<p><strong>ರಾಯಚೂರು:</strong> ನಗರದಲ್ಲಿ ಹಣ್ಣುಗಳನ್ನು ಸಗಟು ಖರೀದಿಸಿ ಬೀದಿಬದಿ ಮಾರಾಟ ಮಾಡುತ್ತಿದ್ದ ತಾಲ್ಲೂಕಿನ ಯರಗೇರಾದ ಅಜ್ಜಿ ನರಸಮ್ಮ ಅತಂತ್ರ ಸ್ಥಿತಿಗೆ ಸಿಲುಕಿ ಕಣ್ಣೀರು ಹಾಕುತ್ತಿದ್ದಾರೆ.</p>.<p>ಪ್ರತಿದಿನ ಹಣ್ಣು ಮಾರಾಟ ಮಾಡಿ, ಉಳಿದಿದನ್ನು ನಗರಸಭೆ ಎದುರು ತಹಶೀಲ್ದಾರ್ ಕಚೇರಿ ಪಕ್ಕದ ಮಳಿಗೆಯೊಂದರಲ್ಲಿ ಇಟ್ಟು ಹೋಗುತ್ತಿದ್ದರು. ಇದಕ್ಕಾಗಿ ಮಳಿಗೆದಾರನಿಗೆ ಬಾಡಿಗೆ ಕೊಡುತ್ತಿದ್ದರು.</p>.<p>ಸೋಮವಾರ ರಾತ್ರಿಯಿಂದ ಯರಗೇರಾದತ್ತ ಹೋಗುವುದಕ್ಕೆ ಯಾವುದೇ ವಾಹನ ಸಿಕ್ಕಿಲ್ಲ. ಹನುಮಾನ ಟಾಕೀಸ್ ಹತ್ತಿರದ ಪರಿಚಯಸ್ಥರ ಮನೆಯಲ್ಲಿ ಎರಡು ದಿನ ಉಳಿದುಕೊಂಡಿದ್ದರು. ಇದೀಗ ಅವರು ಮನೆಯಿಂದ ಹೋಗುವಂತೆ ಹೊರಗೆ ಕಳುಹಿಸಿದ್ದಾರೆ.</p>.<p>'ಎಂಟು ಸಾವಿರ ಕಿಮ್ಮತ್ತಿನ ಹಣ್ಣು ಅಂಗಡಿಯಲ್ಲಿದೆ. ಅಂಗಡಿ ತೆರೆದು ಹಣ್ಣುಗಳನ್ನು ಕೊಡುತ್ತಿಲ್ಲ. ಊರಿಗೆ ಹೋಗುವುದಕ್ಕೆ ಪೊಲೀಸರು ಬಿಡುತ್ತಿಲ್ಲ. ಏನೂ ಗೊತ್ತಾಗವಲ್ದು. ಬಂದ್ ಹೀಂಗ್ ಇರತೈತಿ ಅಂತನನಗ ಗೊತ್ತಿರಲಿಲ್ಲ' ಎಂದು ಅಸಹಾಯಕತೆಯಿಂದ ಅಳುತ್ತಾ ನಗರಸಭೆ ಎದುರಿನ ಮಳಿಗೆ ಬಳಿ ಕುಳಿತಿದ್ದಾರೆ.</p>.<p>ನರಸಮ್ಮನಿಗೆ ಒಬ್ಬರು ಮಗ ಇದ್ದು, ಯರಗೇರಾದಲ್ಲಿ ಗೌಂಡಿ ಕೆಲಸ ಮಾಡುತ್ತಾರೆ. ಅವರ ಬಳಿ ಮೊಬೈಲ್ ಇಲ್ಲವಂತೆ. ಮಳಿಗೆಯಲ್ಲಿರುವ ಹಣ್ಣುಗಳ ಮೂಟೆ ಕೊಡಿಸಿ, ಯರಗೇರಾಗೆ ಹೋಗುವ ವ್ಯವಸ್ಥೆ ಮಾಡಿ ಎಂದು ಕೈಮುಗಿದು ಕೇಳಿಕೊಳ್ಳುತ್ತಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಯಚೂರು:</strong> ನಗರದಲ್ಲಿ ಹಣ್ಣುಗಳನ್ನು ಸಗಟು ಖರೀದಿಸಿ ಬೀದಿಬದಿ ಮಾರಾಟ ಮಾಡುತ್ತಿದ್ದ ತಾಲ್ಲೂಕಿನ ಯರಗೇರಾದ ಅಜ್ಜಿ ನರಸಮ್ಮ ಅತಂತ್ರ ಸ್ಥಿತಿಗೆ ಸಿಲುಕಿ ಕಣ್ಣೀರು ಹಾಕುತ್ತಿದ್ದಾರೆ.</p>.<p>ಪ್ರತಿದಿನ ಹಣ್ಣು ಮಾರಾಟ ಮಾಡಿ, ಉಳಿದಿದನ್ನು ನಗರಸಭೆ ಎದುರು ತಹಶೀಲ್ದಾರ್ ಕಚೇರಿ ಪಕ್ಕದ ಮಳಿಗೆಯೊಂದರಲ್ಲಿ ಇಟ್ಟು ಹೋಗುತ್ತಿದ್ದರು. ಇದಕ್ಕಾಗಿ ಮಳಿಗೆದಾರನಿಗೆ ಬಾಡಿಗೆ ಕೊಡುತ್ತಿದ್ದರು.</p>.<p>ಸೋಮವಾರ ರಾತ್ರಿಯಿಂದ ಯರಗೇರಾದತ್ತ ಹೋಗುವುದಕ್ಕೆ ಯಾವುದೇ ವಾಹನ ಸಿಕ್ಕಿಲ್ಲ. ಹನುಮಾನ ಟಾಕೀಸ್ ಹತ್ತಿರದ ಪರಿಚಯಸ್ಥರ ಮನೆಯಲ್ಲಿ ಎರಡು ದಿನ ಉಳಿದುಕೊಂಡಿದ್ದರು. ಇದೀಗ ಅವರು ಮನೆಯಿಂದ ಹೋಗುವಂತೆ ಹೊರಗೆ ಕಳುಹಿಸಿದ್ದಾರೆ.</p>.<p>'ಎಂಟು ಸಾವಿರ ಕಿಮ್ಮತ್ತಿನ ಹಣ್ಣು ಅಂಗಡಿಯಲ್ಲಿದೆ. ಅಂಗಡಿ ತೆರೆದು ಹಣ್ಣುಗಳನ್ನು ಕೊಡುತ್ತಿಲ್ಲ. ಊರಿಗೆ ಹೋಗುವುದಕ್ಕೆ ಪೊಲೀಸರು ಬಿಡುತ್ತಿಲ್ಲ. ಏನೂ ಗೊತ್ತಾಗವಲ್ದು. ಬಂದ್ ಹೀಂಗ್ ಇರತೈತಿ ಅಂತನನಗ ಗೊತ್ತಿರಲಿಲ್ಲ' ಎಂದು ಅಸಹಾಯಕತೆಯಿಂದ ಅಳುತ್ತಾ ನಗರಸಭೆ ಎದುರಿನ ಮಳಿಗೆ ಬಳಿ ಕುಳಿತಿದ್ದಾರೆ.</p>.<p>ನರಸಮ್ಮನಿಗೆ ಒಬ್ಬರು ಮಗ ಇದ್ದು, ಯರಗೇರಾದಲ್ಲಿ ಗೌಂಡಿ ಕೆಲಸ ಮಾಡುತ್ತಾರೆ. ಅವರ ಬಳಿ ಮೊಬೈಲ್ ಇಲ್ಲವಂತೆ. ಮಳಿಗೆಯಲ್ಲಿರುವ ಹಣ್ಣುಗಳ ಮೂಟೆ ಕೊಡಿಸಿ, ಯರಗೇರಾಗೆ ಹೋಗುವ ವ್ಯವಸ್ಥೆ ಮಾಡಿ ಎಂದು ಕೈಮುಗಿದು ಕೇಳಿಕೊಳ್ಳುತ್ತಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>