ರಾಯಚೂರು: ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ.ಎನ್.ಕಟ್ಟಿಮನಿ ಅವರಿಗೆ ಮುಂಬೈನ ‘ಡೈಎನರ್ಜಿಕ್ ಬಿಸಿನೆಸ್ ಸೊಲುಷನ್’ ಸಂಸ್ಥೆಯು ‘ಅತ್ಯಂತ ಪ್ರಭಾವಶಾಲಿ ಕುಲಪತಿ’ ಪ್ರಶಸ್ತಿ ನೀಡಿ ಗೌರವಿಸಿದೆ.
ಹಿರಿತನ ಮತ್ತು ಶೈಕ್ಷಣಿಕ ನಾಯಕತ್ವಕ್ಕಾಗಿ ‘ಗೋಲ್ಡನ್ ಏಮ್ ಆವಾರ್ಡ್’ ವಿಭಾಗದಲ್ಲಿ ಪ್ರಶಸ್ತಿ ನೀಡಿದೆ. ಕೋವಿಡ್ ಇರುವ ಕಾರಣದಿಂ ಆನ್ಲೈನ್ ಮೂಲಕ ಪ್ರಶಸ್ತಿ ಪ್ರದಾನ ಮಾಡಲಾಗಿದೆ.
ಕುಲಪತಿ ಈ ಪ್ರಶಸ್ತಿಯನ್ನು ರಾಜ್ಯ ರೈತರಿಗೆ ಸಮರ್ಪಿಸಿದ್ದಾರೆ. ವಿಶ್ವವಿದ್ಯಾಲಯದ ವ್ಯವಸ್ಥಾಪನಾ ಮಂಡಳಿ ಸದಸ್ಯರು, ಅಧಿಕಾರಿಗಳು ಹಾಗೂ ಸಮಸ್ತ ಸಿಬ್ಬಂದಿ ಸಹಕಾರ ಸ್ಮರಿಸಿ ಧನ್ಯವಾದ ಅರ್ಪಿಸಿದ್ದಾರೆ.