<p><strong>ಹಟ್ಟಿ ಚಿನ್ನದ ಗಣಿ:</strong> ಗುರುಗುಂಟಾ ಹೋಬಳಿ ವ್ಯಾಪ್ತಿಯಲ್ಲಿ ಬೆಳೆದ ಜೋಳದ ಬೆಳೆಗೆ ಹುಳುಗಳ ಕಾಟ ಹೆಚ್ಚಾಗಿದ್ದು, ರೈತರಲ್ಲಿ ಆತಂಕ ಉಂಟಾಗಿದೆ.</p><p>ಯಲಗಟ್ಟಾ, ಮಾಚನೂರು, ಕೋಠಾ, ಮೇಧಿನಾಪೂರ, ಗೆಜ್ಜಲ ಗಟ್ಟಾ, ಆನ್ವರಿ, ನಿಲೋಗಲ್, ವೀರಾಪೂರ, ಮೇದಿನಾಪೂರ, ಕಡ್ಡೊಣಿ, ಗೌಡೂರು, ಪೈದೊಡ್ಡಿ, ಯರಜಂತಿ, ಬಂಡೆಭಾವಿ ಗ್ರಾಮದ ರೈತರು ನೀರಾವರಿ ಪ್ರದೇಶದಲ್ಲಿ 267 ಹೆಕ್ಟೇರ್, ಒಣಭೂಮಿಯಲ್ಲಿ 500 ಹೆಕ್ಟೇರ್ ಪ್ರದೇಶದಲ್ಲಿ ಜೋಳ ಬಿತ್ತನೆ<br>ಮಾಡಿದ್ದಾರೆ.</p><p>‘ಹೈನುಗಾರಿಕೆ ಮಾಡಿ ಆರ್ಥಿಕತೆ ಸುಧಾರಿಸಿಕೊಳ್ಳಬೇಕು ಎಂದುಕೊಂಡರೆ ಜಾನುವಾರಗಳಿಗೆ ಬೇಸಿಗೆ ಕಾಲದಲ್ಲಿ ಮೇವು ಬೇಕು. ಆದರೆ, ಹುಳು ಕಾಟದಿಂದ ಜೋಳದ ಕಣಿಕೆ ಸಿಗದಂತೆ ಆಗಬಹುದು’ ಎನ್ನುತ್ತಾರೆ ರೈತ ದುರುಗಪ್ಪ.</p><p>ಜೋಳದ ಬೆಳೆಯ ಸುಳಿಯಲ್ಲಿರುವ ಹುಳುಗಳನ್ನು ಕೊಲ್ಲುವುದು ರೈತರಿಗೆ ಸವಾಲಾಗಿದೆ. ಎಲೆಗಳು ಕೆಂಪು ಬಣ್ಣಕ್ಕೆ ತಿರುಗಿ ಒಣಗುತ್ತಿವೆ. ಇದರಿಂದ ಸಾಲ ಮಾಡಿ ಬಿತ್ತನೆ ಮಾಡಿದರೂ ಫಲ ಕೈಗೆ ಬರುವುದಿಲ್ಲ ಎಂಬ ಬೇಸರ ರೈತರದ್ದು. </p><p>ಮಳೆಯಿಂದ ಅನೇಕ ಬೆಳೆಗಳು ಹಾಳಾಗಿವೆ. ಜೋಳಕ್ಕೆ ಕೆಂಪು ಸುಳಿ ರೋಗದ ಕಾಟ ಹೆಚ್ಚಾಗಿದ್ದು, ಈ ಭಾಗದ ರೈತರು ಕಂಗಾಲಾಗಿದ್ದಾರೆ.</p><p>ಜೋಳಕ್ಕೆ ಯಾವುದೇ ಕೀಟನಾಶಕ ಸಿಂಪಡಣೆ ಮಾಡುತ್ತಿದ್ದಿಲ್ಲ. ಕೆಲವು ವರ್ಷದಿಂದ ಜೋಳಕ್ಕೆ ರೋಗ ತಗುಲುತ್ತಿದ್ದು, ರೈತರನ್ನು ಚಿಂತೆಗೆ ತಳ್ಳಿದೆ ಎನ್ನುತ್ತಾರೆ ಅಂಬಣ್ಣ.</p><p>ರೈತರ ನೆರವಿಗೆ ಆಗಮಿಸಬೇಕಾದ ಅಧಿಕಾರಿಗಳು ಸಮಸ್ಯೆಗಳನ್ನು ಆಲಿಸುವಲ್ಲಿ ವಿಫಲವಾಗಿದ್ದಾರೆ. ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಗಳು ನೆರವಿಗೆ ಬರಬೇಕು ಎನ್ನುವುದು ಅನ್ನದಾತರ ಆಗ್ರಹ. </p>.<div><blockquote>ಬಿಳಿ ಜೋಳದ ಬೆಳೆಗೆ ಕೆಂಪು ಹುಳುವಿನ ಕಾಟ ಹೆಚ್ಚಾಗಿದ್ದು, ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳು ಇತ್ತ ಕಡೆ ಗಮನಹರಿಸಲಿ.