<p><strong>ರಾಯಚೂರು:</strong> 'ಪರಿಸರ ಸ್ನೇಹಿ ಅನಿಲ ಇಂಧನವನ್ನು ಕೈಗಾರಿಕೆ ಹಾಗೂ ಮನೆಗಳಿಗೆ ಬಳಕೆ ಮಾಡುವ ನಿಟ್ಟಿನಲ್ಲಿ ಅರಿವು ಮೂಡಿಸುವ ಕೆಲಸ ನಿರಂತರವಾಗಿ ಸಾಗಿದೆ’ ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ನಟೇಶ ಹೇಳಿದರು.</p>.<p>ನಗರದ ಖಾಸಗಿ ಹೋಟೆಲ್ನಲ್ಲಿ ಎಜಿ ಆ್ಯಂಡ್ ಪಿ ಪ್ರಥಮ ಕಂಪನಿಯು ಸಿಟಿ ಗ್ಯಾಸ್ ವಿತರಣಾ ಕಂಪನಿ ಎಜಿ & ಪಿ ಪ್ರಥಮ್ ರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸಹಯೋಗದೊಂದಿಗೆ ಆಯೋಜಿಸಿದ್ದ ಕೈಗಾರಿಕಾ ಜಾಗೃತಿ ಸಭೆಯಲ್ಲಿ ‘ಕೊಳವೆ ಅನಿಲವನ್ನು ಕಂಪನಿಗಳು ಆಳವಡಿಸುವುದರಿಂದ ಉಂಟಾಗಬಹುದಾದ ಪ್ರಯೋಜನಗಳು’ ಕುರಿತ ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.</p>.<p>‘ಪರಿಸರ ಸ್ನೇಹಿ ಅನಿಲ ಬಳಕೆ ಉತ್ತೇಜನ ನೀಡಲು ಸರ್ಕಾರ ಒತ್ತು ನೀಡಿದೆ. ಅದರ ಮೂಲಕ ಈಗಾಗಲೇ ಮನೆ ಮನೆಗೆ ಪೈಪ್ಲೈನ್ ಮೂಲಕ ಸಂಪರ್ಕ ಕಾರ್ಯ ಪ್ರಗತಿಯಲ್ಲಿದೆ. ರಾಯಚೂರು ಜಿಲ್ಲೆಯ ಕೈಗಾರಿಕಾ ಪ್ರದೇಶಗಳಿಗೂ ಈ ಅನಿಲ ಬಳಕೆಯ ಸಾಧಕ ಬಾಧಕಗಳ ಬಗ್ಗೆ ಸಮಾಲೋಚನೆ ನಡೆಯಮೇಕಿದ. ಇದು ಉದ್ಯಮಗಳಿಗೆ ಹೇಗೆ ಲಾಭದಾಯಕ ಎಂಬುದರ ಕುರಿತು ಕೈಗಾರಿಕೋದ್ಯಮಿಗಳಗೆ ಮನವರಿಕೆ ಮಾಡಿಕೊಡಬೇಕಾಗಿದೆ’ ಎಂದರು.</p>.<p>ಬಿಕೆಆರ್ ಉಪ ಪ್ರಾದೇಶಿಕ ಮುಖ್ಯಸ್ಥ ಜಗದೀಶ್ ಈರಣ್ಣ ಪರ್ಲಿ ಮಾತನಾಡಿದರು. ವಿವಿಧ ಕೈಗಾರಿಕೆಗಳ 20ಕ್ಕೂ ಅಧಿಕ ಮಧ್ಯಸ್ಥಗಾರರು ಭಾಗವಹಿಸಿದ್ದರು. ಎಜಿ & ಪಿ ಪ್ರಥಮ ಕಂಪನಿಯ ಕೃಷ್ಣಮೂರ್ತಿ ರಮೇಶ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಯಚೂರು:</strong> 'ಪರಿಸರ ಸ್ನೇಹಿ ಅನಿಲ ಇಂಧನವನ್ನು ಕೈಗಾರಿಕೆ ಹಾಗೂ ಮನೆಗಳಿಗೆ ಬಳಕೆ ಮಾಡುವ ನಿಟ್ಟಿನಲ್ಲಿ ಅರಿವು ಮೂಡಿಸುವ ಕೆಲಸ ನಿರಂತರವಾಗಿ ಸಾಗಿದೆ’ ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ನಟೇಶ ಹೇಳಿದರು.</p>.<p>ನಗರದ ಖಾಸಗಿ ಹೋಟೆಲ್ನಲ್ಲಿ ಎಜಿ ಆ್ಯಂಡ್ ಪಿ ಪ್ರಥಮ ಕಂಪನಿಯು ಸಿಟಿ ಗ್ಯಾಸ್ ವಿತರಣಾ ಕಂಪನಿ ಎಜಿ & ಪಿ ಪ್ರಥಮ್ ರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸಹಯೋಗದೊಂದಿಗೆ ಆಯೋಜಿಸಿದ್ದ ಕೈಗಾರಿಕಾ ಜಾಗೃತಿ ಸಭೆಯಲ್ಲಿ ‘ಕೊಳವೆ ಅನಿಲವನ್ನು ಕಂಪನಿಗಳು ಆಳವಡಿಸುವುದರಿಂದ ಉಂಟಾಗಬಹುದಾದ ಪ್ರಯೋಜನಗಳು’ ಕುರಿತ ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.</p>.<p>‘ಪರಿಸರ ಸ್ನೇಹಿ ಅನಿಲ ಬಳಕೆ ಉತ್ತೇಜನ ನೀಡಲು ಸರ್ಕಾರ ಒತ್ತು ನೀಡಿದೆ. ಅದರ ಮೂಲಕ ಈಗಾಗಲೇ ಮನೆ ಮನೆಗೆ ಪೈಪ್ಲೈನ್ ಮೂಲಕ ಸಂಪರ್ಕ ಕಾರ್ಯ ಪ್ರಗತಿಯಲ್ಲಿದೆ. ರಾಯಚೂರು ಜಿಲ್ಲೆಯ ಕೈಗಾರಿಕಾ ಪ್ರದೇಶಗಳಿಗೂ ಈ ಅನಿಲ ಬಳಕೆಯ ಸಾಧಕ ಬಾಧಕಗಳ ಬಗ್ಗೆ ಸಮಾಲೋಚನೆ ನಡೆಯಮೇಕಿದ. ಇದು ಉದ್ಯಮಗಳಿಗೆ ಹೇಗೆ ಲಾಭದಾಯಕ ಎಂಬುದರ ಕುರಿತು ಕೈಗಾರಿಕೋದ್ಯಮಿಗಳಗೆ ಮನವರಿಕೆ ಮಾಡಿಕೊಡಬೇಕಾಗಿದೆ’ ಎಂದರು.</p>.<p>ಬಿಕೆಆರ್ ಉಪ ಪ್ರಾದೇಶಿಕ ಮುಖ್ಯಸ್ಥ ಜಗದೀಶ್ ಈರಣ್ಣ ಪರ್ಲಿ ಮಾತನಾಡಿದರು. ವಿವಿಧ ಕೈಗಾರಿಕೆಗಳ 20ಕ್ಕೂ ಅಧಿಕ ಮಧ್ಯಸ್ಥಗಾರರು ಭಾಗವಹಿಸಿದ್ದರು. ಎಜಿ & ಪಿ ಪ್ರಥಮ ಕಂಪನಿಯ ಕೃಷ್ಣಮೂರ್ತಿ ರಮೇಶ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>