<p><strong>ಲಿಂಗಸುಗೂರು</strong>: ತಾಲ್ಲೂಕಿನಾದ್ಯಂತ ಕೋಟೆ ಕೊತ್ತಲು, ಪಾಳುಬಿದ್ದ ದೇವಸ್ಥಾನ, ಹಳೆ ಊರುಗಳಲ್ಲಿ ನಿಧಿಗಳ್ಳರ ಹಾವಳಿಗೆ ಜನತೆ ಬೇಸತ್ತು ಹೋಗಿದ್ದಾರೆ.</p>.<p>ಜಲದುರ್ಗ, ಮುದಗಲ್ಲ, ಕರಡಕಲ್ಲ, ಹುನಕುಂಟಿ, ಹಿರೆಉಪ್ಪೇರಿ ಸೇರಿದಂತೆ ಪಾಳು ಬಿದ್ದ ಸ್ಥಳಗಳನ್ನೇ ಗುರಿಯಾಗಿಸಿ ಕಲ್ಲು ಬಂಡೆ, ದೇವರ ಮೂರ್ತಿ, ಶಾಸನಗಳ ಸುತ್ತಮುತ್ತ ತಗ್ಗುಗುಂಡಿ ಅಗೆಯುತ್ತಿರುವುದು ಸಾಮಾನ್ಯವಾಗಿದೆ.</p>.<p>ನಿಧಿ ಹುಡುಕುವ ತಂಡಗಳಲ್ಲಿ ಆಂಜನ ಬಳಕೆ, ಪೂಜಾ ವಿಧಿವಿಧಾನ ಬಲ್ಲವರು, ಗುಂಡಿ ಅಗೆಯುವವರು ಸೇರಿದಂತೆ ಸಣ್ಣಪುಟ್ಟ ಘಟನೆ ಜರುಗಿದಾಗ ಸರಿಪಡಿಸುವಂತಹ ನಾಯಕತ್ವದ ಫೋಜು ನೀಡಿ ಅಹೋರಾತ್ರಿ ಹುಡುಕಾಟ ನಡೆಸುತ್ತಿದ್ದಾರೆ.</p>.<p>ಹಲವು ಸಂದರ್ಭಗಳಲ್ಲಿ ಸಂಶಯಾಸ್ಪದ ವ್ಯಕ್ತಿ, ವಾಹನ ತಿರುಗಾಡುವ ಮಾಹಿತಿ ನೀಡಿದರೂ ಪ್ರಯೋಜನವಾಗುತ್ತಿಲ್ಲ. ಗುತ್ತಿಗೆದಾರರು, ಸರ್ವೆ ಮಾಡುವವರು ಅಂತ ನುಣುಚಿಕೊಳ್ಳುತ್ತಿದ್ದಾರೆ ಎಂಬುದು ಬಹುತೇಕರ ಆರೋಪ.</p>.<p>ಭಾನುವಾರ ಅಥವಾ ಗುರುವಾರ ಅಮಾವಾಸ್ಯೆ ಬಂದಾಗ ಹಾಗೂ ಇತರೆ ಮುಹೂರ್ತ ಹುಡುಕುವ ನಿಧಿಗಳ್ಳರಿಗೆ ದೇವಸ್ಥಾನ, ಕೋಟೆ ಕೊತ್ತಲು, ಹಳೆ ಊರುಗಳ ಪಾಳುಬಿದ್ದ ಸ್ಥಳಗಳೇ ಗುರಿ ಮಾಡಿಕೊಂಡಿರುತ್ತಾರೆ.</p>.<p>ಹಿರೆಉಪ್ಪೇರಿ ಗ್ರಾಮದಲ್ಲಿ ವಾರದ ಹಿಂದೆ ಹಾಗೂ ಭಾನುವಾರ ಅಮಾವಾಸ್ಯೆ ದಿನ ಹಳೆ ಊರು ಪಾಳುಬಿದ್ದ ಸ್ಥಳದಲ್ಲಿ ಆಳವಾದ ಗುಂಡಿ ತೋಡಿದ್ದಾರೆ. ಜಮೀನು ಮಾಲೀಕರು ನಿಧಿಗಳ್ಳರ ಹಾವಳಿಗೆ ಬೇಸತ್ತು ಹೋಗಿದ್ದೇವೆ ಎಂಬುದು ಗ್ರಾಮಸ್ಥರ ಸಾಮೂಹಿಕ ಆರೋಪವಾಗಿದೆ.</p>.<p>ಆನೆಹೊಸೂರು ಸೇರಿದಂತೆ ಕೆಲವೆಡೆ ಸಂಶಯಾಸ್ಪದ ವ್ಯಕ್ತಿ ತಿರುಗಾಡುವ ವಾಹನ ಜಪ್ತಿ ಮಾಡಿ ಗ್ರಾಮಸ್ಥರು ನೀಡಿದ್ದರು. ಠಾಣೆಯಲ್ಲಿ ಗುರುತಿನ ಪತ್ರ ನೀಡಿ ಸಬೂಬು ಹೇಳಿಕೊಂಡು ಹೋಗಿದ್ದರಿಂದ ಮಾಹಿತಿ ನೀಡಲು ಹಿಂದೇಟು ಹಾಕುವಂತಾಗಿದೆ ಎಂಬುದು ಸಂಘ– ಸಂಸ್ಥೆಗಳ ದೂರು.