</blockquote><span class="attribution">– ದುರುಗಪ್ಪ, ಗೌಡೂರು ಗ್ರಾಮದ ರೈತ </span></div>.<div><blockquote>ರೈತರು ಆತಂಕ ಪಡುವ ಅಗತ್ಯವಿಲ್ಲ. ರೈತ ಸಂರ್ಪಕ ಕೇಂದ್ರಕ್ಕೆ ಆಗಮಿಸಿ ಮಾಹಿತಿ ಪಡೆದುಕೊಳ್ಳಿ.</blockquote><span class="attribution">ಹನುಮಂತ ರಾಠೋಡ್, ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ</span></div>.<div><blockquote>ಬೆಳೆಗಳು ಹಾಳಾಗುತ್ತಿದ್ದು, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ರೈತರ ಸಮಸ್ಯೆಗೆ ಸ್ಪಂದಿಸಬೇಕು. ಇಲ್ಲವಾದರೆ ಹೋರಾಟ ನಡೆಸಬೇಕಾಗುತ್ತದೆ</blockquote><span class="attribution">– ಬಸವರಾಜ, ರಾಜ್ಯ ರೈತ ಸಂಘ ಹಸಿರು ಸೇನೆಯ ತಾಲ್ಲೂಕು ಕಾರ್ಯದರ್ಶಿ </span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಟ್ಟಿ ಚಿನ್ನದ ಗಣಿ:</strong> ಗುರುಗುಂಟಾ ಹೋಬಳಿ ವ್ಯಾಪ್ತಿಯಲ್ಲಿ ಬೆಳೆದ ಜೋಳದ ಬೆಳೆಗೆ ಹುಳುಗಳ ಕಾಟ ಹೆಚ್ಚಾಗಿದ್ದು, ರೈತರಲ್ಲಿ ಆತಂಕ ಉಂಟಾಗಿದೆ.</p><p>ಯಲಗಟ್ಟಾ, ಮಾಚನೂರು, ಕೋಠಾ, ಮೇಧಿನಾಪೂರ, ಗೆಜ್ಜಲ ಗಟ್ಟಾ, ಆನ್ವರಿ, ನಿಲೋಗಲ್, ವೀರಾಪೂರ, ಮೇದಿನಾಪೂರ, ಕಡ್ಡೊಣಿ, ಗೌಡೂರು, ಪೈದೊಡ್ಡಿ, ಯರಜಂತಿ, ಬಂಡೆಭಾವಿ ಗ್ರಾಮದ ರೈತರು ನೀರಾವರಿ ಪ್ರದೇಶದಲ್ಲಿ 267 ಹೆಕ್ಟೇರ್, ಒಣಭೂಮಿಯಲ್ಲಿ 500 ಹೆಕ್ಟೇರ್ ಪ್ರದೇಶದಲ್ಲಿ ಜೋಳ ಬಿತ್ತನೆ<br>ಮಾಡಿದ್ದಾರೆ.</p><p>‘ಹೈನುಗಾರಿಕೆ ಮಾಡಿ ಆರ್ಥಿಕತೆ ಸುಧಾರಿಸಿಕೊಳ್ಳಬೇಕು ಎಂದುಕೊಂಡರೆ ಜಾನುವಾರಗಳಿಗೆ ಬೇಸಿಗೆ ಕಾಲದಲ್ಲಿ ಮೇವು ಬೇಕು. ಆದರೆ, ಹುಳು ಕಾಟದಿಂದ ಜೋಳದ ಕಣಿಕೆ ಸಿಗದಂತೆ ಆಗಬಹುದು’ ಎನ್ನುತ್ತಾರೆ ರೈತ ದುರುಗಪ್ಪ.