ಮುಂಬೈನಿಂದ ಮೇ 21 ರಂದು ಬಂದಿದ್ದ ಮೃತ ಶಿವಪ್ಪ ಅವರ ಗಂಟಲು ದ್ರವ ಸಂಗ್ರಹಿಸಿ ಪರೀಕ್ಷೆ ಕಳುಹಿಸಲಾಗಿತ್ತು. ವರದಿ ನೆಗೆಟಿವ್ ಬಂದಿತ್ತು. ಆದರೆ, ಮೇ 28 ರಂದು ಕೋವಿಡ್ ಲಕ್ಷಣಗಳು ಕಾಣಿಸಿದ್ದರಿಂದ ದೇವದುರ್ಗದ ಸಾಂಸ್ಥಿಕ ಕ್ವಾರಂಟೈನ್ ಕೇಂದ್ರದಿಂದ ರಾಯಚೂರು ಒಪೆಕ್ಗೆ ಸ್ಥಳಾಂತರಿಸಲಾಗಿತ್ತು. ಮೇ 29 ರಂದು ಆಸ್ಪತ್ರೆಯಲ್ಲಿ ಮೃತಪಟ್ಟದ್ದರಿಂದ ಮತ್ತೆ ಗಂಟಲು ದ್ರುವ ಪರೀಕ್ಷೆಗೆ ಕಳುಹಿಸಿದಾಗ, ಪಾಸಿಟಿವ್ ವರದಿ ಬಂದಿದೆ.