<p><strong>ರಾಯಚೂರು</strong>: ಶ್ರೀಮನ್ಮಧ್ವಾಚಾರ್ಯ ಮೂಲಮಹಾಸಂಸ್ಥಾನ ಹಾಗೂ ರಾಘವೇಂದ್ರಸ್ವಾಮಿಗಳ ಮಠದ ಆಶ್ರಯದಲ್ಲಿ ಜುಲೈ 22 ರಿಂದ ಸೆಪ್ಟೆಂಬರ್ 8ರ ವರೆಗೆ ಮಂತ್ರಾಲಯ ಮಠದ ಆವರಣದಲ್ಲಿ ಸುಬುಧೇಂದ್ರ ತೀರ್ಥರಿಂದ 13ನೇ ಚಾತುರ್ಮಾಸ್ಯ ದೀಕ್ಷಾ ಮಹೋತ್ಸವ ನಡೆಯಲಿದೆ.<br><br>ಸುಬುಧೇಂದ್ರ ತೀರ್ಥರಿಂದ ಶ್ರೀಮನ್ನಾಯಸುಧಾ, ತಾತ್ಪರ್ಯಚಂದ್ರಿಕಾ ಮುಂತಾದ ಸಚ್ಛಾಸ್ತ್ರ ಗ್ರಂಥಗಳ, ಅನೇಕ ಟಿಪ್ಪಣಿಗಳ ವಿಶೇಷ ವಿಚಾರಗಳಿಂದ ಕೂಡಿದ ಪಾಠಗಳು ನಡೆಯಲಿದೆ.<br><br> ಗಿರಿ ಆಚಾರ್ಯ ಚಿಂತನೆ ಮಂಡಿಸಲಿದ್ದಾರೆ. ವಿವಿಧ ವಿದ್ವಾಂಸರಿಂದ ಧಾರ್ಮಿಕ ಪ್ರವಚನ ಮತ್ತು ಶ್ರೀಗಳಿಂದ ಅನುಗ್ರಹಸಂದೇಶ, ಮುದ್ರಾಧಾರಣೆ, ಫಲಮಂತ್ರಾಕ್ಷತೆ ಪ್ರದಾನ, ಸಂಸ್ಥಾನಪೂಜೆ, ಸಂಗೀತ ದಾಸವಾಣಿ ಹಾಗೂ ದಾಸಸಾಹಿತ್ಯ, ಟಿ.ಟಿ.ಡಿ ದಾಸಸಾಹಿತ್ಯ ಪ್ರಾಜೆಕ್ಟ್ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದೆ.<br><br> ಜುಲೈ 22 ರಿಂದ 31 ರವರೆಗೆ ನವವಿಧ ಭಕ್ತಿಯ ವೈಶಿಷ್ಟ್ಯ, ಭೀಮಸೇನದೇವರು-ಭಾಗವತ ಧರ್ಮಗಳು, ಹರಿದಾಸರು ಕಂಡ ರಾಯರು, ಗಜೇಂದ್ರಮೋಕ್ಷ, ಮಹಾಲಕ್ಷ್ಮಿಯ ಹರಿಭಕ್ತಿ ಕಾರ್ಯಕ್ರಮ ನಡೆಯಲಿದೆ.<br><br> ಆಗಸ್ಟ್ 1 ರಿಂದ 31 ರವರೆಗೆ ರಾಘವೇಂದ್ರತೀರ್ಥ ಗುರುಸಾರ್ವಭೌಮರ 354ನೇ ಆರಾಧನ ಮಹೋತ್ಸವ ಸೇರಿದಂತೆ ವಿವಿಧ ಆಚರಣೆಗಳು ನಡೆಯಲಿದೆ.<br><br> ಸೆಪ್ಟೆಂಬರ್ 1 ರಿಂದ 8ರವರೆಗೆ ಫಲವಿದುಬಾಳುದಕೆ, ಪಂಚಮಹಾಯಜ್ಞಸಂಧಿ, ಗರ್ಭಸ್ಥಜೀವಕೃತ ಭಗವತ್ ಸ್ತುತಿ, ಕರ್ಮಯೋಗ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ರಾಘವೇಂದ್ರ ಮಠ ಪ್ರಕಟಣೆ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಯಚೂರು</strong>: