ಸಾರ್ವಜನಿಕರು, ಉದ್ಯಮಿಗಳು ಹಾಗೂ ಸಂಘ–ಸಂಸ್ಥೆಗಳ ಮುಖ್ಯಸ್ಥರು, ಕಲಾಸಕ್ತರೆಲ್ಲರೂ ಚಿತ್ರಕಲೆ ಸಂತೆಯಲ್ಲಿ ಪಾಲ್ಗೊಂಡು ಕಲಾವಿದರನ್ನು ಪ್ರೋತ್ಸಾಹಿಸಬೇಕು. ರಾಯಚೂರಿನಲ್ಲಿಯೂ ಸಾಕಷ್ಟು ಸುಪ್ರಸಿದ್ಧ ಕಲಾವಿದರಿದ್ದು, ಅವರ ಪ್ರತಿಭೆಯನ್ನು ಗುರುತಿಸುವ ಕೆಲಸವಾಗಬೇಕಿದೆ. ಏಕಕಾಲಕ್ಕೆ ಎಲ್ಲ ಕಲಾವಿದರ ಕಲಾಕೃತಿಗಳನ್ನು ಕಣ್ತುಂಬಿಕೊಳ್ಳುವ ವಿಶೇಷ ದಿನ ಅದಾಗಲಿದೆ ಎಂದು ಹೇಳಿದರು.