<p><strong>ಹಟ್ಟಿ ಚಿನ್ನದ ಗಣಿ</strong>: ಹಟ್ಟಿ ಪಟ್ಟಣದ ಸಿಬ್ಬಂದಿ ಹಾಗೂ ಕಾರ್ಮಿಕ ಸಂಘದ ಚುನಾವಣೆ ಪ್ರಚಾರ ಜೋರಾಗಿದ್ದು ಕಾರ್ಮಿಕರು ಯಾರ ಕೈ ಹಿಡಿಯಲಿದ್ದಾರೆ ಎನ್ನುವುದು ಕುತೂಹಲ ಮನೆಮಾಡಿದೆ.</p>.<p>ತಕ್ಕಡಿ ಚಿಹ್ನೆಯ ಎಐಟಿಯುಸಿ, ಸಿಐಟಿಯು ಚಿಹ್ನೆಯ ಬಂಡಿಗಾಲಿ, ಆಕಳು ಪಕ್ಷದ ಅಭ್ಯರ್ಥಿಗಳ ಮಧ್ಯೆ ಪೈಪೋಟಿ ಇದೆ. ಹಟ್ಟಿ ಚಿನ್ನದ ಗಣಿ ಸಿಬ್ಬಂದಿ ಹಾಗೂ ಕಾರ್ಮಿಕ ಸಂಘದಲ್ಲಿರುವ 25 ಪದಾಧಿಕಾರಿಗಳ ಸ್ಥಾನಗಳಿಗೆ ಒಟ್ಟು 120 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 3,385 ಕಾರ್ಮಿಕರ ಮತಗಳು ಇವೆ.</p>.<p>ಜೂ.21ರಂದು ಮತದಾನ ನಡೆಯಲಿದ್ದು 22ರಂದು ಫಲಿತಾಂಶ ಪ್ರಕಟವಾಗಲಿದೆ. ಅಧ್ಯಕ್ಷ ಸ್ಥಾನಕ್ಕೆ, ಎಐಟಿಯುಸಿ ಸಂಘದ ಚಂದ್ರಶೇಖರ, ಸಿಐಟಿಯು ಕೆ.ಮಹಾಂತೇಶ, ಟಿಯುಸಿಐ ಸಂಘದ ಮಾನಸಯ್ಯ, ಆಕಳು ಪಕ್ಷದ ರಾಘವೇಂದ್ರ ಕುಷ್ಟಗಿ ಸ್ಪರ್ಧಿಸಿದ್ದಾರೆ.</p>.<p>ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಎಐಟಿಯುಸಿ ಸಂಘದ ವಿಜಯಭಾಸ್ಕರ್, ಸಿಐಟಿಯು ಬಂಡಿಗಾಲಿಯ ಎಸ್.ಎಂ.ಶಪೀ, ಆಕಳು ಪಕ್ಷದ ವಾಲೇಬಾಬು, ಟಿಯುಸಿಐ ಸಂಘದ ಅಮೀರ್ ಅಲೀ ಕಣದಲ್ಲಿ ಇದ್ದಾರೆ.</p>.<p>ನಾಲ್ಕು ಸಂಘಟನೆಯ ಕಾರ್ಮಿಕ ಮುಖಂಡರು ಮೆಡಿಕಲ್ ಅನ್ಫಿಟ್ ಜಾರಿಗೆ ತರುತ್ತೇವೆ ಎಂದು ಭರವಸೆ ನೀಡಿ ಮತ ನೀಡುವಂತೆ ಮನವಿ ಮಾಡುತ್ತಿದ್ದಾರೆ. ತಕ್ಕಡಿ, ಬಂಡಿಗಾಲಿ, ಆಕಳು ಪಕ್ಷಗಳ ಪೈಪೋಟಿ ಇದ್ದು ಕಾರ್ಮಿಕ ಒಲವು ಯಾರ ಕಡೆ ಇದೆ ಎನ್ನುವುದು ಭಾನುವಾರ ತಿಳಿಯಲಿದೆ.</p>.<p><strong>ಹರಿದಾಡಿದ ಆಡಿಯೊ:</strong> ಗಣಿ ಕಂಪನಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎನ್ನಲಾದ ಆಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಕೆಲ ಮುಖಂಡರಿಗೆ ಮುಜುಗರಕ್ಕೆ ಕಾರಣವಾಗಿದೆ. </p>.<p>ಬಹಿರಂಗ ಸಭೆಯಲ್ಲಿ ಆರೋಪ ಪ್ರತ್ಯಾರೋಪ ಮಾಡಿದ ಕಾರ್ಮಿಕ ಮುಖಂಡರು ತಮ್ಮ ಗುಟ್ಟನ್ನು ತಾವೇ ಬಯಲು ಮಾಡಿದ್ದಾರೆ ಎಂದು ಕಾರ್ಮಿಕರು ಮಾತನಾಡಿಕೊಳ್ಳುತ್ತಿದ್ದಾರೆ. </p>.