ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು: ಮಗುಚಿದ ಅದಿರು ಲಾರಿ, ಚಾಲಕ ಸ್ಥಳದಲ್ಲೇ ಸಾವು

Last Updated 19 ಸೆಪ್ಟೆಂಬರ್ 2021, 10:36 IST
ಅಕ್ಷರ ಗಾತ್ರ

ರಾಯಚೂರು: ತಾಲ್ಲೂಕಿನ ಗಡಿ ಗ್ರಾಮ ದೇವಸುಗೂರು ಬಳಿ ಕಬ್ಬಿಣ ಅದಿರು‌ ಲಾರಿ ಮಗುಚಿ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದು, ಸಹಾಯಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ಭಾನುವಾರ ನಡೆದಿದೆ.

ಹೈದರಾಬಾದ್ ನಿವಾಸಿ ನೌಶಾದ್ (35) ಮೃತ ಚಾಲಕ, ಗಾಯಗೊಂಡಿರುವ ಇಮ್ತಿಯಾಜ್ ನನ್ನು ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ವೇಗವಾಗಿ ಸಂಚರಿಸುತ್ತಿದ್ದ ಲಾರಿಯ ಮುಂಭಾಗದ ಚಕ್ರವು ಸ್ಫೋಟವಾಗಿದ್ದು ಅಪಘಾತಕ್ಕೆ ಕಾರಣ. ಗಡಿಯಲ್ಲಿದ್ದ ಚೆಕ್ ಪೋಸ್ಟ್ ಕೋಣೆಗೆ ಲಾರಿ ಡಿಕ್ಕಿಯಾಗಿದ್ದು, ಅದೃಷ್ಟವಶಾತ್ ಅದರಲ್ಲಿ ತಪಾಸಣೆ ಸಿಬ್ಬಂದಿ ಇರಲಿಲ್ಲ. ಕಟ್ಟಡ ಹಾಗೂ ಲಾರಿ ಛಿದ್ರವಾಗಿವೆ.

ಹೊಸಪೇಟೆಯಿಂದ ಹೈದರಾಬಾದ್‌ಗೆ ಲಾರಿ ಅದಿರು ಸಾಗಿಸುತ್ತಿರುವಾಗ ಅಪಘಾತವಾಗಿದೆ. ಶಕ್ತಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT