<p><strong>ಶಕ್ತಿನಗರ: </strong>ಯರಮರಸ್ ಶಾಖೋತ್ಪನ್ನ ವಿದ್ಯುತ್ ಸ್ಥಾವರದ (ವೈಟಿಪಿಎಸ್) ಕಲ್ಲಿದ್ದಲು ಸ್ಟಾಕರ್ ವಿಭಾಗದ ಹತ್ತಿರ ಗುರುವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ಪ್ರೊಮೇಕ್ ಕಂಪನಿಯ ಎಂಜಿನಿಯರ್ ನಿಂಗಬಸಪ್ಪ ತಳವಾರ (52) ಮೃತಪಟ್ಟಿದ್ದಾರೆ.</p>.<p>ನಿಂಗಬಸಪ್ಪ ವಿಜಯಪುರದವರು. ಸುದರ್ಶನ ಮತ್ತು ಶಿವಕುಮಾರ ಅವರು ಗಾಯಗೊಂಡಿದ್ದು, ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ<br />ಪಡೆಯುತ್ತಿದ್ದಾರೆ.</p>.<p>ಕಲ್ಲಿದ್ದಲು ಸ್ಟಾಕರ್ ವಿಭಾಗದ ರಸ್ತೆ ಬದಿಯಲ್ಲಿ ಹೈಡ್ರೋಕ್ರೇನ್ ನಿಲ್ಲಿಸಲಾಗಿತ್ತು. ಅತಿವೇಗದಿಂದ ಕಾರು ಚಾಲನೆ ಮಾಡಿಕೊಂಡು ಬಂದ ಚಾಲಕ ಶಿವಕುಮಾರ ಅವರು, ನಿಂತಿದ್ದ ಹೈಡ್ರೋಕ್ರೇನ್ಗೆ ಡಿಕ್ಕಿ ಹೊಡೆದಿದ್ದಾರೆ.</p>.<p>ಕಾರಿನ ಮುಂಭಾಗದಲ್ಲಿ ಕುಳಿತಿದ್ದ ನಿಂಗಬಸಪ್ಪ ತಳವಾರ ಅವರ ತಲೆಗೆ ಪೆಟ್ಟಾಗಿತ್ತು. ತಕ್ಷಣ ಅವರನ್ನು ರಿಮ್ಸ್ ಆಸ್ಪತ್ರೆಗೆ ದಾಖಲಿಸಿ, ನಂತರ ರಾಯಚೂರು ನಗರದ ಸುರಕ್ಷಾ ಆಸ್ಪತ್ರೆಗೆ ಸೇರಿಸಲಾಯಿತು. ಚಿಕಿತ್ಸೆಗೆ ಸ್ಪಂದಿಸದೆ ನಿಂಗಬಸಪ್ಪ<br />ಮೃತಪಟ್ಟಿದ್ದಾರೆ.</p>.<p>ಪ್ರೊಮೇಕ್ ಕಂಪನಿಯ ಸಹಾಯಕ ಎಂಜಿನಿಯರ್ ಬಸವರಾಜ ಹರಳ್ಳಿ ಅವರು ಈ ಬಗ್ಗೆ ಗ್ರಾಮೀಣ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಕ್ತಿನಗರ: </strong>ಯರಮರಸ್ ಶಾಖೋತ್ಪನ್ನ ವಿದ್ಯುತ್ ಸ್ಥಾವರದ (ವೈಟಿಪಿಎಸ್) ಕಲ್ಲಿದ್ದಲು ಸ್ಟಾಕರ್ ವಿಭಾಗದ ಹತ್ತಿರ ಗುರುವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ಪ್ರೊಮೇಕ್ ಕಂಪನಿಯ ಎಂಜಿನಿಯರ್ ನಿಂಗಬಸಪ್ಪ ತಳವಾರ (52) ಮೃತಪಟ್ಟಿದ್ದಾರೆ.</p>.<p>ನಿಂಗಬಸಪ್ಪ ವಿಜಯಪುರದವರು. ಸುದರ್ಶನ ಮತ್ತು ಶಿವಕುಮಾರ ಅವರು ಗಾಯಗೊಂಡಿದ್ದು, ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ<br />ಪಡೆಯುತ್ತಿದ್ದಾರೆ.</p>.<p>ಕಲ್ಲಿದ್ದಲು ಸ್ಟಾಕರ್ ವಿಭಾಗದ ರಸ್ತೆ ಬದಿಯಲ್ಲಿ ಹೈಡ್ರೋಕ್ರೇನ್ ನಿಲ್ಲಿಸಲಾಗಿತ್ತು. ಅತಿವೇಗದಿಂದ ಕಾರು ಚಾಲನೆ ಮಾಡಿಕೊಂಡು ಬಂದ ಚಾಲಕ ಶಿವಕುಮಾರ ಅವರು, ನಿಂತಿದ್ದ ಹೈಡ್ರೋಕ್ರೇನ್ಗೆ ಡಿಕ್ಕಿ ಹೊಡೆದಿದ್ದಾರೆ.</p>.<p>ಕಾರಿನ ಮುಂಭಾಗದಲ್ಲಿ ಕುಳಿತಿದ್ದ ನಿಂಗಬಸಪ್ಪ ತಳವಾರ ಅವರ ತಲೆಗೆ ಪೆಟ್ಟಾಗಿತ್ತು. ತಕ್ಷಣ ಅವರನ್ನು ರಿಮ್ಸ್ ಆಸ್ಪತ್ರೆಗೆ ದಾಖಲಿಸಿ, ನಂತರ ರಾಯಚೂರು ನಗರದ ಸುರಕ್ಷಾ ಆಸ್ಪತ್ರೆಗೆ ಸೇರಿಸಲಾಯಿತು. ಚಿಕಿತ್ಸೆಗೆ ಸ್ಪಂದಿಸದೆ ನಿಂಗಬಸಪ್ಪ<br />ಮೃತಪಟ್ಟಿದ್ದಾರೆ.</p>.<p>ಪ್ರೊಮೇಕ್ ಕಂಪನಿಯ ಸಹಾಯಕ ಎಂಜಿನಿಯರ್ ಬಸವರಾಜ ಹರಳ್ಳಿ ಅವರು ಈ ಬಗ್ಗೆ ಗ್ರಾಮೀಣ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>