ಸೋಮವಾರ, ಮಾರ್ಚ್ 20, 2023
24 °C
ಗಾಣಿಗ ಸಮಾಜದ ಅಧ್ಯಕ್ಷ ಬಸಪ್ಪ ಹಳ್ಳಿ ಹೇಳಿಕೆ

ಸಮಾಜದ ಅಭಿವೃದ್ಧಿಗೆ ಪ್ರಾಮಾಣಿಕ ಕೆಲಸ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ‘ಆಡಳಿತ ಮಂಡಳಿಯನ್ನು ಒಗ್ಗೂಡಿಸಿಕೊಂಡು ಗಾಣಿಗ ಸಮಾಜವನ್ನು ಇನ್ನೂ ಎತ್ತರ ಮಟ್ಟಕ್ಕೆ ಒಯ್ಯುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ’ ಎಂದು ಗಾಣಿಗ ಸಮಾಜದ ರಾಯಚೂರು ತಾಲ್ಲೂಕು ಘಟಕದ ನೂತನ ಅಧ್ಯಕ್ಷ ಬಸಪ್ಪ ಹಳ್ಳಿ ಹೇಳಿದರು.

ನಗರದಲ್ಲಿ ಭಾನುವಾರ ನಡೆದ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಮಾತನಾಡಿದರು.

‘ಯಾವುದೇ ತಪ್ಪಾಗಿದ್ದರೂ ಮುಂದಿನ ದಿನಗಳಲ್ಲಿ ಅವುಗಳನ್ನು ಸರಿಪಡಿಸುವ ಕೆಲಸ ಮಾಡುತ್ತೇವೆ . ಪ್ರತಿಭಾ ಪುರಸ್ಕಾರ ಸೇರಿದಂತೆ ಇನ್ನೂ ಅನೇಕ ಚಟುವಟಿಕೆಗಳಿಗೆ ಆದ್ಯತೆ ನೀಡಲಾಗುವುದು. ಸಮಾಜವನ್ನು ಸಂಘಟಿಸಲು ಪ್ರಯತ್ನಿಸುತ್ತೇವೆ’ ಎಂದು ಹೇಳಿದರು. 

ಇದೇ ಸಂದರ್ಭದಲ್ಲಿ ಸಮುದಾಯ ಭವನ ನಿರ್ಮಾಣ ಮೇಲುಸ್ತುವಾರಿ ಸಮಿತಿ ರಚಿಸಲಾಯಿತು.

ತಾಲ್ಲೂಕು ಘಟಕದ ನೂತನ ಪದಾಧಿಕಾರಿಗಳ ಆಯ್ಕೆಯನ್ನು ಮಾಜಿ ಕಾರ್ಯಾಧ್ಯಕ್ಷ ಅಮರಗುಂಡಪ್ಪ ಮೇಟಿ ಘೋಷಿಸಿದರು. ಮಹಾಂತೇಶ ತುರಮರಿ ಸ್ವಾಗತಿಸಿದರು. ರಾವುತರಾವ್ ಬರೂರು ನಿರೂಪಿಸಿದರು.

ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಚನ್ನಪ್ಪ ಸಜ್ಜನ್, ಅಣ್ಣಾರಾವ್ ಪಾಟೀಲ, ವಿಜಯಕುಮಾರ ಸಜ್ಜನ್, ಅಮರೇಗೌಡ ಪಾಟೀಲ ಶಕ್ತಿನಗರ, ರವಿ ಸಜ್ಜನ್ ಗೂಡಿಹಾಳ, ಮಲ್ಲೇಶ ಗಾಣಿಗೇರ ಹಾಗೂ ಚಂದ್ರಶೇಖರ ಯರಗೇರ ಇದ್ದರು.

ಪದಾಧಿಕಾರಿಗಳು: ಬಸಪ್ಪ ಹಳ್ಳಿ (ಅಧ್ಯಕ್ಷ), ಶಕುಂತಲಾ ಅಣ್ಣಾರಾವ್ ಪಾಟೀಲ್ (ಗೌರವ ಅಧ್ಯಕ್ಷೆ), ಲಕ್ಷ್ಮಿ ಭಾಯಿ ರಕ್ಕಸಗಿ (ಮಹಿಳಾ ಅಧ್ಯಕ್ಷೆ), ಬಿ.ಸುರೇಶ, ಗೂಡಿಹಾಳ, ಬಿ. ಪ್ರಬಣ್ಣ ಖಾನಾಪೂರ (ಉಪಾಧ್ಯಕ್ಷರು), ಭೀಮಣ್ಣ ವಣಗೇರಿ (ಗೌರವ ಕಾರ್ಯದರ್ಶಿ), ಎಸ್.ಜೆ. ವಿರೇಶ ಕಮಲಾಪೂರು (ಕಾರ್ಯದರ್ಶಿ), ಅಮರೇಗೌಡ ಪಾಟೀಲ ಶಕ್ತಿನಗರ (ಜಂಟಿ ಕಾರ್ಯದರ್ಶಿ), ಬಸವರಾಜಪ್ಪ ಹೊಕ್ರಾಣಿ (ಖಜಾಂಚಿ), ಜಯಶ್ರೀ ಗುರಪ್ಪ ಬಳ್ಳೂರು ಶಕ್ತಿನಗರ (ಕಾನೂನು ಸಲಹೆಗಾರ), ಬಸವರಾಜ, ಪ್ರವೀಣ ಮಾಟಲದಿನ್ನಿ , ಪ್ರಸಾದ, ಶಿವಕುಮಾರ, ಸಿ.ಜಿ. ಶಿವಾನಂದ, ಉಡಮಗಲ್ ಸಂಘಟನಾ ಕಾರ್ಯದರ್ಶಿಗಳು).

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು