<p><strong>ಮುದಗಲ್</strong>: ಸಮೀಪದ ತಲೇಖಾನ ಗ್ರಾಮ ಪಂಚಾಯಿತಿಯಲ್ಲಿನ 2024-25ನೇ ಸಾಲಿನಲ್ಲಿ ಮಂಜೂರಾದ ಡಾ.ಅಂಬೇಡ್ಕರ್ ವಸತಿ ಯೋಜನೆ 100 ಹಾಗೂ ಬಸವ ವಸತಿ ಯೋಜನೆಯಡಿ 100 ಮನೆಗಳನ್ನು ರಾಜೀವ್ ಗಾಂಧಿ ವಸತಿ ನಿಗಮದ ಸಹಾಯಕ ಪ್ರಧಾನ ವ್ಯವಸ್ಥಾಪಕ (ಕಾ.ಅ) ಉಸ್ಮಾನ್ ಪಾಷಾ ಪರಿಶೀಲಿಸಿದರು.</p>.<p>ಗ್ರಾಮ ಪಂಚಾಯಿತಿಯಲ್ಲಿ ಸಾರ್ವಜನಿಕರ ಸಭೆ ನಡೆಸಿ, ದಾಖಲೆ ಪರಿಶೀಲಿಸಿರು. ಯರದೊಡ್ಡಿ, ಯರದೊಡ್ಡಿ ತಾಂಡಾ, ಹಡಗಲಿ ತಾಂಡಾ, ಸೊಂಪುರ ತಾಂಡಾ, ಹಡಗಲಿ ಗ್ರಾಮಗಳಲ್ಲಿ ಫಲಾನುಭವಿಗಳ ಮನೆ, ಮನೆ ಕಟ್ಟಡದ ಬೆಸಮೆಂಟ್, ಖಾಲಿ ಜಾಗ ಪರಿಶೀಲಿಸಿದರು.</p>.<p>‘ಮನೆಗಳು ಮಂಜೂರಾಗಿ 2-3 ತಿಂಗಳಗತಿಸಿವೆ, ಪಂಚಾಯಿತಿ ಮಂಜೂರಿ ಪತ್ರ ನೀಡಿದ್ದರಿಂದ ಹರಕು-ಮರಕು ಗುಡಿಸಲು, ಹಳೆಯ ಮನೆಗಳನ್ನು ತೆರವುಗೊಳಿಸಿ, ಬುನಾದಿ ಮಾಡಿಕೊಂಡಿದ್ದೆವು. 3 ತಿಂಗಳ ಗತಿಸಿದರೂ ಮನೆ ಲಾಕ್ ಆಗಿದೆ ಎನ್ನುವ ಕಾರಣಕ್ಕೆ ಮನೆ ಕಟ್ಟುವುದನ್ನು ಸ್ಥಗಿತಗೊಳಿಸಿದ್ದೇವೆ’ ಎಂದು ಫಲಾನುಭವಿ ಶಾರದಮ್ಮ ಹೇಳಿದರು.</p>.<p>‘ಆರ್ಜಿಎಚ್ಎಲ್ ನಿಯಮದಂತೆ ವಾರ್ಡ್ ಸಭೆ, ಗ್ರಾಮಸಭೆ, ಸಾಮಾನ್ಯ ಸಭೆ ನಡೆಸಿ ಮನೆ ಮಂಜೂರುಗೊಳಿಸಿದ್ದೇವೆ’ ಎಂದು ಪಂಚಾಯಿತಿ ಸದಸ್ಯ ದುರುಗಪ್ಪ ಕಟ್ಟಿಮನಿ, ಹನುಮಂತ ಗಂಟಿ, ಮಾನಸಿಂಗ್, ಪಾಂಡುರಂಗ, ಮೌನೇಶ ಭೋಗಾಪುರ, ಮಲ್ಲಮ್ಮ, ಚನ್ನಮ್ಮ ಅಧಿಕಾರಿಗಳ ಗಮನಕ್ಕೆ ತಂದರು.</p>.<p>ವಸತಿ ನಿಗಮದ ಕಿರಿಯ ಸಾಹಯಕ ಜಯಂತಿ ಪಿ., ಪಿಡಿಒ ಜ್ಯೋತಿಬಾಯಿ, ಮಹಿಬೂಬಸಾಬ, ಮಸ್ಕಿ ತಾ.ಪಂ ವಸತಿ ನಿಗಮದ ನೋಡಲ್ ಅಧಿಕಾರಿ ರಸೂಲಸಾಬ್ ಗೋನಾಳ, ಲಿಂಗಸುಗೂರು ನೋಡಲ್ ಅಧಿಕಾರಿ ಎಂ.ಡಿ. ರಸೂಲ, ಗ್ರಾ.