ರಾಯಚೂರು:ನಗರದ ಹೊರವಲಯದ ಎಂಪಿಸಿಎಲ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ಕಾರು–ಬೈಕ್ ಡಿಕ್ಕಿ ಉಂಟಾಗಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದು, ಕಾರಿನಲ್ಲಿ ಪ್ರಯಾಣಿಸುತ್ತಿದ್ದ ನಾಲ್ಕು ಜನರ ಪೈಕಿ ಇಬ್ಬರು ಗಾಯಗೊಂಡಿದ್ದಾರೆ.
ರಾಯಚೂರು ನಗರ ಸ್ಟೇಷನ್ ಏರಿಯಾ ನಿವಾಸಿ ಕಿಶನರಾವ್ ನಾಗೋಜಿರಾವ್ (40) ಮೃತಪಟ್ಟಿದ್ದು, ದೇವಸುಗೂರಿನ ನಿವಾಸಿಗಳಾದ ಸೂಗುರೇಶ ಮತ್ತು ಅನಂತ್ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪಘಾತ ಸಂಭವಿಸಿದೆ.