</p>.<p>ನಿಧಿಗಳ್ಳರ ಹಾವಳಿ ಹೆಚ್ಚಿದೆ. ಅಧುನಿಕತೆ ತಂತ್ರಜ್ಞಾನ ಮತ್ತು ಸಂಶಯ ಬಾರದಂತ ಗುರುತಿನ ಕಾರ್ಡ್ ತೋರಿಸಿ ಪುಸಲಾಯಿಸುತ್ತಿದ್ದಾರೆ. ಹಿರೆಉಪ್ಪೇರಿ ಸುತ್ತಮುತ್ತಲ ನಡೆಯುತ್ತಿರುವ ನಿಧಿಗಳ್ಳರ ಹಾವಳಿ ನಿಯಂತ್ರಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.</p>.<p>‘ತಾಲ್ಲೂಕಿನಲ್ಲಿ ಕಳ್ಳತನ, ನಿಧಿಗಳ್ಳರ ಹಾವಳಿ, ಮಟಕಾ ಜುಜಾಟ ಯಥೇಚ್ಛವಾಗಿ ನಡೆಯುತ್ತಿದೆ. ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು’ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ರಾಜ್ಯ ಘಟಕದ ಸದಸ್ಯ ಪ್ರಭುಲಿಂಗ ಮೇಗಳಮನಿ ಮನವಿ ಮಾಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಲಿಂಗಸುಗೂರು</strong>: ತಾಲ್ಲೂಕಿನಾದ್ಯಂತ ಕೋಟೆ ಕೊತ್ತಲು, ಪಾಳುಬಿದ್ದ ದೇವಸ್ಥಾನ, ಹಳೆ ಊರುಗಳಲ್ಲಿ ನಿಧಿಗಳ್ಳರ ಹಾವಳಿಗೆ ಜನತೆ ಬೇಸತ್ತು ಹೋಗಿದ್ದಾರೆ.</p>.<p>ಜಲದುರ್ಗ, ಮುದಗಲ್ಲ, ಕರಡಕಲ್ಲ, ಹುನಕುಂಟಿ, ಹಿರೆಉಪ್ಪೇರಿ ಸೇರಿದಂತೆ ಪಾಳು ಬಿದ್ದ ಸ್ಥಳಗಳನ್ನೇ ಗುರಿಯಾಗಿಸಿ ಕಲ್ಲು ಬಂಡೆ, ದೇವರ ಮೂರ್ತಿ, ಶಾಸನಗಳ ಸುತ್ತಮುತ್ತ ತಗ್ಗುಗುಂಡಿ ಅಗೆಯುತ್ತಿರುವುದು ಸಾಮಾನ್ಯವಾಗಿದೆ.</p>.<p>ನಿಧಿ ಹುಡುಕುವ ತಂಡಗಳಲ್ಲಿ ಆಂಜನ ಬಳಕೆ, ಪೂಜಾ ವಿಧಿವಿಧಾನ ಬಲ್ಲವರು, ಗುಂಡಿ ಅಗೆಯುವವರು ಸೇರಿದಂತೆ ಸಣ್ಣಪುಟ್ಟ ಘಟನೆ ಜರುಗಿದಾಗ ಸರಿಪಡಿಸುವಂತಹ ನಾಯಕತ್ವದ ಫೋಜು ನೀಡಿ ಅಹೋರಾತ್ರಿ ಹುಡುಕಾಟ ನಡೆಸುತ್ತಿದ್ದಾರೆ.</p>.<p>ಹಲವು ಸಂದರ್ಭಗಳಲ್ಲಿ ಸಂಶಯಾಸ್ಪದ ವ್ಯಕ್ತಿ, ವಾಹನ ತಿರುಗಾಡುವ ಮಾಹಿತಿ ನೀಡಿದರೂ ಪ್ರಯೋಜನವಾಗುತ್ತಿಲ್ಲ. ಗುತ್ತಿಗೆದಾರರು, ಸರ್ವೆ ಮಾಡುವವರು ಅಂತ ನುಣುಚಿಕೊಳ್ಳುತ್ತಿದ್ದಾರೆ ಎಂಬುದು ಬಹುತೇಕರ ಆರೋಪ.