<p><strong>ರಾಯಚೂರು</strong>: ನಾದ ಲೋಕ ಕಲಾಬಳಗದ ವತಿಯಿಂದ ಗಾನಯೋಗಿ ಸಂಗೀತ ಪಾಠಶಾಲೆಯ 5ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಸಂಗೀತ ಕಾರ್ಯಕ್ರಮ ಹಾಗೂ ಗದುಗಿನ ವೀರೇಶ್ವರ ಪುಣ್ಯ ಆಶ್ರಮದ ಪೀಠದ ಶ್ರೀ ಕಲ್ಲಯ್ಯ ಅಜ್ಜನವನರ ತುಲಾಭಾರ ಕಾರ್ಯಕ್ರಮ ನಡೆಯಿತು.</p>.<p>ಕಿಲ್ಲೆ ಬೃಹನ್ ಮಠದ ಶಾಂತ ಶಿವಾಚಾರ್ಯ ಸ್ವಾಮೀಜಿ, ಸೋಮವಾರಪೇಟೆ ಹಿರೇಮಠದ ಅಭಿನವ ಶ್ರೀ ರಾಚೋಟಿವೀರ ಶಿವಾಚಾರ್ಯ ಸ್ವಾಮೀಜಿ, ಮಂಗಳವಾರ ಪೇಟೆಯ ಶ್ರೀ ವೀರ ಸಂಗಮೇಶ್ವರ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು.</p>.<p>ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಮಾತನಾಡಿ, ‘ಗುರು ಶಿಷ್ಯ ಪರಂಪರೆಯನ್ನು ಮುಂದುವರಿಸಿಕೊಂಡು ಬಂದಿರುವುದು ಸ್ವಾಗತಾರ್ಹವಾಗಿದೆ. ಸಂಗೀತಕ್ಕೆ ಪುಟ್ಟರಾಜ ಗುರುಗಳ ಕೊಡುಗೆ ಅನನ್ಯವಾಗಿದೆ’ ಹೇಳಿದರು</p>.<p>ಚಂದ್ರಶೇಖರ ಪಾಟೀಲ ಮಿರ್ಜಾಪುರ ಮಾತನಾಡಿದರು. ಬಸವ ಕೇಂದ್ರದದ ಅಧ್ಯಕ್ಷ ರಾಚನಗೌಡ ಕೊಳುರ, ಪಂಡಿತ ಸುಗೂರೇಶ್ ಅಕ್ಕಿಹಾಳ, ಗುರುಪಾದಯ್ಯ ಸ್ವಾಮಿ ,ದೊಡ್ಡಯ್ಯ ಮಾಸ್ ದೊಡ್ಡಿ ವೀರೇಂದ್ರ ಪಾಟೀಲ, ಲಕ್ಷ್ಮಣ್ ದಾಸರಿ, ಪರಮೇಶ್ವರ್ ಸಾಲಿಮಠ ಪಾಲ್ಗೊಂಡಿದ್ದರು.</p>.<p>ವಿಶೇಷ ಆವಾನಿತ ಕಲಾವಿದರಾದ ವೀರಭದ್ರಪ್ಪ ಹಿರ ಬೆಣಕಲ್ ತಬಲಾ, ಗುರುಬಸವ ಮಹಾಮನಿ ವಯೊಲಿನ್ ನುಡಿಸಿದರು. ಉಚ್ಚಯ್ಯ ಸ್ವಾಮಿ ಹಾಗೂ ಶ್ರಾವಣಕುಮಾರ ವಟರ ಶಹಪುರ ಗಾಯನ ಪ್ರಸ್ತುತಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಯಚೂರು</strong>: ನಾದ ಲೋಕ ಕಲಾಬಳಗದ ವತಿಯಿಂದ ಗಾನಯೋಗಿ ಸಂಗೀತ ಪಾಠಶಾಲೆಯ 5ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಸಂಗೀತ ಕಾರ್ಯಕ್ರಮ ಹಾಗೂ ಗದುಗಿನ ವೀರೇಶ್ವರ ಪುಣ್ಯ ಆಶ್ರಮದ ಪೀಠದ ಶ್ರೀ ಕಲ್ಲಯ್ಯ ಅಜ್ಜನವನರ ತುಲಾಭಾರ ಕಾರ್ಯಕ್ರಮ ನಡೆಯಿತು.</p>.<p>ಕಿಲ್ಲೆ ಬೃಹನ್ ಮಠದ ಶಾಂತ ಶಿವಾಚಾರ್ಯ ಸ್ವಾಮೀಜಿ, ಸೋಮವಾರಪೇಟೆ ಹಿರೇಮಠದ ಅಭಿನವ ಶ್ರೀ ರಾಚೋಟಿವೀರ ಶಿವಾಚಾರ್ಯ ಸ್ವಾಮೀಜಿ, ಮಂಗಳವಾರ ಪೇಟೆಯ ಶ್ರೀ ವೀರ ಸಂಗಮೇಶ್ವರ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು.</p>.<p>ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಮಾತನಾಡಿ, ‘ಗುರು ಶಿಷ್ಯ ಪರಂಪರೆಯನ್ನು ಮುಂದುವರಿಸಿಕೊಂಡು ಬಂದಿರುವುದು ಸ್ವಾಗತಾರ್ಹವಾಗಿದೆ. ಸಂಗೀತಕ್ಕೆ ಪುಟ್ಟರಾಜ ಗುರುಗಳ ಕೊಡುಗೆ ಅನನ್ಯವಾಗಿದೆ’ ಹೇಳಿದರು</p>.<p>ಚಂದ್ರಶೇಖರ ಪಾಟೀಲ ಮಿರ್ಜಾಪುರ ಮಾತನಾಡಿದರು. ಬಸವ ಕೇಂದ್ರದದ ಅಧ್ಯಕ್ಷ ರಾಚನಗೌಡ ಕೊಳುರ, ಪಂಡಿತ ಸುಗೂರೇಶ್ ಅಕ್ಕಿಹಾಳ, ಗುರುಪಾದಯ್ಯ ಸ್ವಾಮಿ ,ದೊಡ್ಡಯ್ಯ ಮಾಸ್ ದೊಡ್ಡಿ ವೀರೇಂದ್ರ ಪಾಟೀಲ, ಲಕ್ಷ್ಮಣ್ ದಾಸರಿ, ಪರಮೇಶ್ವರ್ ಸಾಲಿಮಠ ಪಾಲ್ಗೊಂಡಿದ್ದರು.</p>.<p>ವಿಶೇಷ ಆವಾನಿತ ಕಲಾವಿದರಾದ ವೀರಭದ್ರಪ್ಪ ಹಿರ ಬೆಣಕಲ್ ತಬಲಾ, ಗುರುಬಸವ ಮಹಾಮನಿ ವಯೊಲಿನ್ ನುಡಿಸಿದರು. ಉಚ್ಚಯ್ಯ ಸ್ವಾಮಿ ಹಾಗೂ ಶ್ರಾವಣಕುಮಾರ ವಟರ ಶಹಪುರ ಗಾಯನ ಪ್ರಸ್ತುತಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>