<p><strong>ಮಸ್ಕಿ:</strong> ಫೆಬ್ರುವರಿ 1ರಂದು ನಡೆಯಲಿರುವ ಪಟ್ಟಣದ ಮಲ್ಲಿಕಾರ್ಜುನ (ಮಲ್ಲಯ್ಯ) ಜಾತ್ರಾ ಮಹೋತ್ಸವದ ಹೆಸರಿನಲ್ಲಿ ನಕಲಿ ಭಿತ್ತಿಪತ್ರಗಳನ್ನು ಹಾಗೂ ದೇಣಿಗೆ ರಸೀದಿ ಮುದ್ರಿಸಿ ಭಕ್ತರಿಂದ ದೇಣಿಗೆ ಸಂಗ್ರಹಿಸುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ.</p>.<p>ಜಾತ್ರಾ ಸಮಿತಿಯಿಂದ ಪ್ರಕಟವಾಗುವ ಮೊದಲೇ ಕೆಲವರು ನಕಲಿ ರಸೀದಿ ಪುಸ್ತಕ ಮುದ್ರಿಸಿಕೊಂಡು ನೆರೆಯ ತಾಲ್ಲೂಕಿಗೆ ತೆರಳಿ ದೇಣಿಗೆ ಕೇಳುತ್ತಿದ್ದಾರೆ. ಈ ನಕಲಿ ಭಿತ್ತಿಪತ್ರಗಳಲ್ಲಿ ಜಾತ್ರೆಯ ದಿನಾಂಕ, ಪೂಜೆ–ಕಾರ್ಯಕ್ರಮಗಳ ವಿವರಗಳನ್ನು ಉಲ್ಲೇಖಿಸಿ ಹಣ ಸಂಗ್ರಹಿಸಲಾಗುತ್ತಿದ್ದು, ಇದಕ್ಕೆ ದೇವಸ್ಥಾನ ಸಮಿತಿಯ ಅನುಮತಿ ಇಲ್ಲ ಎಂದು ಸಮಿತಿ ಸ್ಪಷ್ಟಪಡಿಸಿದೆ. ಭಕ್ತರನ್ನು ಮಾತ್ರವಲ್ಲದೆ ದೇವಸ್ಥಾನ ಹಾಗೂ ಜಾತ್ರಾ ಸಮಿತಿಗೂ ನೇರವಾಗಿ ವಂಚನೆ ಮಾಡಲಾಗುತ್ತಿದೆ ಎಂದು ಆರೋಪಿಸಲಾಗಿದೆ.</p>.<p>ವಿಷಯ ತಿಳಿದ ದೇವಸ್ಥಾನ ಸಮಿತಿ ಸದಸ್ಯರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದು, ಅಧಿಕೃತ ಭಿತ್ತಿಪತ್ರ ಪ್ರಕಟವಾದ ನಂತರ ಮಾತ್ರ ದೇಣಿಗೆ ನೀಡಬೇಕು. ನಕಲಿ ಬಿತ್ತಿಪತ್ರ ಹಿಡಿದು ದೇಣಿಗೆ ಕೇಳುವವರ ಬಗ್ಗೆ ಮಾಹಿತಿ ದೊರೆತಲ್ಲಿ ತಕ್ಷಣವೇ ಸಮಿತಿ ಅಥವಾ ಪೊಲೀಸ್ ಇಲಾಖೆಗೆ ತಿಳಿಸಲು ಕೋರಿದ್ದಾರೆ.</p>.<p>ದೇವಸ್ಥಾನ ಸಮಿತಿ ಅಧ್ಯಕ್ಷ ಅಮರಪ್ಪ ಗುಡದೂರು ಮಾತನಾಡಿ, ‘ಮಲ್ಲಿಕಾರ್ಜುನ ಜಾತ್ರೆಯ ನಕಲಿ ಭಿತ್ತಿಪತ್ರ ಹಾಗೂ ರಸೀದಿ ನೀಡಿ ಭಕ್ತರಿಂದ ದೇಣಿಗೆ ಸಂಗ್ರಹ ಮಾಡುತ್ತಿರುವುದು ಕಂಡು ಬಂದಿದೆ. ಯಾರಾದರೂ ಬಂದು ದೇಣಿಗೆ ಕೇಳಿದರೆ ಮೊಬೈಲ್ ಸಂಖ್ಯೆ: 6362127441 ಸಂಪರ್ಕಿಸಬೇಕು ಎಂದು ಮನವಿ ಮಾಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಸ್ಕಿ:</strong> ಫೆಬ್ರುವರಿ 