<p><strong>ರಾಯಚೂರು</strong>: ‘ಓದಿನಿಂದ ಮನುಷ್ಯ ಎತ್ತರಕ್ಕೆ ಏರಬಲ್ಲ ಎಂದು ಇಡೀ ವಿಶ್ವಕ್ಕೆ ತೋರಿಸಿಕೊಟ್ಟ ಮಹಾನ್ ವ್ಯಕ್ತಿ, ಜ್ಞಾನದ ಪ್ರತೀಕ ಆಗಿದ್ದವರು ಡಾ. ಬಿ.ಆರ್.ಅಂಬೇಡ್ಕರ್’ ಎಂದು ಸಾಹಿತಿ ಈರಣ್ಣ ಬೆಂಗಾಲಿ ಅಭಿಪ್ರಾಯಪಟ್ಟರು.</p>.<p>ಇಲ್ಲಿನ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಭಾಗೀಯ ಕಚೇರಿಯ ಆವರಣದಲ್ಲಿ ಆಯೋಜಿಸಿದ್ದ ಭಾರತ ರತ್ನ ಬಾಬಾಸಾಹೇಬ ಅಂಬೇಡ್ಕರ್ 134 ನೇ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಜಗತ್ತು ಕಂಡ ಶ್ರೇಷ್ಠ ಜ್ಞಾನಿ ಅಂಬೇಡ್ಕರ್ ಅವರ ಜನ್ಮದಿನವನ್ನು ವಿಶ್ವಸಂಸ್ಥೆಯು ಜ್ಞಾನದ ದಿನಾಚರಣೆಯನ್ನಾಗಿ ಘೋಷಿಸಿದೆ. ಇಡೀ ವಿಶ್ವವೇ ಇದನ್ನು ಆಚರಿಸುತ್ತದೆ. ಇದು ಭಾರತದ ಹೆಮ್ಮೆ. ಸಂವಿಧಾನದ ಶಿಲ್ಪಿಯಾಗಿ ಈ ನೆಲದ ಶೋಷಿತರಿಗೆ, ಹೆಣ್ಣುಮಕ್ಕಳಿಗೆ, ಕಾರ್ಮಿಕರಿಗೆ ಬಹುದೊಡ್ಡ ಕೊಡುಗೆಯನ್ನು ನೀಡಿದ್ದಾರೆ. ಅವರನ್ನು ಒಂದು ವರ್ಗಕ್ಕೆ ಸೀಮಿತಗೊಳಿಸಿದ್ದು ದುರುಂತ’ ಎಂದು ಬೇಸರ ವ್ಯಕ್ತಪಡಿಸಿದರು.</p>.<p>‘ಇಂದಿನ ಯುವಪೀಳಿಗೆ ಅಂಬೇಡ್ಕರ್ ಅವರ ಅಪರಿಮಿತ ಓದು, ಜ್ಞಾನ, ಪಡೆದ ಪದವಿಗಳು ಮಾದರಿಯಾಗಬೇಕಿದೆ’ ಎಂದು ಹೇಳಿದರು.</p>.<p>ವಿಭಾಗೀಯ ನಿಯಂತ್ರಣ ಅಧಿಕಾರಿ ಎಂ.ಎಸ್. ಚಂದ್ರಶೇಖರ ಮಾತನಾಡಿ, ‘ಅಂಬೇಡ್ಕರ್ ಜಯಂತಿಯ ಆಚರಣೆಯ ಹಿನ್ನೆಲೆ ಅರಿಯಬೇಕಿದೆ. ಅವರ ವಿಚಾರಗಳನ್ನು ಮೈಗೂಡಿಸಿಕೊಳ್ಳಬೇಕಿದೆ. ಪುಸ್ತಕಗಳನ್ನು ಹೆಚ್ಚು ಹೆಚ್ಚು ಓದಬೇಕಿದೆ. ಅದರಲ್ಲೂ ಮೊಬೈಲ್ ಬಿಟ್ಟು ಪುಸ್ತಕ ಓದಬೇಕಿದೆ. ಅಂಬೇಡ್ಕರ್ ಅವರ ಹೋರಾಟದ ಮನೋಭಾವ ನಾವೆಲ್ಲರೂ ತಿಳಿಯಬೇಕಿದೆ’ ಎಂದರು.</p>.<p>ಅಶ್ರಫ್ ಅಲಿ, ಕೆ.ಎಲ್. ಚಂದ್ರಶೇಖರ, ಸುನಿತಾ ಪತ್ತಾರ, ಅಣ್ಣಪ್ಪ, ಶಾಂತಮೂರ್ತಿ, ಮುದ್ದುಕೃಷ್ಣ, ಚಿನ್ನಕಾಶಿಂ, ಗುರುನಾಥ ರೆಡ್ಡಿ, ಸಂಗಣ್ಣ ಹಾಜರಿದ್ದರು. ಮಹಾಂತೇಶ ನಿರೂಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಯಚೂರು</strong>: ‘ಓದಿನಿಂದ ಮನುಷ್ಯ ಎತ್ತರಕ್ಕೆ ಏರಬಲ್ಲ ಎಂದು ಇಡೀ ವಿಶ್ವಕ್ಕೆ ತೋರಿಸಿಕೊಟ್ಟ ಮಹಾನ್ ವ್ಯಕ್ತಿ, ಜ್ಞಾನದ ಪ್ರತೀಕ ಆಗಿದ್ದವರು ಡಾ. ಬಿ.