<div><blockquote>ಎಐಟಿಯುಸಿನಲ್ಲಿ ಉಸಿರುಗಟ್ಟುವ ವಾತಾವರಣ ಇದೆ. ಸಿಯುಟಿಯನ ಬಂಡಿಗಾಲಿಯ ಮೇಲೆ ಕಾರ್ಮಿಕರು ಒಲವು ತೋರುತ್ತಿದ್ದಾರೆ. ಈ ಭಾರಿ ಸಿಐಟಿಯು ಅಧಿಕಾರಕ್ಕೆ ಬರಲಿದೆ. </blockquote><span class="attribution">– ಎಸ್.ಎಫ್.ಶಪೀ, ಸಿಐಟಿಯು ಅಭ್ಯರ್ಥಿ</span></div>.<div><blockquote>ಐತಿಹಾಸಿಕ ವೇತನ ಒಪ್ಪಂದವನ್ನು ಎಐಟಿಯುಸಿ ಸಂಘಟನೆ ಮಾಡಿದೆ. ತಕ್ಕಡಿ ಪಾರ್ಟಿ ಅಧಿಕಾರಕ್ಕೆ ಬಂದ ಕೂಡಲೇ ಕಾರ್ಮಿಕರ ಸಮಸ್ಯೆ ಬಗೆಹರಿಯಲಿವೆ.</blockquote><span class="attribution"> – ವಿಜಯಬಾಸ್ಕರ್, ಎಐಟಿಯುಸಿ ರಾಜ್ಯ ಪ್ರಧಾನ ಕಾರ್ಯದರ್ಶಿ </span></div>.<div><blockquote>ಎಐಟಿಯುಸಿ ಸಿಯುಟಿಐ ಒಂದೇ ನಾಣ್ಯದ ಎರಡು ಮುಖಗಳು. ಕಾರ್ಮಿಕರು ಇವರ ನಡೆಗೆ ಬೇಸತ್ತು ಹೋಗಿದ್ದಾರೆ. ಎರಡು ಸಂಘಟನೆಗಳು ಸೋಲುವುದು ಖಚಿತ. ಟಿಯುಸಿಐ ಸೈಕಲ್ ಪಾರ್ಟಿ ಜಯಗಳಿಸಲಿದೆ. </blockquote><span class="attribution">– ಅಮೀರ್ ಅಲೀ, ಟಿಯುಸಿಐ ಸಂಘದ ಪ್ರಧಾನ ಕಾರ್ಯದರ್ಶಿ </span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಟ್ಟಿ ಚಿನ್ನದ ಗಣಿ</strong>: ಹಟ್ಟಿ ಪಟ್ಟಣದ ಸಿಬ್ಬಂದಿ ಹಾಗೂ ಕಾರ್ಮಿಕ ಸಂಘದ ಚುನಾವಣೆ ಪ್ರಚಾರ ಜೋರಾಗಿದ್ದು ಕಾರ್ಮಿಕರು ಯಾರ ಕೈ ಹಿಡಿಯಲಿದ್ದಾರೆ ಎನ್ನುವುದು ಕುತೂಹಲ ಮನೆಮಾಡಿದೆ.</p>.<p>ತಕ್ಕಡಿ ಚಿಹ್ನೆಯ ಎಐಟಿಯುಸಿ, ಸಿಐಟಿಯು ಚಿಹ್ನೆಯ ಬಂಡಿಗಾಲಿ, ಆಕಳು ಪಕ್ಷದ ಅಭ್ಯರ್ಥಿಗಳ ಮಧ್ಯೆ ಪೈಪೋಟಿ ಇದೆ. ಹಟ್ಟಿ ಚಿನ್ನದ ಗಣಿ ಸಿಬ್ಬಂದಿ ಹಾಗೂ ಕಾರ್ಮಿಕ ಸಂಘದಲ್ಲಿರುವ 25 ಪದಾಧಿಕಾರಿಗಳ ಸ್ಥಾನಗಳಿಗೆ ಒಟ್ಟು 120 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 3,385 ಕಾರ್ಮಿಕರ ಮತಗಳು ಇವೆ.</p>.<p>ಜೂ.21ರಂದು ಮತದಾನ ನಡೆಯಲಿದ್ದು 22ರಂದು ಫಲಿತಾಂಶ ಪ್ರಕಟವಾಗಲಿದೆ. ಅಧ್ಯಕ್ಷ ಸ್ಥಾನಕ್ಕೆ, ಎಐಟಿಯುಸಿ ಸಂಘದ ಚಂದ್ರಶೇಖರ, ಸಿಐಟಿಯು ಕೆ.ಮಹಾಂತೇಶ, ಟಿಯುಸಿಐ ಸಂಘದ ಮಾನಸಯ್ಯ, ಆಕಳು ಪಕ್ಷದ ರಾಘವೇಂದ್ರ ಕುಷ್ಟಗಿ ಸ್ಪರ್ಧಿಸಿದ್ದಾರೆ.</p>.<p>ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಎಐಟಿಯುಸಿ ಸಂಘದ ವಿಜಯಭಾಸ್ಕರ್, ಸಿಐಟಿಯು ಬಂಡಿಗಾಲಿಯ ಎಸ್.