ಕಾಮಗಾರಿಗಳ ಬಗ್ಗೆ ಮಾಹಿತಿ ಕೇಳಿದರೇ, ಸಮರ್ಪಕವಾದ ಮಾಹಿತಿ ನೀಡಲ್ಲ. ಇದ್ದರಿಂದ ನಮ್ಮ ಸಮುದಾಯಕ್ಕೆ ಬಹಳಷ್ಟು ಅನ್ಯಾಯವಾಗುತ್ತಿದೆ. ದಲಿತರ ಕೇರಿಗಳಲ್ಲಿ ಇದುವರೆಗೂ ಸೌಲಭ್ಯ ಇಲ್ಲದೆ ಪರದಾಡುವಂತಾಗಿದೆ. ಸಮುದಾಯ ಭವನ ಸೇರಿದಂತೆ ಇನ್ನಿತರ ಕಾಮಗಾರಿಗಳು ನಮ್ಮ ವಾರ್ಡಿನಲ್ಲಿ ಮಾಡಬೇಕು ಎಂದು ಬಸವರಾಜ, ಮರಿಯಪ್ಪ, ಶಂಕ್ರಪ್ಪ, ವೀರಭದ್ರಪ್ಪ, ನಿರುಪಾದೇಪ್ಪ, ಹೊಳೆಯಪ್ಪ, ಅಯ್ಯಪ್ಪ, ಹುಸೇನಪ್ಪ, ಹಸನಸಾಬ್, ಶಿವಪ್ಪ, ಬಸವಂತ, ರಮೇಶ, ರೇಣಪ್ಪ, ಆದಪ್ಪ ಒತ್ತಾಯಿಸಿದರು.