<p><strong>ರಾಯಚೂರು:</strong> ನವೋದಯ ನರ್ಸಿಂಗ್ ಕಾಲೇಜಿನ 33ನೇ ತಂಡದ ಜನರಲ್ ನರ್ಸಿಂಗ್ ಮತ್ತು ಮಿಡ್ವೈಫರಿ (ಜಿಎನ್ಎಂ) ಹಾಗೂ 32ನೇ ತಂಡದ ಬೇಸಿಕ್ ಬಿ.ಎಸ್.ಸಿ ನರ್ಸಿಂಗ್ ವಿದ್ಯಾರ್ಥಿಗಳ ದೀಪದಾನ ಸಮಾರಂಭ ಡಾ.ಹೆಗ್ಡೆ ಸಿಲ್ವರ್ಜುಬ್ಲಿ ಸಭಾಂಗಣದಲ್ಲಿ ಶನಿವಾರ ನಡೆಯಿತು.</p>.<p>ಮುಖ್ಯ ಅತಿಥಿಯಾಗಿ ನವೋದಯ ಎಜುಕೇಶನ್ ಟ್ರಸ್ಟ್ ಗೌರವಾಧ್ಯಕ್ಷ ಎಸ್.ಆರ್.ರೆಡ್ಡಿ, ಕರ್ನಾಟಕ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಬೆಂಗಳೂರಿನ ನರ್ಸಿಂಗ್ ಡೀನ್ ಡಾ. ಮಹೇಶ ಪಿ. ಭಾಗವಹಿಸಿದ್ದರು.</p>.<p>ಡಾ.ಮಹೇಶ ವಿದ್ಯಾರ್ಥಿನಿಯರಿಗೆ ದೀಪ ಹಸ್ತಾಂತರಿಸಿದರು. ಅಧ್ಯಕ್ಷತೆ ವಹಿಸಿದ್ದ ಪ್ರೊ.ಹೆಟ್ಸಿ ಸುಥಾನ ಕುಮಾರಿ ಪ್ರತಿಜ್ಞಾವಿಧಿ ಬೋಧಿಸಿದರು.</p>.<p>ಟ್ರಸ್ಟ್ ರಿಜಿಸ್ಟ್ರಾರ್ ಡಾ.ಟಿ. ಶ್ರೀನಿವಾಸ್, ನವೋದಯ ಮೆಡಿಕಲ್ ಕಾಲೇಜಿನ ಡೀನ್ ಡಾ.ಬಿ.ದೇವಾನಂದ, ನವೋದಯ ಮೆಡಿಕಲ್ ಕಾಲೇಜಿನ ಪ್ರಾಚಾರ್ಯ ಡಾ.ಅರುಣ್ ಕೆ.ನಾಯಕ ಉಪಸ್ಥಿತರಿದ್ದರು.</p>.<p>ಪ್ರೊ.ಇಮಾನ್ಯುವೆಲ್ ಪಿ. ಸ್ವಾಗತಿಸಿದರು. ನವೋದಯ ನರ್ಸಿಂಗ್ ಕಾಲೇಜಿನ ಪ್ರೊ.ರಾಖಿ ಸರಕಾರ ಹಾಗೂ ಪ್ರೊ.ತಬಿತ ರವೀಶ್ ನಿರೂಪಿಸಿದರು. ಪ್ರೊ.ಪೈಲಟ್ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಯಚೂರು:</strong> ನವೋದಯ ನರ್ಸಿಂಗ್ ಕಾಲೇಜಿನ 33ನೇ ತಂಡದ ಜನರಲ್ ನರ್ಸಿಂಗ್ ಮತ್ತು ಮಿಡ್ವೈಫರಿ (ಜಿಎನ್ಎಂ) ಹಾಗೂ 32ನೇ ತಂಡದ ಬೇಸಿಕ್ ಬಿ.ಎಸ್.ಸಿ ನರ್ಸಿಂಗ್ ವಿದ್ಯಾರ್ಥಿಗಳ ದೀಪದಾನ ಸಮಾರಂಭ ಡಾ.ಹೆಗ್ಡೆ ಸಿಲ್ವರ್ಜುಬ್ಲಿ ಸಭಾಂಗಣದಲ್ಲಿ ಶನಿವಾರ ನಡೆಯಿತು.</p>.<p>ಮುಖ್ಯ ಅತಿಥಿಯಾಗಿ ನವೋದಯ ಎಜುಕೇಶನ್ ಟ್ರಸ್ಟ್ ಗೌರವಾಧ್ಯಕ್ಷ ಎಸ್.ಆರ್.ರೆಡ್ಡಿ, ಕರ್ನಾಟಕ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಬೆಂಗಳೂರಿನ ನರ್ಸಿಂಗ್ ಡೀನ್ ಡಾ. ಮಹೇಶ ಪಿ. ಭಾಗವಹಿಸಿದ್ದರು.</p>.<p>ಡಾ.ಮಹೇಶ ವಿದ್ಯಾರ್ಥಿನಿಯರಿಗೆ ದೀಪ ಹಸ್ತಾಂತರಿಸಿದರು. ಅಧ್ಯಕ್ಷತೆ ವಹಿಸಿದ್ದ ಪ್ರೊ.ಹೆಟ್ಸಿ ಸುಥಾನ ಕುಮಾರಿ ಪ್ರತಿಜ್ಞಾವಿಧಿ ಬೋಧಿಸಿದರು.</p>.<p>ಟ್ರಸ್ಟ್ ರಿಜಿಸ್ಟ್ರಾರ್ ಡಾ.ಟಿ. ಶ್ರೀನಿವಾಸ್, ನವೋದಯ ಮೆಡಿಕಲ್ ಕಾಲೇಜಿನ ಡೀನ್ ಡಾ.ಬಿ.ದೇವಾನಂದ, ನವೋದಯ ಮೆಡಿಕಲ್ ಕಾಲೇಜಿನ ಪ್ರಾಚಾರ್ಯ ಡಾ.ಅರುಣ್ ಕೆ.ನಾಯಕ ಉಪಸ್ಥಿತರಿದ್ದರು.</p>.<p>ಪ್ರೊ.ಇಮಾನ್ಯುವೆಲ್ ಪಿ. ಸ್ವಾಗತಿಸಿದರು. ನವೋದಯ ನರ್ಸಿಂಗ್ ಕಾಲೇಜಿನ ಪ್ರೊ.ರಾಖಿ ಸರಕಾರ ಹಾಗೂ ಪ್ರೊ.ತಬಿತ ರವೀಶ್ ನಿರೂಪಿಸಿದರು. ಪ್ರೊ.ಪೈಲಟ್ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>