<p><strong>ಕವಿತಾಳ:</strong> ‘ಮಾಹಿತಿ ನೀಡದೆ ಜಮೀನುಗಳಲ್ಲಿ ಸಸಿ ನೆಡಲು ಗುಂಡಿ ತೋಡುವ ಮೂಲಕ ಅರಣ್ಯ ಇಲಾಖೆ ಅಧಿಕಾರಿಗಳು ನಮ್ಮನ್ನು ಒಕ್ಕಲೆಬ್ಬಿಸುವ ಕೆಲಸ ಮಾಡುತ್ತಿದ್ದಾರೆ’ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.</p>.<p>ಮಸ್ಕಿ ತಾಲ್ಲೂಕಿನ ಪಾಮನಕಲ್ಲೂರು ಹೋಬಳಿ ಯಕ್ಲಾಸ್ಪುರ ಸೀಮಾ ವ್ಯಾಪ್ತಿಯ ಕಾಚಾಪುರ, ಯತಗಲ್, ನೆಲಕೊಳ ಗ್ರಾಮಗಳ 20ಕ್ಕೂ ಹೆಚ್ಚಿನ ರೈತರ ಜಮೀನುಗಳಲ್ಲಿಅರಣ್ಯ ಇಲಾಖೆ ಅಧಿಕಾರಿಗಳು ಸಸಿ ನೆಡಲು ಗುಂಡಿ ತೋಡಿದ್ದಾರೆ.</p>.<p>ಅಧಿಕಾರಿಗಳ ನಡೆ ಖಂಡಿಸಿರುವ ರೈತರು, ‘ಶತಮಾನಗಳಿಂದ ಅದೇ ಜಮೀನಿನಲ್ಲಿ ಕೃಷಿ ಚಟುವಟಿಕೆ ಕೈಗೊಳ್ಳುತ್ತಿದ್ದೇವೆ. ಜಮೀನಿನ ದಾಖಲೆಗಳು ನಮ್ಮ ಹೆಸರಿನಲ್ಲಿವೆ. ಈಗ ಇದ್ದಕ್ಕಿದ್ದಂತೆ ಜಮೀನುಗಳು ಅರಣ್ಯ ಇಲಾಖೆ ವ್ಯಾಪ್ತಿಗೊಳಪಟ್ಟಿವೆ ಎಂದು ಕೃಷಿ ಚಟುವಟಿಕೆ ಕೈಗೊಳ್ಳಲು ಬಿಡುತ್ತಿಲ್ಲ’ ಎಂದು ರೈತರು ಅಳಲು ತೋಡಿಕೊಂಡರು.</p>.<p>‘6.32 ಎಕರೆ ಜಮೀನಿನಲ್ಲಿ ಅಂದಾಜು 2 ಎಕರೆ ಹೊರತುಪಡಿಸಿ ಉಳಿದ ಜಮೀನಿನಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಈಚೆಗೆ ಗುಂಡಿ ತೋಡಿದ್ದಾರೆ. ಪಹಣಿ ತೋರಿಸಿದರೂ ಕೃಷಿ ಚಟುವಟಕೆ ಕೈಗೊಳ್ಳಲು ಬಿಡುತ್ತಿಲ್ಲ. ಹೀಗಾಗಿ ವಿಷ ಕುಡಿಯುವ ಪರಿಸ್ಥಿತಿ ಉಂಟಾಗಿದೆ’ ಎಂದು ಕಾಚಾಪುರ ಗ್ರಾಮದ ರೈತ ರಾಮಪ್ಪ ಹೇಳಿದರು.</p>.<p>‘ಜಮೀನುಗಳ ದಾಖಲೆಗಳ ಆಧಾರದ ಮೇಲೆ ಬ್ಯಾಂಕ್ಗಳಲ್ಲಿ ಬೆಳೆ ಸಾಲ ಹಾಗೂ ಬೆಳೆ ವಿಮೆ ಪಡೆಯುತ್ತಿದ್ದೇವೆ. ಅರಣ್ಯ ಇಲಾಖೆ ವ್ಯಾಪ್ತಿಗೆ ಒಳಪಟ್ಟರೆ ಈ ಸೌಲಭ್ಯ ಹೇಗೆ ನೀಡಲಾಗುತ್ತಿದೆ’ ಎಂದು ರೈತರಾದ ಹುಚ್ಚಪ್ಪ ಕುಂಬಾರ, ಶಿವಣ್ಣ ಬುಳ್ಳಾಪುರ, ಗಂಗಪ್ಪ ಕುಂಬಾರ, ಚಂದುಸಾಬ್, ಪಿಡ್ನೆಸಾಬ್, ಬಸವರಾಜ, ರಡ್ಡೆಪ್ಪ, ನಿಂಗನಗೌಡ ಮತ್ತು ಯಂಕಪ್ಪ ತಳವಾರ ಆಕ್ರೋಶ ವ್ಯಕ್ತಪಡಿಸಿದರು.</p>.