<p><strong>ರಾಯಚೂರು: </strong>ಪ್ರತಿಯೊಬ್ಬರಿಗೂ ಸಂಗೀತದ ಅಗತ್ಯವಿದೆ ಎಂದು ಪತ್ರಕರ್ತ ವೆಂಕಟೇಶ ಹೂಗಾರ್ ಹೇಳಿದರು.</p>.<p>ನಗರದ ಬಸವ ಕೇಂದ್ರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಬಸವಕೇಂದ್ರ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ರಾಘವೇಂದ್ರಸ್ವಾಮಿ ಹಾಗೂ ಇವರ ತಂಡದಿಂದ ಸುಗಮ ಸಂಗೀತ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>ಮನಸ್ಸಿಗೆ ದುಃಖವಾದಾಗಲೂ ಕೂಡಾ ಸಂಗೀತದ ಸಾಲುಗಳನ್ನು ನೆನಪಿಸಿಕೊಂಡು ಹಗುರವಾಗಬಹುದು. ಇತ್ತೀಚೆಗೆ ಶಾಸ್ತ್ರೀಯ ಸಂಗೀತದ ಹಾಡುಗಳಿಗಿಂತಲೂ ಸಿನಿಮಾ ಹಾಡುಗಳನ್ನು ಯುವಜನರು ಹಾಡುತ್ತಿದ್ದಾರೆ. ಆದರೆ, ಸಂಗೀತವನ್ನು ಶಾಸ್ತ್ರೀಯವಾಗಿ ಕಲಿತುಕೊಳ್ಳುವುದು ಮುಖ್ಯ ಎಂಬುದನ್ನು ಅರಿಯಬೇಕು ಎಂದರು.</p>.<p>ಅಧ್ಯಕ್ಷತೆ ವಹಿಸಿದ್ದ ಚಂದ್ರಶೇಖರ್ ಮಿರ್ಜಾಪೂರ ಮಾತನಾಡಿ, ಕೊರೊನಾದಿಂದ ಎಲ್ಲರ ಜೀವನಶೈಲಿ ಬದಲಾಗಿದೆ. ಅದರಲ್ಲೂ ಸಂಗೀತಗಾರರು ಹೆಚ್ಚು ಸಂಕಷ್ಟಕ್ಕೆ ಒಳಗಾಗಿದ್ದರು. ಈಚೆಗೆ ಕಾರ್ಯಕ್ರಮಗಳನ್ನು ಮಾಡುವುದಕ್ಕೆ ಸರ್ಕಾರದಿಂದ ಅವಕಾಶ ಸಿಗುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ಹೇಳಿದರು.</p>.<p>ಬಸವಶ್ರೀ ವಿದ್ಯಾಸಂಸ್ಥೆಯ ಸಂಸ್ಥಾಪಕಿ ಲಲಿತಾ ಬಸನಗೌಡ ಮಾತನಾಡಿ, ರಾಘವೇಂದ್ರ ಅವರು ಸಂಗೀತ ಕಾರ್ಯಕ್ರಮದ ಮೂಲಕ ಕೇಳುಗರಿಗೆ ಮುದನೀಡಲು ಪರಿಶ್ರಮ ಹಾಕಿದ್ದಾರೆ. ಹೀಗೆಯೇ ಸಂಗೀತದ ಕಾರ್ಯಕ್ರಗಳನ್ನು ಆಯೋಜಿಸುತ್ತಿರಲಿ ಎಂದು ಹಾರೈಸಿದರು.</p>.<p>ಬಸವಕೇಂದ್ರ ಅಧ್ಯಕ್ಷ ರಾಚನಗೌಡ ಕೋಳೂರ ಅಧ್ಯಕ್ಷತೆ ವಹಿಸಿದ್ದರು. ರಾಘವೇಂದ್ರಸ್ವಾಮಿ ಹಾಗೂ ತಂಡದವರು ಸುಗಮ ಸಂಗೀತ ಪ್ರಸ್ತುತಪಡಿಸಿದರು. ನರಸಿಂಹಲು ಅರೋಲಿ ಕ್ಯಾಸಿಯೋ ನುಡಿಸಿದರು. ಅನಿಲಕುಮಾರ್ ಮಂಚೆಟ್ ಹಾರ್ಮೋನಿಯಂ ಹಾಗೂ ಬ್ರಹ್ಮೆಂದ್ರ ಮಂಜರ್ಲಾ ತಬಲಾ ಸಾತ್ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಯಚೂರು: </strong>ಪ್ರತಿಯೊಬ್ಬರಿಗೂ ಸಂಗೀತದ ಅಗತ್ಯವಿದೆ ಎಂದು ಪತ್ರಕರ್ತ ವೆಂಕಟೇಶ ಹೂಗಾರ್ ಹೇಳಿದರು.