<p><strong>ಮುದಗಲ್:</strong> ಪಟ್ಟಣದ ವೆಂಕಟರಾಯನ ಪೇಟೆಯಲ್ಲಿರುವ ಗೋಸಲರಾಯನ ಜಾತ್ರಾ ಮಹೋತ್ಸವ ಶುಕ್ರವಾರ ಜರುಗಿತು.</p>.<p>ಶ್ರಾವಣ ಮಾಸದ ಪ್ರಯುಕ್ತ ದೇವಸ್ಥಾನದಲ್ಲಿ ತಿಂಗಳಿಂದ ಶಿವ ಭಜನೆ ಜರುಗಿತು. ಜಾತ್ರೆ ನಿಮಿತ್ತ ಗೋಸಲರಾಯನ ಮೂರ್ತಿಗೆ ಬೆಳಗಿನ ಜಾವ ರುದ್ರಾಭಿಷೇಕ, ಎಲೆಚೆಟ್ಟು ಸೇವೆ, ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಜರುಗಿದವು.</p>.<p>ಅಲಂಕೃತ ವಾಹನದಲ್ಲಿ ಗೋಸಲರಾಯ (ಆಂಜನೇಯ)ನ ಭಾವಚಿತ್ರ ಇಟ್ಟು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿದರು. ಮೆರವಣಿಗೆಯಲ್ಲಿ 251 ಪೂರ್ಣ ಕುಂಭಗಳನ್ನು ಹೊತ್ತು ಮಹಿಳೆಯರು ಸಾಗಿದರು. </p>.<p>ಯುವಕರು ಡೊಳ್ಳು ಕುಣಿತ ಮತ್ತು ಮಾರುತೇಶ್ವರ ಪದಗಳಿಗೆ ನರ್ತಿಸಿದರು. ಮಹಿಳೆಯರು, ಮಕ್ಕಳು ಗೋಸಲರಾಯನ ಪರ ಜಯಘೋಷ ಮಾಡಿದರು. ಪುರಸಭೆ ಸದಸ್ಯೆ ಮಹಾಲಕ್ಷ್ಮಿ ಕರಿಯಪ್ಪ ಯಾದವ ಮೆರವಣಿಗೆಗೆ ಚಾಲನೆ ನೀಡಿದರು.</p>.<p>ಪಿ.ಎಸ್.ಐ ವೆಂಕಟೇಶ ಮಾಡಗೇರಿ, ಮುಖಂಡರಾದ ತಮ್ಮಣ್ಣ ಗುತ್ತೇದಾರ, ಕರಿಯಪ್ಪ ಯಾದವ, ಪುರಸಭೆ ಸದಸ್ಯ ಗುಂಡಪ್ಪ ಗಂಗಾವತಿ, ರಾಮು ಯಾದವ, ನಾಗರಾಜ ಪೇಂಟರ್, ಬಸವರಾಜ, ವೆಂಕೋಬ ಮುದಗಲ್ ಹಾಗೂ ನಾಗರಾಜ ತಳವಾರ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುದಗಲ್:</strong> ಪಟ್ಟಣದ ವೆಂಕಟರಾಯನ ಪೇಟೆಯಲ್ಲಿರುವ ಗೋಸಲರಾಯನ ಜಾತ್ರಾ ಮಹೋತ್ಸವ ಶುಕ್ರವಾರ ಜರುಗಿತು.</p>.<p>ಶ್ರಾವಣ ಮಾಸದ ಪ್ರಯುಕ್ತ ದೇವಸ್ಥಾನದಲ್ಲಿ ತಿಂಗಳಿಂದ ಶಿವ ಭಜನೆ ಜರುಗಿತು. ಜಾತ್ರೆ ನಿಮಿತ್ತ ಗೋಸಲರಾಯನ ಮೂರ್ತಿಗೆ ಬೆಳಗಿನ ಜಾವ ರುದ್ರಾಭಿಷೇಕ, ಎಲೆಚೆಟ್ಟು ಸೇವೆ, ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಜರುಗಿದವು.</p>.<p>ಅಲಂಕೃತ ವಾಹನದಲ್ಲಿ ಗೋಸಲರಾಯ (ಆಂಜನೇಯ)ನ ಭಾವಚಿತ್ರ ಇಟ್ಟು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿದರು. ಮೆರವಣಿಗೆಯಲ್ಲಿ 251 ಪೂರ್ಣ ಕುಂಭಗಳನ್ನು ಹೊತ್ತು ಮಹಿಳೆಯರು ಸಾಗಿದರು. </p>.<p>ಯುವಕರು ಡೊಳ್ಳು ಕುಣಿತ ಮತ್ತು ಮಾರುತೇಶ್ವರ ಪದಗಳಿಗೆ ನರ್ತಿಸಿದರು. ಮಹಿಳೆಯರು, ಮಕ್ಕಳು ಗೋಸಲರಾಯನ ಪರ ಜಯಘೋಷ ಮಾಡಿದರು. ಪುರಸಭೆ ಸದಸ್ಯೆ ಮಹಾಲಕ್ಷ್ಮಿ ಕರಿಯಪ್ಪ ಯಾದವ ಮೆರವಣಿಗೆಗೆ ಚಾಲನೆ ನೀಡಿದರು.</p>.<p>ಪಿ.ಎಸ್.ಐ ವೆಂಕಟೇಶ ಮಾಡಗೇರಿ, ಮುಖಂಡರಾದ ತಮ್ಮಣ್ಣ ಗುತ್ತೇದಾರ, ಕರಿಯಪ್ಪ ಯಾದವ, ಪುರಸಭೆ ಸದಸ್ಯ ಗುಂಡಪ್ಪ ಗಂಗಾವತಿ, ರಾಮು ಯಾದವ, ನಾಗರಾಜ ಪೇಂಟರ್, ಬಸವರಾಜ, ವೆಂಕೋಬ ಮುದಗಲ್ ಹಾಗೂ ನಾಗರಾಜ ತಳವಾರ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>