<div><blockquote>ಈ ಬಗ್ಗೆ ಶಾಸಕರು ತಹಶೀಲ್ದಾರರು ಪೊಲೀಸ್ ಠಾಣೆಗೆ ಲಿಖಿತ ಮಾಹಿತಿ ನೀಡಿದ್ದು ಮುಖ್ಯಮಂತ್ರಿಗಳ ಭೇಟಿಗೆ ಅವಕಾಶ ಸಿಕ್ಕರೆ ದೂರು ಸಲ್ಲಿಸಲಾಗುವುದು</blockquote><span class="attribution">ಯಮನೂರು ನಾಯಕ ಯತಗಲ್ ರೈತ ಮುಖಂಡ</span></div>.<div><blockquote>ತಾತ ಮುತ್ತಾತಂದಿರ ಕಾಲದಿಂದ ಉಳುಮೆ ಮಾಡುತ್ತಿದ್ದ ಜಮೀನು ಅರಣ್ಯ ಇಲಾಖೆಗೆ ಬಿಡಬೇಕು. ಗುಡ್ಡದ ಮೇಲೆ ಬರಡು ನೆಲದಲ್ಲಿ ಉಳುಮೆ ಮಾಡಿಕೊಳ್ಳಲಿ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ</blockquote><span class="attribution">ಈರಣ್ಣ ನಾಯಕ ರೈತ ಮುಖಂಡ</span></div>.<div><blockquote>ಇಲಾಖೆಗೆ ಸೇರಿದ ಜಾಗದಲ್ಲಿ ಸಸಿ ನೆಡಲು ಗುಂಡಿ ತೋಡಲಾಗಿದೆ. ರೈತರ ಜಮೀನು ಅತಿಕ್ರಮಣ ಮಾಡಿಲ್ಲ. ರೈತರು ಸರ್ವೇ ಮಾಡಿಸಿಕೊಂಡು ತಮ್ಮ ಜಮೀನು ಹದ್ದುಬಸ್ತು ಮಾಡಿಕೊಳ್ಳಬಹುದು</blockquote><span class="attribution">ನೀಲಕಂಠ ಉಪ ವಲಯ ಅರಣ್ಯಾಧಿಕಾರಿ ಮಾನ್ವಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕವಿತಾಳ:</strong> ‘ಮಾಹಿತಿ ನೀಡದೆ ಜಮೀನುಗಳಲ್ಲಿ ಸಸಿ ನೆಡಲು ಗುಂಡಿ ತೋಡುವ ಮೂಲಕ ಅರಣ್ಯ ಇಲಾಖೆ ಅಧಿಕಾರಿಗಳು ನಮ್ಮನ್ನು ಒಕ್ಕಲೆಬ್ಬಿಸುವ ಕೆಲಸ ಮಾಡುತ್ತಿದ್ದಾರೆ’ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.</p>.<p>ಮಸ್ಕಿ ತಾಲ್ಲೂಕಿನ ಪಾಮನಕಲ್ಲೂರು ಹೋಬಳಿ ಯಕ್ಲಾಸ್ಪುರ ಸೀಮಾ ವ್ಯಾಪ್ತಿಯ ಕಾಚಾಪುರ, ಯತಗಲ್, ನೆಲಕೊಳ ಗ್ರಾಮಗಳ 20ಕ್ಕೂ ಹೆಚ್ಚಿನ ರೈತರ ಜಮೀನುಗಳಲ್ಲಿಅರಣ್ಯ ಇಲಾಖೆ ಅಧಿಕಾರಿಗಳು ಸಸಿ ನೆಡಲು ಗುಂಡಿ ತೋಡಿದ್ದಾರೆ.</p>.<p>ಅಧಿಕಾರಿಗಳ ನಡೆ ಖಂಡಿಸಿರುವ ರೈತರು, ‘ಶತಮಾನಗಳಿಂದ ಅದೇ ಜಮೀನಿನಲ್ಲಿ ಕೃಷಿ ಚಟುವಟಿಕೆ ಕೈಗೊಳ್ಳುತ್ತಿದ್ದೇವೆ. ಜಮೀನಿನ ದಾಖಲೆಗಳು ನಮ್ಮ ಹೆಸರಿನಲ್ಲಿವೆ. ಈಗ ಇದ್ದಕ್ಕಿದ್ದಂತೆ ಜಮೀನುಗಳು ಅರಣ್ಯ ಇಲಾಖೆ ವ್ಯಾಪ್ತಿಗೊಳಪಟ್ಟಿವೆ ಎಂದು ಕೃಷಿ ಚಟುವಟಿಕೆ ಕೈಗೊಳ್ಳಲು ಬಿಡುತ್ತಿಲ್ಲ’ ಎಂದು ರೈತರು ಅಳಲು ತೋಡಿಕೊಂಡರು.</p>.