1ರಂದು ನಡೆಯಲಿರುವ ಪಟ್ಟಣದ ಮಲ್ಲಿಕಾರ್ಜುನ (ಮಲ್ಲಯ್ಯ) ಜಾತ್ರಾ ಮಹೋತ್ಸವದ ಹೆಸರಿನಲ್ಲಿ ನಕಲಿ ಭಿತ್ತಿಪತ್ರಗಳನ್ನು ಹಾಗೂ ದೇಣಿಗೆ ರಸೀದಿ ಮುದ್ರಿಸಿ ಭಕ್ತರಿಂದ ದೇಣಿಗೆ ಸಂಗ್ರಹಿಸುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ.</p>.<p>ಜಾತ್ರಾ ಸಮಿತಿಯಿಂದ ಪ್ರಕಟವಾಗುವ ಮೊದಲೇ ಕೆಲವರು ನಕಲಿ ರಸೀದಿ ಪುಸ್ತಕ ಮುದ್ರಿಸಿಕೊಂಡು ನೆರೆಯ ತಾಲ್ಲೂಕಿಗೆ ತೆರಳಿ ದೇಣಿಗೆ ಕೇಳುತ್ತಿದ್ದಾರೆ. ಈ ನಕಲಿ ಭಿತ್ತಿಪತ್ರಗಳಲ್ಲಿ ಜಾತ್ರೆಯ ದಿನಾಂಕ, ಪೂಜೆ–ಕಾರ್ಯಕ್ರಮಗಳ ವಿವರಗಳನ್ನು ಉಲ್ಲೇಖಿಸಿ ಹಣ ಸಂಗ್ರಹಿಸಲಾಗುತ್ತಿದ್ದು, ಇದಕ್ಕೆ ದೇವಸ್ಥಾನ ಸಮಿತಿಯ ಅನುಮತಿ ಇಲ್ಲ ಎಂದು ಸಮಿತಿ ಸ್ಪಷ್ಟಪಡಿಸಿದೆ. ಭಕ್ತರನ್ನು ಮಾತ್ರವಲ್ಲದೆ ದೇವಸ್ಥಾನ ಹಾಗೂ ಜಾತ್ರಾ ಸಮಿತಿಗೂ ನೇರವಾಗಿ ವಂಚನೆ ಮಾಡಲಾಗುತ್ತಿದೆ ಎಂದು ಆರೋಪಿಸಲಾಗಿದೆ.</p>.<p>ವಿಷಯ ತಿಳಿದ ದೇವಸ್ಥಾನ ಸಮಿತಿ ಸದಸ್ಯರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದು, ಅಧಿಕೃತ ಭಿತ್ತಿಪತ್ರ ಪ್ರಕಟವಾದ ನಂತರ ಮಾತ್ರ ದೇಣಿಗೆ ನೀಡಬೇಕು. ನಕಲಿ ಬಿತ್ತಿಪತ್ರ ಹಿಡಿದು ದೇಣಿಗೆ ಕೇಳುವವರ ಬಗ್ಗೆ ಮಾಹಿತಿ ದೊರೆತಲ್ಲಿ ತಕ್ಷಣವೇ ಸಮಿತಿ ಅಥವಾ ಪೊಲೀಸ್ ಇಲಾಖೆಗೆ ತಿಳಿಸಲು ಕೋರಿದ್ದಾರೆ.</p>.<p>ದೇವಸ್ಥಾನ ಸಮಿತಿ ಅಧ್ಯಕ್ಷ ಅಮರಪ್ಪ ಗುಡದೂರು ಮಾತನಾಡಿ, ‘ಮಲ್ಲಿಕಾರ್ಜುನ ಜಾತ್ರೆಯ ನಕಲಿ ಭಿತ್ತಿಪತ್ರ ಹಾಗೂ ರಸೀದಿ ನೀಡಿ ಭಕ್ತರಿಂದ ದೇಣಿಗೆ ಸಂಗ್ರಹ ಮಾಡುತ್ತಿರುವುದು ಕಂಡು ಬಂದಿದೆ. ಯಾರಾದರೂ ಬಂದು ದೇಣಿಗೆ ಕೇಳಿದರೆ ಮೊಬೈಲ್ ಸಂಖ್ಯೆ: 6362127441 ಸಂಪರ್ಕಿಸಬೇಕು ಎಂದು ಮನವಿ ಮಾಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>