ಆರ್.ಅಂಬೇಡ್ಕರ್’ ಎಂದು ಸಾಹಿತಿ ಈರಣ್ಣ ಬೆಂಗಾಲಿ ಅಭಿಪ್ರಾಯಪಟ್ಟರು.</p>.<p>ಇಲ್ಲಿನ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಭಾಗೀಯ ಕಚೇರಿಯ ಆವರಣದಲ್ಲಿ ಆಯೋಜಿಸಿದ್ದ ಭಾರತ ರತ್ನ ಬಾಬಾಸಾಹೇಬ ಅಂಬೇಡ್ಕರ್ 134 ನೇ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಜಗತ್ತು ಕಂಡ ಶ್ರೇಷ್ಠ ಜ್ಞಾನಿ ಅಂಬೇಡ್ಕರ್ ಅವರ ಜನ್ಮದಿನವನ್ನು ವಿಶ್ವಸಂಸ್ಥೆಯು ಜ್ಞಾನದ ದಿನಾಚರಣೆಯನ್ನಾಗಿ ಘೋಷಿಸಿದೆ. ಇಡೀ ವಿಶ್ವವೇ ಇದನ್ನು ಆಚರಿಸುತ್ತದೆ. ಇದು ಭಾರತದ ಹೆಮ್ಮೆ. ಸಂವಿಧಾನದ ಶಿಲ್ಪಿಯಾಗಿ ಈ ನೆಲದ ಶೋಷಿತರಿಗೆ, ಹೆಣ್ಣುಮಕ್ಕಳಿಗೆ, ಕಾರ್ಮಿಕರಿಗೆ ಬಹುದೊಡ್ಡ ಕೊಡುಗೆಯನ್ನು ನೀಡಿದ್ದಾರೆ. ಅವರನ್ನು ಒಂದು ವರ್ಗಕ್ಕೆ ಸೀಮಿತಗೊಳಿಸಿದ್ದು ದುರುಂತ’ ಎಂದು ಬೇಸರ ವ್ಯಕ್ತಪಡಿಸಿದರು.</p>.<p>‘ಇಂದಿನ ಯುವಪೀಳಿಗೆ ಅಂಬೇಡ್ಕರ್ ಅವರ ಅಪರಿಮಿತ ಓದು, ಜ್ಞಾನ, ಪಡೆದ ಪದವಿಗಳು ಮಾದರಿಯಾಗಬೇಕಿದೆ’ ಎಂದು ಹೇಳಿದರು.</p>.<p>ವಿಭಾಗೀಯ ನಿಯಂತ್ರಣ ಅಧಿಕಾರಿ ಎಂ.ಎಸ್. ಚಂದ್ರಶೇಖರ ಮಾತನಾಡಿ, ‘ಅಂಬೇಡ್ಕರ್ ಜಯಂತಿಯ ಆಚರಣೆಯ ಹಿನ್ನೆಲೆ ಅರಿಯಬೇಕಿದೆ. ಅವರ ವಿಚಾರಗಳನ್ನು ಮೈಗೂಡಿಸಿಕೊಳ್ಳಬೇಕಿದೆ. ಪುಸ್ತಕಗಳನ್ನು ಹೆಚ್ಚು ಹೆಚ್ಚು ಓದಬೇಕಿದೆ. ಅದರಲ್ಲೂ ಮೊಬೈಲ್ ಬಿಟ್ಟು ಪುಸ್ತಕ ಓದಬೇಕಿದೆ. ಅಂಬೇಡ್ಕರ್ ಅವರ ಹೋರಾಟದ ಮನೋಭಾವ ನಾವೆಲ್ಲರೂ ತಿಳಿಯಬೇಕಿದೆ’ ಎಂದರು.</p>.<p>ಅಶ್ರಫ್ ಅಲಿ, ಕೆ.ಎಲ್. ಚಂದ್ರಶೇಖರ, ಸುನಿತಾ ಪತ್ತಾರ, ಅಣ್ಣಪ್ಪ, ಶಾಂತಮೂರ್ತಿ, ಮುದ್ದುಕೃಷ್ಣ, ಚಿನ್ನಕಾಶಿಂ, ಗುರುನಾಥ ರೆಡ್ಡಿ, ಸಂಗಣ್ಣ ಹಾಜರಿದ್ದರು. ಮಹಾಂತೇಶ ನಿರೂಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>