ಹರಿಸಿನಿಂದ ಕಂಗೊಳಿಸುತ್ತಿರುವ ಈ ತೋಟಗಳು ಇರುವುದು ರಾಯಚೂರು ತಾಲ್ಲೂಕಿನ ಬಿಚ್ಚಾಲಿ ಗ್ರಾಮದಲ್ಲಿ. ತುಂಗಭದ್ರಾ ನದಿತೀರದಲ್ಲಿರುವ ಬಿಚ್ಚಾಲಿ ಗ್ರಾಮದಲ್ಲಿ ರೈತರು ವಿಳ್ಯದೆಲೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಬೆಳೆಯುತ್ತಿದ್ದಾರೆ. ಹಲವು ದಶಕಗಳಿಂದ ವಿಳ್ಯದೆಲೆ ಬೆಳೆಯುತ್ತಿರುವ ಕಾರಣ ಈ ಗ್ರಾಮವು ಎಲೆಬಿಚ್ಚಾಲಿ ಎಂದೇ ಪ್ರಸಿದ್ಧಿಯಾಗಿದೆ.