ಜಾಲಹಳ್ಳಿ: ಸಮೀಪದ ಲಿಂಗದಹಳ್ಳಿ ಗ್ರಾಮದ ಹತ್ತಿರ ಕೃಷ್ಣಾ ನದಿ ದಂಡೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿದ ಮರಳನ್ನು ಮಂಗಳವಾರ ಸ್ಥಳೀಯ ಪಿಎಸ್ಐ ಸುಜಾತಾ ನಾಯಕ ನೇತೃತ್ವದಲ್ಲಿ ದಾಳಿ ನಡೆಸಿ ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ವಶಪಡಿಸಿಕೊಂಡ ಸುಮಾರು 928 ಮೆಟ್ರಿಕ್ ಟನ್ ಮರಳು ಸುಮಾರು ₹7.33 ಲಕ್ಷ ಮೌಲ್ಯ ಹೊಂದಿದೆ ಎಂದು ಪಿಎಸ್ಐ ತಿಳಿಸಿದ್ದಾರೆ.
ದಾಳಿಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಗೋಪಿ ಕೃಷ್ಣ, ಕಂದಾಯ ನಿರೀಕ್ಷಕ ದೇವರೆಡ್ಡಿ, ಪೋಲಿಸ್ ಸಿಬ್ಬಂದಿ ಅಯ್ಯಣ್ಣ, ದೇವರಾಜ, ಉಮೇಶ್ ಪಾಲ್ಗೊಂಡಿದ್ದರು.