ಪಂ. ಸದಸ್ಯರು, ಸಾರ್ವಜನಿಕರು ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುದಗಲ್</strong>: ಸಮೀಪದ ತಲೇಖಾನ ಗ್ರಾಮ ಪಂಚಾಯಿತಿಯಲ್ಲಿನ 2024-25ನೇ ಸಾಲಿನಲ್ಲಿ ಮಂಜೂರಾದ ಡಾ.ಅಂಬೇಡ್ಕರ್ ವಸತಿ ಯೋಜನೆ 100 ಹಾಗೂ ಬಸವ ವಸತಿ ಯೋಜನೆಯಡಿ 100 ಮನೆಗಳನ್ನು ರಾಜೀವ್ ಗಾಂಧಿ ವಸತಿ ನಿಗಮದ ಸಹಾಯಕ ಪ್ರಧಾನ ವ್ಯವಸ್ಥಾಪಕ (ಕಾ.ಅ) ಉಸ್ಮಾನ್ ಪಾಷಾ ಪರಿಶೀಲಿಸಿದರು.</p>.<p>ಗ್ರಾಮ ಪಂಚಾಯಿತಿಯಲ್ಲಿ ಸಾರ್ವಜನಿಕರ ಸಭೆ ನಡೆಸಿ, ದಾಖಲೆ ಪರಿಶೀಲಿಸಿರು. ಯರದೊಡ್ಡಿ, ಯರದೊಡ್ಡಿ ತಾಂಡಾ, ಹಡಗಲಿ ತಾಂಡಾ, ಸೊಂಪುರ ತಾಂಡಾ, ಹಡಗಲಿ ಗ್ರಾಮಗಳಲ್ಲಿ ಫಲಾನುಭವಿಗಳ ಮನೆ, ಮನೆ ಕಟ್ಟಡದ ಬೆಸಮೆಂಟ್, ಖಾಲಿ ಜಾಗ ಪರಿಶೀಲಿಸಿದರು.</p>.<p>‘ಮನೆಗಳು ಮಂಜೂರಾಗಿ 2-3 ತಿಂಗಳಗತಿಸಿವೆ, ಪಂಚಾಯಿತಿ ಮಂಜೂರಿ ಪತ್ರ ನೀಡಿದ್ದರಿಂದ ಹರಕು-ಮರಕು ಗುಡಿಸಲು, ಹಳೆಯ ಮನೆಗಳನ್ನು ತೆರವುಗೊಳಿಸಿ, ಬುನಾದಿ ಮಾಡಿಕೊಂಡಿದ್ದೆವು. 3 ತಿಂಗಳ ಗತಿಸಿದರೂ ಮನೆ ಲಾಕ್ ಆಗಿದೆ ಎನ್ನುವ ಕಾರಣಕ್ಕೆ ಮನೆ ಕಟ್ಟುವುದನ್ನು ಸ್ಥಗಿತಗೊಳಿಸಿದ್ದೇವೆ’ ಎಂದು ಫಲಾನುಭವಿ ಶಾರದಮ್ಮ ಹೇಳಿದರು.</p>.<p>‘ಆರ್ಜಿಎಚ್ಎಲ್ ನಿಯಮದಂತೆ ವಾರ್ಡ್ ಸಭೆ, ಗ್ರಾಮಸಭೆ, ಸಾಮಾನ್ಯ ಸಭೆ ನಡೆಸಿ ಮನೆ ಮಂಜೂರುಗೊಳಿಸಿದ್ದೇವೆ’ ಎಂದು ಪಂಚಾಯಿತಿ ಸದಸ್ಯ ದುರುಗಪ್ಪ ಕಟ್ಟಿಮನಿ, ಹನುಮಂತ ಗಂಟಿ, ಮಾನಸಿಂಗ್, ಪಾಂಡುರಂಗ, ಮೌನೇಶ ಭೋಗಾಪುರ, ಮಲ್ಲಮ್ಮ, ಚನ್ನಮ್ಮ ಅಧಿಕಾರಿಗಳ ಗಮನಕ್ಕೆ ತಂದರು.</p>.<p>ವಸತಿ ನಿಗಮದ ಕಿರಿಯ ಸಾಹಯಕ ಜಯಂತಿ ಪಿ., ಪಿಡಿಒ ಜ್ಯೋತಿಬಾಯಿ, ಮಹಿಬೂಬಸಾಬ, ಮಸ್ಕಿ ತಾ.ಪಂ ವಸತಿ ನಿಗಮದ ನೋಡಲ್ ಅಧಿಕಾರಿ ರಸೂಲಸಾಬ್ ಗೋನಾಳ, ಲಿಂಗಸುಗೂರು ನೋಡಲ್ ಅಧಿಕಾರಿ ಎಂ.ಡಿ. ರಸೂಲ, ಗ್ರಾ.ಪಂ. ಸದಸ್ಯರು, ಸಾರ್ವಜನಿಕರು ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>