‘ಇನ್ನೂ ಸಾಕಷ್ಟು ಮಳೆಯ ಅಗತ್ಯವಿದೆ. ನೀರು ಇಂಗಿಸಿಕೊಳ್ಳದ ಕೆಲ ಜಮೀನುಗಳಲ್ಲಿ ಮುಂಚಿತವಾಗಿ ಬಿತ್ತನೆ ಮಾಡಿದ ತೊಗರಿ ನಾಟಿಯೇ ಇಲ್ಲ. ಈಗ ಮಳೆ ಬರುತ್ತಿದ್ದು, ಮತ್ತೊಮ್ಮೆ ತೊಗರಿ ಬಿತ್ತನೆ ಮಾಡಿದ್ದೇವೆ. ಬಿತ್ತನೆ ಬೀಜ, ಕೂಲಿ ಕಾರ್ಮಿಕರು ಸೇರಿದಂತೆ ಬರೀ ಬಿತ್ತನೆಗೆ ಪ್ರತಿ ಎಕರೆಗೆ ₹10-₹15 ಸಾವಿರ ಖರ್ಚು ಮಾಡಿದ್ದೇವೆ. ಈಗಲಾದರೂ ಸಮೃದ್ಧ ಮಳೆಯಾದರೆ ಅನುಕೂಲವಾಗುತ್ತದೆ’ ಎಂದು ರೈತ ಹಂಪಣ್ಣ ಹೇಳಿದರು.