ಕರಡಿಯೊಂದು ನೀರಿನಲ್ಲಿ ಮೀಯುತ್ತ ಖರಬೂಜ ಸೇವಿಸಿ ದೇಹ ತಂಪಾಗಿಸಿಕೊಂಡ ಬಗೆ –ಪ್ರಜಾವಾಣಿ ಚಿತ್ರ/ಅನೂಪ್ ರಾಘ ಟಿ.
ಪ್ರಾಣಿಗಳ ದೇಹದ ಉಷ್ಣಾಂಶ ಕಾಪಾಡಲು ತುಂತುರು ನೀರಿನ ವ್ಯವಸ್ಥೆ ಮಾಡಲಾಗಿದೆ. ಒಆರ್ಎಸ್ ಎಳನೀರಿನ ಜೊತೆಗೆ ತಾಜಾ ಹಣ್ಣುಗಳನ್ನು ಪೂರೈಸಲಾಗುತ್ತಿದೆ.
–ಡಿ.ಮಹೇಶ್ ಕುಮಾರ್ ಕಾರ್ಯ ನಿರ್ವಾಹಕ ನಿರ್ದೇಶಕ ಚಾಮರಾಜೇಂದ್ರ ಮೃಗಾಲಯ
ಆಹಾರದಲ್ಲೂ ಆರೈಕೆ
ಬೇಸಿಗೆ ಸಮಯದಲ್ಲಿ ಪ್ರಾಣಿ ಪಕ್ಷಿಗಳಿಗೆ ನೀಡುವ ಆಹಾರದಲ್ಲಿ ಕೊಂಚ ಬದಲಾವಣೆ ಮಾಡಲಾಗಿದೆ. ಪ್ರಾಣಿ– ಪಕ್ಷಿಗಳ ದೇಹದಲ್ಲಿ ನೀರಿನ ಅಂಶ ಹೆಚ್ಚು ಮಾಡುವ ಪದಾರ್ಥಗಳನ್ನೇ ಆಹಾರವಾಗಿ ನೀಡಲಾಗುತ್ತಿದೆ. ಬಿಸಿಲಿನಿಂದ ಉಂಟಾಗುವ ಬಳಲಿಕೆ ತಪ್ಪಿಸಲೆಂದೇ ಪ್ರಾಣಿಗಳಿಗೆ ಈ ಬಾರಿ ಒಆರ್ಎಸ್ ದ್ರಾವಣ ಸಹ ನೀಡಲಾಗುತ್ತಿದೆ. ಪ್ರಾಣಿಗಳ ಸಾಮರ್ಥ್ಯಕ್ಕೆ ಅನುಗುಣವಾಗಿ ಇಂತಿಷ್ಟು ಪ್ರಮಾಣದಲ್ಲಿ ನೀರಿನೊಂದಿಗೆ ಇದನ್ನು ನೀಡಲಾಗುತ್ತಿದೆ. ಜೊತೆಗೆ ಚಿಂಪಾಂಜಿ ಮೊದಲಾದ ಪ್ರಾಣಿಗಳಿಗೆ ದಿನಕ್ಕೆ ಎರಡು ಬಾರಿ ಎಳನೀರು ಸಹ ದೊರೆಯುತ್ತಿದೆ. ಇದರೊಟ್ಟಿಗೆ ಹಿಮಕರಡಿ ಮೊದಲಾದವುಗಳಿಗೆ ದೊಡ್ಡ ಗಾತ್ರದ ಐಸ್ಕ್ಯೂಬ್ಗಳನ್ನೂ ಇಡಲಾಗುತ್ತಿದ್ದು ಇದನ್ನು ಇಷ್ಟಪಟ್ಟು ಬಳಸುತ್ತಿವೆ. ಕಲ್ಲಂಗಡಿ ಖರಬೂಜ ಮೂಸಂಬಿ ಬಾಳೆಹಣ್ಣು ದ್ರಾಕ್ಷಿ ದಾಳಿಂಬೆ ಕಿತ್ತಳೆ ಹಣ್ಣುಗಳನ್ನು ಪ್ರಾಣಿಗಳು ಇಷ್ಟಪಟ್ಟು ತಿನ್ನತೊಡಗಿವೆ.