ಶ್ರೀಮನ್ಮಧ್ವಾಚಾರ್ಯ ಮೂಲಮಹಾಸಂಸ್ಥಾನ ಹಾಗೂ ರಾಘವೇಂದ್ರಸ್ವಾಮಿಗಳ ಮಠದ ಆಶ್ರಯದಲ್ಲಿ ಜುಲೈ 22 ರಿಂದ ಸೆಪ್ಟೆಂಬರ್ 8ರ ವರೆಗೆ ಮಂತ್ರಾಲಯ ಮಠದ ಆವರಣದಲ್ಲಿ ಸುಬುಧೇಂದ್ರ ತೀರ್ಥರಿಂದ 13ನೇ ಚಾತುರ್ಮಾಸ್ಯ ದೀಕ್ಷಾ ಮಹೋತ್ಸವ ನಡೆಯಲಿದೆ.<br><br>ಸುಬುಧೇಂದ್ರ ತೀರ್ಥರಿಂದ ಶ್ರೀಮನ್ನಾಯಸುಧಾ, ತಾತ್ಪರ್ಯಚಂದ್ರಿಕಾ ಮುಂತಾದ ಸಚ್ಛಾಸ್ತ್ರ ಗ್ರಂಥಗಳ, ಅನೇಕ ಟಿಪ್ಪಣಿಗಳ ವಿಶೇಷ ವಿಚಾರಗಳಿಂದ ಕೂಡಿದ ಪಾಠಗಳು ನಡೆಯಲಿದೆ.<br><br> ಗಿರಿ ಆಚಾರ್ಯ ಚಿಂತನೆ ಮಂಡಿಸಲಿದ್ದಾರೆ. ವಿವಿಧ ವಿದ್ವಾಂಸರಿಂದ ಧಾರ್ಮಿಕ ಪ್ರವಚನ ಮತ್ತು ಶ್ರೀಗಳಿಂದ ಅನುಗ್ರಹಸಂದೇಶ, ಮುದ್ರಾಧಾರಣೆ, ಫಲಮಂತ್ರಾಕ್ಷತೆ ಪ್ರದಾನ, ಸಂಸ್ಥಾನಪೂಜೆ, ಸಂಗೀತ ದಾಸವಾಣಿ ಹಾಗೂ ದಾಸಸಾಹಿತ್ಯ, ಟಿ.ಟಿ.ಡಿ ದಾಸಸಾಹಿತ್ಯ ಪ್ರಾಜೆಕ್ಟ್ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದೆ.<br><br> ಜುಲೈ 22 ರಿಂದ 31 ರವರೆಗೆ ನವವಿಧ ಭಕ್ತಿಯ ವೈಶಿಷ್ಟ್ಯ, ಭೀಮಸೇನದೇವರು-ಭಾಗವತ ಧರ್ಮಗಳು, ಹರಿದಾಸರು ಕಂಡ ರಾಯರು, ಗಜೇಂದ್ರಮೋಕ್ಷ, ಮಹಾಲಕ್ಷ್ಮಿಯ ಹರಿಭಕ್ತಿ ಕಾರ್ಯಕ್ರಮ ನಡೆಯಲಿದೆ.<br><br> ಆಗಸ್ಟ್ 1 ರಿಂದ 31 ರವರೆಗೆ ರಾಘವೇಂದ್ರತೀರ್ಥ ಗುರುಸಾರ್ವಭೌಮರ 354ನೇ ಆರಾಧನ ಮಹೋತ್ಸವ ಸೇರಿದಂತೆ ವಿವಿಧ ಆಚರಣೆಗಳು ನಡೆಯಲಿದೆ.<br><br> ಸೆಪ್ಟೆಂಬರ್ 1 ರಿಂದ 8ರವರೆಗೆ ಫಲವಿದುಬಾಳುದಕೆ, ಪಂಚಮಹಾಯಜ್ಞಸಂಧಿ, ಗರ್ಭಸ್ಥಜೀವಕೃತ ಭಗವತ್ ಸ್ತುತಿ, ಕರ್ಮಯೋಗ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ರಾಘವೇಂದ್ರ ಮಠ ಪ್ರಕಟಣೆ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>