರ ಮುಂಭಾಗದ ಚರಂಡಿಯಲ್ಲಿ ನೀರು ನಿಂತಿರುವುದು
ಕೆ.ಸಾಲುಂಡಿ ಗ್ರಾಮದ ಮನೆಯೊಂದರ ಮುಂಭಾಗದ ಚರಂಡಿಯಲ್ಲಿ ನೀರು ನಿಂತಿರುವುದು
ಯುಡಿಜಿ ನೀರು ಚರಂಡಿಗೆ ಹರಿಬಿಟ್ಟಿರುವುದು
ಯುಡಿಜಿ ನೀರು ಚರಂಡಿಗೆ ಹರಿಬಿಟ್ಟಿರುವುದು
ಮಳೆ ನೀರಿನ ಚರಂಡಿಯಲ್ಲಿ ಕಲುಷಿತ ನೀರು ಯುಡಿಜಿ ಕಾರ್ಯ ಅಪೂರ್ಣ ಪ್ರಕರಣದ ಬಳಿಕ ಎಚ್ಚೆತ್ತ ಅಧಿಕಾರಿಗಳು
‘ಒಆರ್‌ಎಸ್‌ ನೀಡಿದ್ದರೆ ಬದುಕುತ್ತಿದ್ದ’
‘ವಾಂತಿ ಭೇದಿಯಿಂದ ಸುಸ್ತಾದ ಕನಕರಾಜುನನ್ನು ಸೋಮವಾರ ಬೆಳಗಿನ ಜಾವ ಖಾಸಗಿ ಆಸ್ಪತ್ರೆಗೆ ಕರೆದೊಯ್ದೆ. ಅಲ್ಲಿ ಇಂಜೆಕ್ಷನ್‌ ಕೊಟ್ಟರು. ದಾಖಲಿಸಿಕೊಳ್ಳಲು ₹30 ಸಾವಿರ ಕೇಳಿದರು. ನಮ್ಮಲ್ಲಿ ಅಷ್ಟು ಹಣವಿಲ್ಲದೆ ವಾಪಸ್‌ ಕರೆತಂದೆವು. ಸಂಜೆಯಾಗುತ್ತಿದ್ದಂತೆ ವಿಪರೀತ ವಾಂತಿ ಭೇದಿಯಾಯಿತು. ಆಸ್ಪತ್ರೆಗೆ ಕರೆದೊಯ್ದರೂ ಬದುಕುಳಿಯಲಿಲ್ಲ’ ಎಂದು ಮೃತನ ಅಣ್ಣ ರವಿ ಕಣ್ಣೀರಾದರು. ‘ಊರಿನಲ್ಲಿ ಕಲುಷಿತ ನೀರಿನಿಂದ ಸಮಸ್ಯೆಯಾದ ಬಗ್ಗೆ ನಮಗೂ ಮಾಹಿತಿ ನೀಡಿದ್ದರೆ ತಮ್ಮ ಬದುಕುಳಿಯುತ್ತಿದ್ದ. ನಾವು ಸಾಮಾನ್ಯ ಭೇದಿ ಅಂದುಕೊಂಡೆವು. ಪಕ್ಕದ ಬೀದಿಯಲ್ಲಿ ಒಆರ್‌ಎಸ್‌ ನೀಡಿದ್ದರು. ನಮ್ಮ ಮನೆಗೆ ಅದೂ ಸಿಕ್ಕಿರಲಿಲ್ಲ’ ಎಂದು ದುಃಖಿಸಿದರು.
‘ಸಮಸ್ಯೆ ಮರುಕಳಿಸುವ ಸಾಧ್ಯತೆ’
‘ಕುಡಿಯುವ ನೀರಿಗಾಗಿ ಈಗ ಇರುವ ಕೊಳವೆಬಾವಿಯನ್ನೇ ಮತ್ತೆ ಬಳಸಿದರೆ ಸಮಸ್ಯೆ ಮರುಕಳಿಸುವ ಸಾಧ್ಯತೆಯಿದೆ. ಯುಡಿಜಿ ನೀರು ಸಪ್ಟಿಕ್‌ ಟ್ಯಾಂಕ್‌ಗೇ ಬೀಳುವಂತೆ ಮಾಡಬೇಕು. ಮಳೆ ನೀರು ಸರಾಗವಾಗಿ ಹಾದು ಹೋಗುವಂತೆ ಚರಂಡಿ ಸರಿಪಡಿಸಬೇಕು. ನೀರಿಗಾಗಿ ಪ್ರತ್ಯೇಕ ಕೊಳವೆಬಾವಿ ಕೊರೆಸಬೇಕು’ ಎಂಬುದು ಗ್ರಾಮಸ್ಥರ ಆಗ್ರಹ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT