<p><strong>ರಾಯಚೂರು:</strong> ತಾಲ್ಲೂಕಿನ ಗಡಿ ಗ್ರಾಮ ದೇವಸುಗೂರು ಬಳಿ ಕಬ್ಬಿಣ ಅದಿರು ಲಾರಿ ಮಗುಚಿ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದು, ಸಹಾಯಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ಭಾನುವಾರ ನಡೆದಿದೆ.<br /><br />ಹೈದರಾಬಾದ್ ನಿವಾಸಿ ನೌಶಾದ್ (35) ಮೃತ ಚಾಲಕ, ಗಾಯಗೊಂಡಿರುವ ಇಮ್ತಿಯಾಜ್ ನನ್ನು ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.<br />ವೇಗವಾಗಿ ಸಂಚರಿಸುತ್ತಿದ್ದ ಲಾರಿಯ ಮುಂಭಾಗದ ಚಕ್ರವು ಸ್ಫೋಟವಾಗಿದ್ದು ಅಪಘಾತಕ್ಕೆ ಕಾರಣ. ಗಡಿಯಲ್ಲಿದ್ದ ಚೆಕ್ ಪೋಸ್ಟ್ ಕೋಣೆಗೆ ಲಾರಿ ಡಿಕ್ಕಿಯಾಗಿದ್ದು, ಅದೃಷ್ಟವಶಾತ್ ಅದರಲ್ಲಿ ತಪಾಸಣೆ ಸಿಬ್ಬಂದಿ ಇರಲಿಲ್ಲ. ಕಟ್ಟಡ ಹಾಗೂ ಲಾರಿ ಛಿದ್ರವಾಗಿವೆ.<br /><br />ಹೊಸಪೇಟೆಯಿಂದ ಹೈದರಾಬಾದ್ಗೆ ಲಾರಿ ಅದಿರು ಸಾಗಿಸುತ್ತಿರುವಾಗ ಅಪಘಾತವಾಗಿದೆ. ಶಕ್ತಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p><strong>ಇದನ್ನೂ ಓದಿ... <a href="https://www.prajavani.net/india-news/120-lakh-deaths-due-to-negligence-in-road-accidents-in-2020-and-average-328-daily-data-868026.html" target="_blank">2020ರಲ್ಲಿ ರಸ್ತೆ ಅಪಘಾತಗಳಲ್ಲಿ 1.20 ಲಕ್ಷ ಮಂದಿ ಸಾವು: ಎನ್ಸಿಆರ್ಬಿ ವರದಿ</a></strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಯಚೂರು:</strong> ತಾಲ್ಲೂಕಿನ ಗಡಿ ಗ್ರಾಮ ದೇವಸುಗೂರು ಬಳಿ ಕಬ್ಬಿಣ ಅದಿರು ಲಾರಿ ಮಗುಚಿ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದು, ಸಹಾಯಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ಭಾನುವಾರ ನಡೆದಿದೆ.<br /><br />ಹೈದರಾಬಾದ್ ನಿವಾಸಿ ನೌಶಾದ್ (35) ಮೃತ ಚಾಲಕ, ಗಾಯಗೊಂಡಿರುವ ಇಮ್ತಿಯಾಜ್ ನನ್ನು ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.<br />ವೇಗವಾಗಿ ಸಂಚರಿಸುತ್ತಿದ್ದ ಲಾರಿಯ ಮುಂಭಾಗದ ಚಕ್ರವು ಸ್ಫೋಟವಾಗಿದ್ದು ಅಪಘಾತಕ್ಕೆ ಕಾರಣ. ಗಡಿಯಲ್ಲಿದ್ದ ಚೆಕ್ ಪೋಸ್ಟ್ ಕೋಣೆಗೆ ಲಾರಿ ಡಿಕ್ಕಿಯಾಗಿದ್ದು, ಅದೃಷ್ಟವಶಾತ್ ಅದರಲ್ಲಿ ತಪಾಸಣೆ ಸಿಬ್ಬಂದಿ ಇರಲಿಲ್ಲ. ಕಟ್ಟಡ ಹಾಗೂ ಲಾರಿ ಛಿದ್ರವಾಗಿವೆ.<br /><br />ಹೊಸಪೇಟೆಯಿಂದ ಹೈದರಾಬಾದ್ಗೆ ಲಾರಿ ಅದಿರು ಸಾಗಿಸುತ್ತಿರುವಾಗ ಅಪಘಾತವಾಗಿದೆ. ಶಕ್ತಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p><strong>ಇದನ್ನೂ ಓದಿ... <a href="https://www.prajavani.net/india-news/120-lakh-deaths-due-to-negligence-in-road-accidents-in-2020-and-average-328-daily-data-868026.html" target="_blank">2020ರಲ್ಲಿ ರಸ್ತೆ ಅಪಘಾತಗಳಲ್ಲಿ 1.20 ಲಕ್ಷ ಮಂದಿ ಸಾವು: ಎನ್ಸಿಆರ್ಬಿ ವರದಿ</a></strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>