ಎರಡನೇ ಹಂತದಲ್ಲಿ 2022-23ನೇ ಸಾಲಿನಲ್ಲಿ 4 ಕೆರೆ, ಮೂರನೇ ಹಂತದಲ್ಲಿ 9 ಕೆರೆಗಳ ಜೀರ್ಣೋದ್ಧಾರ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ತಾಲ್ಲೂಕಿನ ಆಲ್ದಾಳ ಕ್ಯಾಂಪ್, ಅಮರಾವತಿ, ಹಿರೇಕೊಟ್ನೇಕಲ್ ಸಮೀಪದ ಗೋಪಾಲ ನಗರ ಕ್ಯಾಂಪ್, ಭೋಗಾವತಿ, ಪೋತ್ನಾಳ ಸಮೀಪದ ಜೀನೂರು ಕ್ಯಾಂಪ್, ಸೀಕಲ್, ಕೊರವಿ, ಚೀಕಲಪರ್ವಿ, ಕುರ್ಡಿ, ಕಂಬಳತ್ತಿ, ನಕ್ಕುಂದಿ ಹಾಗೂ ಬ್ಯಾಗವಾಟ ಗ್ರಾಮಗಳ ಕೆರೆಗಳ ಜೀರ್ಣೋದ್ಧಾರ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ.