ಪಹಣಿಗಳ ದೋಷ, ಮೋಜನಿ ತಿದ್ದುಪಡಿ ದೋಷ, ಕಾಲಂ ನಂ. 3 ಮತ್ತು 9 ರಲ್ಲಿ ವ್ಯತ್ಯಾಸ ಇರುವುದು, ಈ ರೀತಿ ದೋಷಗಳಿಂದಾಗಿ ರೈತರು ಭೂಮಿ ವಿಷಯದಲ್ಲಿ ಸರ್ಕಾರದ ಸೌಲಭ್ಯ ಪಡೆಯುವುದಾಗಲಿ, ಭೂಮಿ ಮಾರಾಟ ಮಾಡುವಂತಹ ಕೆಲಸಗಳಿಗೆ, ಭೂಮಿ ಅಡಮಾನ ಕೆಲಸಗಳಿಗೆ ಅಡ್ಡಿಯಾಗುತ್ತದೆ. ಈ ಭೂಮಿ ಮೋಜನಿ, ಪಹಣಿ ತಿದ್ದುಪಡಿ ಮಾಡುವುದು ಕಂದಾಯ ಇಲಾಖೆಯ ಪ್ರಧಾನ ಕೆಲಸ. ಈ ಮುಖ್ಯವಾದ ಕೆಲಸವು ಕೋವಿಡ್ ಹಿನ್ನೆಲೆಯಲ್ಲಿ ಕೆಲವು ಸಮಯದವರೆಗೆ ಸ್ಥಗಿತಗೊಂಡಿತ್ತು. ಈಗ ಕೋವಿಡ್ ಕೆಲಸದ ಜೊತೆ ಜೊತೆಗೆ ಅರ್ಜಿಗಳ ವಿಲೇವಾರಿ ಮುಂದುವರೆಸಿಕೊಂಡು ಹೋಗಬೇಕು ಎಂದು ತಿಳಿಸಿದರು.