<p>‘6.32 ಎಕರೆ ಜಮೀನಿನಲ್ಲಿ ಅಂದಾಜು 2 ಎಕರೆ ಹೊರತುಪಡಿಸಿ ಉಳಿದ ಜಮೀನಿನಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಈಚೆಗೆ ಗುಂಡಿ ತೋಡಿದ್ದಾರೆ. ಪಹಣಿ ತೋರಿಸಿದರೂ ಕೃಷಿ ಚಟುವಟಕೆ ಕೈಗೊಳ್ಳಲು ಬಿಡುತ್ತಿಲ್ಲ. ಹೀಗಾಗಿ ವಿಷ ಕುಡಿಯುವ ಪರಿಸ್ಥಿತಿ ಉಂಟಾಗಿದೆ’ ಎಂದು ಕಾಚಾಪುರ ಗ್ರಾಮದ ರೈತ ರಾಮಪ್ಪ ಹೇಳಿದರು.</p>.<p>‘ಜಮೀನುಗಳ ದಾಖಲೆಗಳ ಆಧಾರದ ಮೇಲೆ ಬ್ಯಾಂಕ್ಗಳಲ್ಲಿ ಬೆಳೆ ಸಾಲ ಹಾಗೂ ಬೆಳೆ ವಿಮೆ ಪಡೆಯುತ್ತಿದ್ದೇವೆ. ಅರಣ್ಯ ಇಲಾಖೆ ವ್ಯಾಪ್ತಿಗೆ ಒಳಪಟ್ಟರೆ ಈ ಸೌಲಭ್ಯ ಹೇಗೆ ನೀಡಲಾಗುತ್ತಿದೆ’ ಎಂದು ರೈತರಾದ ಹುಚ್ಚಪ್ಪ ಕುಂಬಾರ, ಶಿವಣ್ಣ ಬುಳ್ಳಾಪುರ, ಗಂಗಪ್ಪ ಕುಂಬಾರ, ಚಂದುಸಾಬ್, ಪಿಡ್ನೆಸಾಬ್, ಬಸವರಾಜ, ರಡ್ಡೆಪ್ಪ, ನಿಂಗನಗೌಡ ಮತ್ತು ಯಂಕಪ್ಪ ತಳವಾರ ಆಕ್ರೋಶ ವ್ಯಕ್ತಪಡಿಸಿದರು.</p>.<div><blockquote>ಈ ಬಗ್ಗೆ ಶಾಸಕರು ತಹಶೀಲ್ದಾರರು ಪೊಲೀಸ್ ಠಾಣೆಗೆ ಲಿಖಿತ ಮಾಹಿತಿ ನೀಡಿದ್ದು ಮುಖ್ಯಮಂತ್ರಿಗಳ ಭೇಟಿಗೆ ಅವಕಾಶ ಸಿಕ್ಕರೆ ದೂರು ಸಲ್ಲಿಸಲಾಗುವುದು</blockquote><span class="attribution">ಯಮನೂರು ನಾಯಕ ಯತಗಲ್ ರೈತ ಮುಖಂಡ</span></div>.<div><blockquote>ತಾತ ಮುತ್ತಾತಂದಿರ ಕಾಲದಿಂದ ಉಳುಮೆ ಮಾಡುತ್ತಿದ್ದ ಜಮೀನು ಅರಣ್ಯ ಇಲಾಖೆಗೆ ಬಿಡಬೇಕು. ಗುಡ್ಡದ ಮೇಲೆ ಬರಡು ನೆಲದಲ್ಲಿ ಉಳುಮೆ ಮಾಡಿಕೊಳ್ಳಲಿ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ</blockquote><span class="attribution">ಈರಣ್ಣ ನಾಯಕ ರೈತ ಮುಖಂಡ</span></div>.<div><blockquote>ಇಲಾಖೆಗೆ ಸೇರಿದ ಜಾಗದಲ್ಲಿ ಸಸಿ ನೆಡಲು ಗುಂಡಿ ತೋಡಲಾಗಿದೆ. ರೈತರ ಜಮೀನು ಅತಿಕ್ರಮಣ ಮಾಡಿಲ್ಲ. ರೈತರು ಸರ್ವೇ ಮಾಡಿಸಿಕೊಂಡು ತಮ್ಮ ಜಮೀನು ಹದ್ದುಬಸ್ತು ಮಾಡಿಕೊಳ್ಳಬಹುದು</blockquote><span class="attribution">ನೀಲಕಂಠ ಉಪ ವಲಯ ಅರಣ್ಯಾಧಿಕಾರಿ ಮಾನ್ವಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>