</p><p>ಜೋಳದ ಬೆಳೆಯ ಸುಳಿಯಲ್ಲಿರುವ ಹುಳುಗಳನ್ನು ಕೊಲ್ಲುವುದು ರೈತರಿಗೆ ಸವಾಲಾಗಿದೆ. ಎಲೆಗಳು ಕೆಂಪು ಬಣ್ಣಕ್ಕೆ ತಿರುಗಿ ಒಣಗುತ್ತಿವೆ. ಇದರಿಂದ ಸಾಲ ಮಾಡಿ ಬಿತ್ತನೆ ಮಾಡಿದರೂ ಫಲ ಕೈಗೆ ಬರುವುದಿಲ್ಲ ಎಂಬ ಬೇಸರ ರೈತರದ್ದು. </p><p>ಮಳೆಯಿಂದ ಅನೇಕ ಬೆಳೆಗಳು ಹಾಳಾಗಿವೆ. ಜೋಳಕ್ಕೆ ಕೆಂಪು ಸುಳಿ ರೋಗದ ಕಾಟ ಹೆಚ್ಚಾಗಿದ್ದು, ಈ ಭಾಗದ ರೈತರು ಕಂಗಾಲಾಗಿದ್ದಾರೆ.</p><p>ಜೋಳಕ್ಕೆ ಯಾವುದೇ ಕೀಟನಾಶಕ ಸಿಂಪಡಣೆ ಮಾಡುತ್ತಿದ್ದಿಲ್ಲ. ಕೆಲವು ವರ್ಷದಿಂದ ಜೋಳಕ್ಕೆ ರೋಗ ತಗುಲುತ್ತಿದ್ದು, ರೈತರನ್ನು ಚಿಂತೆಗೆ ತಳ್ಳಿದೆ ಎನ್ನುತ್ತಾರೆ ಅಂಬಣ್ಣ.</p><p>ರೈತರ ನೆರವಿಗೆ ಆಗಮಿಸಬೇಕಾದ ಅಧಿಕಾರಿಗಳು ಸಮಸ್ಯೆಗಳನ್ನು ಆಲಿಸುವಲ್ಲಿ ವಿಫಲವಾಗಿದ್ದಾರೆ. ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಗಳು ನೆರವಿಗೆ ಬರಬೇಕು ಎನ್ನುವುದು ಅನ್ನದಾತರ ಆಗ್ರಹ. </p>.<div><blockquote>ಬಿಳಿ ಜೋಳದ ಬೆಳೆಗೆ ಕೆಂಪು ಹುಳುವಿನ ಕಾಟ ಹೆಚ್ಚಾಗಿದ್ದು, ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳು ಇತ್ತ ಕಡೆ ಗಮನಹರಿಸಲಿ.</blockquote><span class="attribution">– ದುರುಗಪ್ಪ, ಗೌಡೂರು ಗ್ರಾಮದ ರೈತ </span></div>.<div><blockquote>ರೈತರು ಆತಂಕ ಪಡುವ ಅಗತ್ಯವಿಲ್ಲ. ರೈತ ಸಂರ್ಪಕ ಕೇಂದ್ರಕ್ಕೆ ಆಗಮಿಸಿ ಮಾಹಿತಿ ಪಡೆದುಕೊಳ್ಳಿ.</blockquote><span class="attribution">ಹನುಮಂತ ರಾಠೋಡ್, ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ</span></div>.<div><blockquote>ಬೆಳೆಗಳು ಹಾಳಾಗುತ್ತಿದ್ದು, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ರೈತರ ಸಮಸ್ಯೆಗೆ ಸ್ಪಂದಿಸಬೇಕು. ಇಲ್ಲವಾದರೆ ಹೋರಾಟ ನಡೆಸಬೇಕಾಗುತ್ತದೆ</blockquote><span class="attribution">– ಬಸವರಾಜ, ರಾಜ್ಯ ರೈತ ಸಂಘ ಹಸಿರು ಸೇನೆಯ ತಾಲ್ಲೂಕು ಕಾರ್ಯದರ್ಶಿ </span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>