<p><strong>ರಾಯಚೂರು:</strong>ನಗರದ ಕಲಾ ಸಂಕುಲ ಸಂಸ್ಥೆಯಿಂದ ಫೆಬ್ರುವರಿ 16 ರಂದು ಚಿತ್ರಕಲಾ ಸಂತೆ ಆಯೋಜಿಸಲಾಗುತ್ತಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ಮಾರುತಿ ಬಡಿಗೇರ ಹೇಳಿದರು.</p>.<p>ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವರ್ಷ ಆಯೋಜಿಸಿದ್ದ ಚಿತ್ರಕಲಾ ಸಂತೆಗೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿತ್ತು. 60 ಕಲಾವಿದರು ಭಾಗಿಯಾಗಿದ್ದರು. ಈ ವರ್ಷವೂ ವಿವಿಧ ರಾಜ್ಯಗಳಿಂದ ಕಲಾವಿದರು ಭಾಗಿಯಾಗಲಿದ್ದು, ಚಿತ್ರಕಲಾಕೃತಿಗಳ ಪ್ರದರ್ಶನ ಹಾಗೂ ಮಾರಾಟ ನಡೆಯಲಿದೆ ಎಂದರು.</p>.<p>ರಂಗಮಂದಿರ ಮುಂಭಾಗದಲ್ಲಿರುವ ಸಾರ್ವಜನಿಕ ಉದ್ಯಾನದ ಎದುರು ಮಳಿಗೆಗಳನ್ನು ಹಾಕಲಾಗುವುದು. ದಿ. ಶಂಕರಗೌಡ ಬೆಟ್ಟದೂರು ಅವರ ಹೆಸರಿನಲ್ಲಿ ಚಿತ್ರಸಂತೆ ಆಯೋಜಿಸಲಾಗುತ್ತಿದ್ದು, ಸಂಸದ ರಾಜಾ ಅಮರೇಶ್ವರ ನಾಯಕ ಅವರು ಉದ್ಘಾಟಿಸುವರು. ಜಿಲ್ಲೆಯ ಶಾಸಕರು ಹಾಗೂ ಅಧಿಕಾರಿಗಳು ಭಾಗವಹಿಸುವರು ಎಂದು ತಿಳಿಸಿದರು.</p>.<p>ಸಾರ್ವಜನಿಕರು, ಉದ್ಯಮಿಗಳು ಹಾಗೂ ಸಂಘ–ಸಂಸ್ಥೆಗಳ ಮುಖ್ಯಸ್ಥರು, ಕಲಾಸಕ್ತರೆಲ್ಲರೂ ಚಿತ್ರಕಲೆ ಸಂತೆಯಲ್ಲಿ ಪಾಲ್ಗೊಂಡು ಕಲಾವಿದರನ್ನು ಪ್ರೋತ್ಸಾಹಿಸಬೇಕು. ರಾಯಚೂರಿನಲ್ಲಿಯೂ ಸಾಕಷ್ಟು ಸುಪ್ರಸಿದ್ಧ ಕಲಾವಿದರಿದ್ದು, ಅವರ ಪ್ರತಿಭೆಯನ್ನು ಗುರುತಿಸುವ ಕೆಲಸವಾಗಬೇಕಿದೆ. ಏಕಕಾಲಕ್ಕೆ ಎಲ್ಲ ಕಲಾವಿದರ ಕಲಾಕೃತಿಗಳನ್ನು ಕಣ್ತುಂಬಿಕೊಳ್ಳುವ ವಿಶೇಷ ದಿನ ಅದಾಗಲಿದೆ ಎಂದು ಹೇಳಿದರು.</p>.<p>ಒಂದು ಕಲಾಕೃತಿಯು ನೂರಾರು ಭಾವನೆಗಳನ್ನು ಹುಟ್ಟುಹಾಕುತ್ತದೆ. ಇಷ್ಟಪಡುವ ಕಲಾಕೃತಿಗಳನ್ನು ಖರೀದಿಸಬಹುದಾಗಿದೆ. ನೂತನ ಕಟ್ಟಡಗಳು, ಕಚೇರಿಗಳಿಗೆ ಸುಂದರ ಚಿತ್ರಕಲಾಕೃತಿಗಳು ಜೀವಂತಿಕೆ ತರುತ್ತದೆ. ಕುಟುಂಬ ಸಮೇತರಾಗಿ ಚಿತ್ರಸಂತೆಗೆ ಬರಬೇಕು ಎಂದು ಮನವಿ ಮಾಡಿದರು.</p>.<p>ಹೊರ ಜಿಲ್ಲೆಗಳಿಂದ ಬರುತ್ತಿರುವ ಚಿತ್ರಕಲಾವಿದರಿಗೆ ರಾಯಚೂರಿನ ಕುರಿತು ಹೊಸ ನಿರೀಕ್ಷೆಗಳಿವೆ. ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡರೆ ಮಾತ್ರ ಕಲಾಸಂತೆಗೆ ವಿಶೇಷ ಮೆರುಗು ಎಂದರು.</p>.