ಆಂಧ್ರಪ್ರದೇಶ ರಾಜಧಾನಿ ಕೇಂದ್ರವನ್ನು ಮೂರು ಕಡೆಗಳಲ್ಲಿ ವಿಂಗಡನೆ ಮಾಡಿರುವುದಕ್ಕೆ ಅಸಮಾಧಾನ ತಾಳಿರುವ ತೆಲುಗುದೇಶಂ ಕಾರ್ಯಕರ್ತರು ಪ್ರತಿಭಟನೆ ಮಾಡುತ್ತಿದ್ದು, ಕರ್ನೂಲ್ 1956 ರವರೆಗೂ ಬಳ್ಳಾರಿ ವಿಭಾಗದಲ್ಲಿಯೇ ಇತ್ತು. ಈಗಲೂ ಕನ್ನಡ ಭಾಷೆ ಹಾಗೂ ಸಂಸ್ಕೃತಿಯನ್ನು ಇಲ್ಲಿನ ಜನರು ಮೈಗೂಡಿಸಿಕೊಂಡಿದ್ದಾರೆ. ತುಂಗಭದ್ರಾ ಡ್ಯಾಂನಿಂದ ಈ ಭಾಗಕ್ಕೆ ನೀರಾವರಿ ಅನುಕೂಲವೂ ಇದೆ. ಕೂಡಲೇ ಕರ್ನೂಲ್ನ್ನು ಕರ್ನಾಟಕಕ್ಕೆ ಸೇರ್ಪಡೆಗೊಳಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.