ಒಳನಾಡು ಮೀನುಗಾರಿಕೆಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುವುದು. ಕೆರೆ ನಿರ್ಮಾಣ, ಮೀನು ಮರಿ ಖರೀದಿ, ಮೀನು ಆಹಾರ ಖರೀದಿಗೆ ಸಹಾಯಧನ ಒದಗಿಸಲಾಗುವುದು. ಇದಕ್ಕಾಗಿ ಹೊಸ ಬಜೆಟ್ನಲ್ಲಿ ₨ 15 ಕೋಟಿ ಅನುದಾನ ಕೋರಲಾಗಿದೆ. ರಾಯಚೂರು ಜಿಲ್ಲೆಯ ಉಸ್ತುವಾರಿ ವಹಿಸಿದರೆ, ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.