<p>ಅಮರೇಗೌಡ, ಈರಣ್ಣ ಬೆಂಗಾಲಿ, ದೇವರಾಜ ಕುರ್ಡಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಯಚೂರು:</strong>ನಗರದ ಕಲಾ ಸಂಕುಲ ಸಂಸ್ಥೆಯಿಂದ ಫೆಬ್ರುವರಿ 16 ರಂದು ಚಿತ್ರಕಲಾ ಸಂತೆ ಆಯೋಜಿಸಲಾಗುತ್ತಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ಮಾರುತಿ ಬಡಿಗೇರ ಹೇಳಿದರು.</p>.<p>ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವರ್ಷ ಆಯೋಜಿಸಿದ್ದ ಚಿತ್ರಕಲಾ ಸಂತೆಗೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿತ್ತು. 60 ಕಲಾವಿದರು ಭಾಗಿಯಾಗಿದ್ದರು. ಈ ವರ್ಷವೂ ವಿವಿಧ ರಾಜ್ಯಗಳಿಂದ ಕಲಾವಿದರು ಭಾಗಿಯಾಗಲಿದ್ದು, ಚಿತ್ರಕಲಾಕೃತಿಗಳ ಪ್ರದರ್ಶನ ಹಾಗೂ ಮಾರಾಟ ನಡೆಯಲಿದೆ ಎಂದರು.</p>.<p>ರಂಗಮಂದಿರ ಮುಂಭಾಗದಲ್ಲಿರುವ ಸಾರ್ವಜನಿಕ ಉದ್ಯಾನದ ಎದುರು ಮಳಿಗೆಗಳನ್ನು ಹಾಕಲಾಗುವುದು. ದಿ. ಶಂಕರಗೌಡ ಬೆಟ್ಟದೂರು ಅವರ ಹೆಸರಿನಲ್ಲಿ ಚಿತ್ರಸಂತೆ ಆಯೋಜಿಸಲಾಗುತ್ತಿದ್ದು, ಸಂಸದ ರಾಜಾ ಅಮರೇಶ್ವರ ನಾಯಕ ಅವರು ಉದ್ಘಾಟಿಸುವರು. ಜಿಲ್ಲೆಯ ಶಾಸಕರು ಹಾಗೂ ಅಧಿಕಾರಿಗಳು ಭಾಗವಹಿಸುವರು ಎಂದು ತಿಳಿಸಿದರು.</p>.<p>ಸಾರ್ವಜನಿಕರು, ಉದ್ಯಮಿಗಳು ಹಾಗೂ ಸಂಘ–ಸಂಸ್ಥೆಗಳ ಮುಖ್ಯಸ್ಥರು, ಕಲಾಸಕ್ತರೆಲ್ಲರೂ ಚಿತ್ರಕಲೆ ಸಂತೆಯಲ್ಲಿ ಪಾಲ್ಗೊಂಡು ಕಲಾವಿದರನ್ನು ಪ್ರೋತ್ಸಾಹಿಸಬೇಕು. ರಾಯಚೂರಿನಲ್ಲಿಯೂ ಸಾಕಷ್ಟು ಸುಪ್ರಸಿದ್ಧ ಕಲಾವಿದರಿದ್ದು, ಅವರ ಪ್ರತಿಭೆಯನ್ನು ಗುರುತಿಸುವ ಕೆಲಸವಾಗಬೇಕಿದೆ. ಏಕಕಾಲಕ್ಕೆ ಎಲ್ಲ ಕಲಾವಿದರ ಕಲಾಕೃತಿಗಳನ್ನು ಕಣ್ತುಂಬಿಕೊಳ್ಳುವ ವಿಶೇಷ ದಿನ ಅದಾಗಲಿದೆ ಎಂದು ಹೇಳಿದರು.</p>.<p>ಒಂದು ಕಲಾಕೃತಿಯು ನೂರಾರು ಭಾವನೆಗಳನ್ನು ಹುಟ್ಟುಹಾಕುತ್ತದೆ. ಇಷ್ಟಪಡುವ ಕಲಾಕೃತಿಗಳನ್ನು ಖರೀದಿಸಬಹುದಾಗಿದೆ. ನೂತನ ಕಟ್ಟಡಗಳು, ಕಚೇರಿಗಳಿಗೆ ಸುಂದರ ಚಿತ್ರಕಲಾಕೃತಿಗಳು ಜೀವಂತಿಕೆ ತರುತ್ತದೆ. ಕುಟುಂಬ ಸಮೇತರಾಗಿ ಚಿತ್ರಸಂತೆಗೆ ಬರಬೇಕು ಎಂದು ಮನವಿ ಮಾಡಿದರು.</p>.<p>ಹೊರ ಜಿಲ್ಲೆಗಳಿಂದ ಬರುತ್ತಿರುವ ಚಿತ್ರಕಲಾವಿದರಿಗೆ ರಾಯಚೂರಿನ ಕುರಿತು ಹೊಸ ನಿರೀಕ್ಷೆಗಳಿವೆ. ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡರೆ ಮಾತ್ರ ಕಲಾಸಂತೆಗೆ ವಿಶೇಷ ಮೆರುಗು ಎಂದರು.</p>.<p>ಅಮರೇಗೌಡ, ಈರಣ್ಣ ಬೆಂಗಾಲಿ, ದೇವರಾಜ ಕುರ್ಡಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>