<figcaption>""</figcaption>.<p><strong>ರಾಯಚೂರು: </strong>ಜಿಲ್ಲೆಯ ಲಿಂಗಸುಗೂರು ತಾಲ್ಲೂಕು ಯಲಗಟ್ಟಾ ಗ್ರಾಮದ ಹೊರವಲಯ ಮರದ ಬುಟ್ಟಿಯಲ್ಲಿ ಬಿಟ್ಟು ಹೋಗಿದ್ದ ಹೆಣ್ಣು ಶಿಶುವನ್ನು ಗ್ರಾಮಸ್ಥರು ಭಾನುವಾರ ಬೆಳಿಗ್ಗೆ ರಕ್ಷಿಸಿದ್ದಾರೆ.</p>.<p>ರಸ್ತೆ ಪಕ್ಕದಲ್ಲಿ ಮಗುವೊಂದು ಅಳುತ್ತಿದ್ದ ಸದ್ದು ಕೇಳಿದ ಗ್ರಾಮಸ್ಥರು ಧಾವಿಸಿ ನೋಡಿದರು. ಬುಟ್ಟಿಯಲ್ಲಿದ್ದ ಮಗುವನ್ನು ಕಂಡು ಮನಕರಗಿ ರಕ್ಷಿಸಿದರು. ಸದ್ಯಕ್ಕೆ ಮಗು ನಗುತ್ತಾ, ಆರೋಗ್ಯವಾಗಿದೆ.ಮಗು ಪತ್ತೆಯಾದ ಬಗ್ಗೆಪೊಲೀಸರಿಗೆ ಮಾಹಿತಿ ನೀಡುತ್ತೇವೆ ಎಂದುಗ್ರಾಮಸ್ಥರು ತಿಳಿಸಿದರು.</p>.<div style="text-align:center"><figcaption><em><strong>ಶಕ್ತಿನಗರ ಬಸ್ನಿಲ್ದಾಣದಲ್ಲಿ ಕಂಡು ಬಂದ ಗೋಡೆ ಬರಹ</strong></em></figcaption></div>.<p><strong>ಸಿಎಎ ವಿರುದ್ಧ ಗೋಡೆ ಬರಹ</strong></p>.<p>ರಾಯಚೂರು ತಾಲ್ಲೂಕಿನ ಶಕ್ತಿನಗರ ಬಸ್ ನಿಲ್ದಾಣ ಹಾಗೂ ಕೆಲವು ವಾಣಿಜ್ಯ ಮಳಿಗೆ ಕಟ್ಟಡಗಳ ಮೇಲೆ ಸಿಎಎ ಜಾರಿಗೊಳಿಸುವುದರ ವಿರುದ್ಧ ಗೋಡೆ ಬರಹ ಮಾಡಲಾಗಿದೆ.</p>.<p>ಯಾರು ಬರೆದಿದ್ದಾರೆ ಎಂಬುದು ಗೊತ್ತಾಗಿಲ್ಲ. ಶನಿವಾರ ತಡರಾತ್ರಿ ಗೋಡೆ ಬರಹ ಮಾಡಿರಬಹುದು ಎಂದು ಹೇಳಲಾಗುತ್ತಿದೆ. ಜಿಲ್ಲೆಯ ಮಸ್ಕಿ ಪಟ್ಟಣದ ಹೊರವಲಯದ ಐತಿಹಾಸಿಕ ಶಿಲೆಗಳ ಮೇಲೆ ಈಚೆಗೆ ಕಿಡಿಗೇಡಿಗಳು ಇಂಥಗೋಡೆಬರಹಗಳು ಈಚೆಗೆ ಕಂಡು ಬಂದಿದ್ದವು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<figcaption>""</figcaption>.<p><strong>ರಾಯಚೂರು: </strong>ಜಿಲ್ಲೆಯ ಲಿಂಗಸುಗೂರು ತಾಲ್ಲೂಕು ಯಲಗಟ್ಟಾ ಗ್ರಾಮದ ಹೊರವಲಯ ಮರದ ಬುಟ್ಟಿಯಲ್ಲಿ ಬಿಟ್ಟು ಹೋಗಿದ್ದ ಹೆಣ್ಣು ಶಿಶುವನ್ನು ಗ್ರಾಮಸ್ಥರು ಭಾನುವಾರ ಬೆಳಿಗ್ಗೆ ರಕ್ಷಿಸಿದ್ದಾರೆ.</p>.<p>ರಸ್ತೆ ಪಕ್ಕದಲ್ಲಿ ಮಗುವೊಂದು ಅಳುತ್ತಿದ್ದ ಸದ್ದು ಕೇಳಿದ ಗ್ರಾಮಸ್ಥರು ಧಾವಿಸಿ ನೋಡಿದರು. ಬುಟ್ಟಿಯಲ್ಲಿದ್ದ ಮಗುವನ್ನು ಕಂಡು ಮನಕರಗಿ ರಕ್ಷಿಸಿದರು. ಸದ್ಯಕ್ಕೆ ಮಗು ನಗುತ್ತಾ, ಆರೋಗ್ಯವಾಗಿದೆ.ಮಗು ಪತ್ತೆಯಾದ ಬಗ್ಗೆಪೊಲೀಸರಿಗೆ ಮಾಹಿತಿ ನೀಡುತ್ತೇವೆ ಎಂದುಗ್ರಾಮಸ್ಥರು ತಿಳಿಸಿದರು.</p>.<div style="text-align:center"><figcaption><em><strong>ಶಕ್ತಿನಗರ ಬಸ್ನಿಲ್ದಾಣದಲ್ಲಿ ಕಂಡು ಬಂದ ಗೋಡೆ ಬರಹ</strong></em></figcaption></div>.<p><strong>ಸಿಎಎ ವಿರುದ್ಧ ಗೋಡೆ ಬರಹ</strong></p>.<p>ರಾಯಚೂರು ತಾಲ್ಲೂಕಿನ ಶಕ್ತಿನಗರ ಬಸ್ ನಿಲ್ದಾಣ ಹಾಗೂ ಕೆಲವು ವಾಣಿಜ್ಯ ಮಳಿಗೆ ಕಟ್ಟಡಗಳ ಮೇಲೆ ಸಿಎಎ ಜಾರಿಗೊಳಿಸುವುದರ ವಿರುದ್ಧ ಗೋಡೆ ಬರಹ ಮಾಡಲಾಗಿದೆ.</p>.<p>ಯಾರು ಬರೆದಿದ್ದಾರೆ ಎಂಬುದು ಗೊತ್ತಾಗಿಲ್ಲ. ಶನಿವಾರ ತಡರಾತ್ರಿ ಗೋಡೆ ಬರಹ ಮಾಡಿರಬಹುದು ಎಂದು ಹೇಳಲಾಗುತ್ತಿದೆ. ಜಿಲ್ಲೆಯ ಮಸ್ಕಿ ಪಟ್ಟಣದ ಹೊರವಲಯದ ಐತಿಹಾಸಿಕ ಶಿಲೆಗಳ ಮೇಲೆ ಈಚೆಗೆ ಕಿಡಿಗೇಡಿಗಳು ಇಂಥಗೋಡೆಬರಹಗಳು ಈಚೆಗೆ ಕಂಡು ಬಂದಿದ್ದವು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>