</p>.<p>ಭಾನುವಾರ ಅಥವಾ ಗುರುವಾರ ಅಮಾವಾಸ್ಯೆ ಬಂದಾಗ ಹಾಗೂ ಇತರೆ ಮುಹೂರ್ತ ಹುಡುಕುವ ನಿಧಿಗಳ್ಳರಿಗೆ ದೇವಸ್ಥಾನ, ಕೋಟೆ ಕೊತ್ತಲು, ಹಳೆ ಊರುಗಳ ಪಾಳುಬಿದ್ದ ಸ್ಥಳಗಳೇ ಗುರಿ ಮಾಡಿಕೊಂಡಿರುತ್ತಾರೆ.</p>.<p>ಹಿರೆಉಪ್ಪೇರಿ ಗ್ರಾಮದಲ್ಲಿ ವಾರದ ಹಿಂದೆ ಹಾಗೂ ಭಾನುವಾರ ಅಮಾವಾಸ್ಯೆ ದಿನ ಹಳೆ ಊರು ಪಾಳುಬಿದ್ದ ಸ್ಥಳದಲ್ಲಿ ಆಳವಾದ ಗುಂಡಿ ತೋಡಿದ್ದಾರೆ. ಜಮೀನು ಮಾಲೀಕರು ನಿಧಿಗಳ್ಳರ ಹಾವಳಿಗೆ ಬೇಸತ್ತು ಹೋಗಿದ್ದೇವೆ ಎಂಬುದು ಗ್ರಾಮಸ್ಥರ ಸಾಮೂಹಿಕ ಆರೋಪವಾಗಿದೆ.</p>.<p>ಆನೆಹೊಸೂರು ಸೇರಿದಂತೆ ಕೆಲವೆಡೆ ಸಂಶಯಾಸ್ಪದ ವ್ಯಕ್ತಿ ತಿರುಗಾಡುವ ವಾಹನ ಜಪ್ತಿ ಮಾಡಿ ಗ್ರಾಮಸ್ಥರು ನೀಡಿದ್ದರು. ಠಾಣೆಯಲ್ಲಿ ಗುರುತಿನ ಪತ್ರ ನೀಡಿ ಸಬೂಬು ಹೇಳಿಕೊಂಡು ಹೋಗಿದ್ದರಿಂದ ಮಾಹಿತಿ ನೀಡಲು ಹಿಂದೇಟು ಹಾಕುವಂತಾಗಿದೆ ಎಂಬುದು ಸಂಘ– ಸಂಸ್ಥೆಗಳ ದೂರು.</p>.<p>ನಿಧಿಗಳ್ಳರ ಹಾವಳಿ ಹೆಚ್ಚಿದೆ. ಅಧುನಿಕತೆ ತಂತ್ರಜ್ಞಾನ ಮತ್ತು ಸಂಶಯ ಬಾರದಂತ ಗುರುತಿನ ಕಾರ್ಡ್ ತೋರಿಸಿ ಪುಸಲಾಯಿಸುತ್ತಿದ್ದಾರೆ. ಹಿರೆಉಪ್ಪೇರಿ ಸುತ್ತಮುತ್ತಲ ನಡೆಯುತ್ತಿರುವ ನಿಧಿಗಳ್ಳರ ಹಾವಳಿ ನಿಯಂತ್ರಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.</p>.<p>‘ತಾಲ್ಲೂಕಿನಲ್ಲಿ ಕಳ್ಳತನ, ನಿಧಿಗಳ್ಳರ ಹಾವಳಿ, ಮಟಕಾ ಜುಜಾಟ ಯಥೇಚ್ಛವಾಗಿ ನಡೆಯುತ್ತಿದೆ. ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು’ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ರಾಜ್ಯ ಘಟಕದ ಸದಸ್ಯ ಪ್ರಭುಲಿಂಗ ಮೇಗಳಮನಿ ಮನವಿ ಮಾಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>