ಎಂ.ಶಪೀ, ಆಕಳು ಪಕ್ಷದ ವಾಲೇಬಾಬು, ಟಿಯುಸಿಐ ಸಂಘದ ಅಮೀರ್ ಅಲೀ ಕಣದಲ್ಲಿ ಇದ್ದಾರೆ.</p>.<p>ನಾಲ್ಕು ಸಂಘಟನೆಯ ಕಾರ್ಮಿಕ ಮುಖಂಡರು ಮೆಡಿಕಲ್ ಅನ್ಫಿಟ್ ಜಾರಿಗೆ ತರುತ್ತೇವೆ ಎಂದು ಭರವಸೆ ನೀಡಿ ಮತ ನೀಡುವಂತೆ ಮನವಿ ಮಾಡುತ್ತಿದ್ದಾರೆ. ತಕ್ಕಡಿ, ಬಂಡಿಗಾಲಿ, ಆಕಳು ಪಕ್ಷಗಳ ಪೈಪೋಟಿ ಇದ್ದು ಕಾರ್ಮಿಕ ಒಲವು ಯಾರ ಕಡೆ ಇದೆ ಎನ್ನುವುದು ಭಾನುವಾರ ತಿಳಿಯಲಿದೆ.</p>.<p><strong>ಹರಿದಾಡಿದ ಆಡಿಯೊ:</strong> ಗಣಿ ಕಂಪನಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎನ್ನಲಾದ ಆಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಕೆಲ ಮುಖಂಡರಿಗೆ ಮುಜುಗರಕ್ಕೆ ಕಾರಣವಾಗಿದೆ. </p>.<p>ಬಹಿರಂಗ ಸಭೆಯಲ್ಲಿ ಆರೋಪ ಪ್ರತ್ಯಾರೋಪ ಮಾಡಿದ ಕಾರ್ಮಿಕ ಮುಖಂಡರು ತಮ್ಮ ಗುಟ್ಟನ್ನು ತಾವೇ ಬಯಲು ಮಾಡಿದ್ದಾರೆ ಎಂದು ಕಾರ್ಮಿಕರು ಮಾತನಾಡಿಕೊಳ್ಳುತ್ತಿದ್ದಾರೆ. </p>.<div><blockquote>ಎಐಟಿಯುಸಿನಲ್ಲಿ ಉಸಿರುಗಟ್ಟುವ ವಾತಾವರಣ ಇದೆ. ಸಿಯುಟಿಯನ ಬಂಡಿಗಾಲಿಯ ಮೇಲೆ ಕಾರ್ಮಿಕರು ಒಲವು ತೋರುತ್ತಿದ್ದಾರೆ. ಈ ಭಾರಿ ಸಿಐಟಿಯು ಅಧಿಕಾರಕ್ಕೆ ಬರಲಿದೆ. </blockquote><span class="attribution">– ಎಸ್.ಎಫ್.ಶಪೀ, ಸಿಐಟಿಯು ಅಭ್ಯರ್ಥಿ</span></div>.<div><blockquote>ಐತಿಹಾಸಿಕ ವೇತನ ಒಪ್ಪಂದವನ್ನು ಎಐಟಿಯುಸಿ ಸಂಘಟನೆ ಮಾಡಿದೆ. ತಕ್ಕಡಿ ಪಾರ್ಟಿ ಅಧಿಕಾರಕ್ಕೆ ಬಂದ ಕೂಡಲೇ ಕಾರ್ಮಿಕರ ಸಮಸ್ಯೆ ಬಗೆಹರಿಯಲಿವೆ.</blockquote><span class="attribution"> – ವಿಜಯಬಾಸ್ಕರ್, ಎಐಟಿಯುಸಿ ರಾಜ್ಯ ಪ್ರಧಾನ ಕಾರ್ಯದರ್ಶಿ </span></div>.<div><blockquote>ಎಐಟಿಯುಸಿ ಸಿಯುಟಿಐ ಒಂದೇ ನಾಣ್ಯದ ಎರಡು ಮುಖಗಳು. ಕಾರ್ಮಿಕರು ಇವರ ನಡೆಗೆ ಬೇಸತ್ತು ಹೋಗಿದ್ದಾರೆ. ಎರಡು ಸಂಘಟನೆಗಳು ಸೋಲುವುದು ಖಚಿತ. ಟಿಯುಸಿಐ ಸೈಕಲ್ ಪಾರ್ಟಿ ಜಯಗಳಿಸಲಿದೆ. </blockquote><span class="attribution">– ಅಮೀರ್ ಅಲೀ, ಟಿಯುಸಿಐ ಸಂಘದ ಪ್ರಧಾನ ಕಾರ್ಯದರ್ಶಿ </span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>