</p>.<p>ನಗರದ ಬಸವ ಕೇಂದ್ರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಬಸವಕೇಂದ್ರ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ರಾಘವೇಂದ್ರಸ್ವಾಮಿ ಹಾಗೂ ಇವರ ತಂಡದಿಂದ ಸುಗಮ ಸಂಗೀತ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>ಮನಸ್ಸಿಗೆ ದುಃಖವಾದಾಗಲೂ ಕೂಡಾ ಸಂಗೀತದ ಸಾಲುಗಳನ್ನು ನೆನಪಿಸಿಕೊಂಡು ಹಗುರವಾಗಬಹುದು. ಇತ್ತೀಚೆಗೆ ಶಾಸ್ತ್ರೀಯ ಸಂಗೀತದ ಹಾಡುಗಳಿಗಿಂತಲೂ ಸಿನಿಮಾ ಹಾಡುಗಳನ್ನು ಯುವಜನರು ಹಾಡುತ್ತಿದ್ದಾರೆ. ಆದರೆ, ಸಂಗೀತವನ್ನು ಶಾಸ್ತ್ರೀಯವಾಗಿ ಕಲಿತುಕೊಳ್ಳುವುದು ಮುಖ್ಯ ಎಂಬುದನ್ನು ಅರಿಯಬೇಕು ಎಂದರು.</p>.<p>ಅಧ್ಯಕ್ಷತೆ ವಹಿಸಿದ್ದ ಚಂದ್ರಶೇಖರ್ ಮಿರ್ಜಾಪೂರ ಮಾತನಾಡಿ, ಕೊರೊನಾದಿಂದ ಎಲ್ಲರ ಜೀವನಶೈಲಿ ಬದಲಾಗಿದೆ. ಅದರಲ್ಲೂ ಸಂಗೀತಗಾರರು ಹೆಚ್ಚು ಸಂಕಷ್ಟಕ್ಕೆ ಒಳಗಾಗಿದ್ದರು. ಈಚೆಗೆ ಕಾರ್ಯಕ್ರಮಗಳನ್ನು ಮಾಡುವುದಕ್ಕೆ ಸರ್ಕಾರದಿಂದ ಅವಕಾಶ ಸಿಗುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ಹೇಳಿದರು.</p>.<p>ಬಸವಶ್ರೀ ವಿದ್ಯಾಸಂಸ್ಥೆಯ ಸಂಸ್ಥಾಪಕಿ ಲಲಿತಾ ಬಸನಗೌಡ ಮಾತನಾಡಿ, ರಾಘವೇಂದ್ರ ಅವರು ಸಂಗೀತ ಕಾರ್ಯಕ್ರಮದ ಮೂಲಕ ಕೇಳುಗರಿಗೆ ಮುದನೀಡಲು ಪರಿಶ್ರಮ ಹಾಕಿದ್ದಾರೆ. ಹೀಗೆಯೇ ಸಂಗೀತದ ಕಾರ್ಯಕ್ರಗಳನ್ನು ಆಯೋಜಿಸುತ್ತಿರಲಿ ಎಂದು ಹಾರೈಸಿದರು.</p>.<p>ಬಸವಕೇಂದ್ರ ಅಧ್ಯಕ್ಷ ರಾಚನಗೌಡ ಕೋಳೂರ ಅಧ್ಯಕ್ಷತೆ ವಹಿಸಿದ್ದರು. ರಾಘವೇಂದ್ರಸ್ವಾಮಿ ಹಾಗೂ ತಂಡದವರು ಸುಗಮ ಸಂಗೀತ ಪ್ರಸ್ತುತಪಡಿಸಿದರು. ನರಸಿಂಹಲು ಅರೋಲಿ ಕ್ಯಾಸಿಯೋ ನುಡಿಸಿದರು. ಅನಿಲಕುಮಾರ್ ಮಂಚೆಟ್ ಹಾರ್ಮೋನಿಯಂ ಹಾಗೂ ಬ್ರಹ್ಮೆಂದ್ರ ಮಂಜರ್ಲಾ ತಬಲಾ ಸಾತ್ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>