<p><strong>ರಾಯಚೂರು</strong>: ‘ಪಂಡಿತ ತಾರಾನಾಥರು ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಭದ್ರ ಬುನಾದಿ ಹಾಕುವುದರ ಮೂಲಕ ಶಿಕ್ಷಣಕ್ಕೆ ಮಹತ್ವ ನೀಡಿದ್ದರು’ ಎಂದು ರಾಯಚೂರಿನ ಎಸ್ಎಸ್ಆರ್ಜಿ ಮಹಿಳಾ ಕಾಲೇಜಿನ ಉಪನ್ಯಾಸಕಿ ರಾಜೇಶ್ವರಿ ವಿರಕ್ತಮಠ ಹೇಳಿದರು.</p>.<p>ಇಲ್ಲಿನ ಹಮ್ದರ್ದ್ ಶಾಲೆ ಆವರಣದಲ್ಲಿ ತಾರಾನಾಥ ಶಿಕ್ಷಣ ಸಂಸ್ಥೆ ವತಿಯಿಂದ ನಡೆದ ಪಂಡಿತ ತಾರಾನಾಥರವರ 134ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>‘ಅವರು ಶಿಕ್ಷಣಕ್ಕೆ ಆದ್ಯತೆ ನೀಡಿ ಅಧ್ಯಾಪಕರ ಏಳಿಗೆಗಾಗಿ ಶ್ರಮಿಸಿದರು. ಜೀವನದಲ್ಲಿ ಶಿಕ್ಷಕರಾಗಿಯೇ ಮುಂದುವರಿದರು. ವೃತ್ತಿ ಜೀವನಕ್ಕೆ ಸೀಮಿತವಾಗದೆ ಹಲವು ಸಮಾಜಮುಖಿ ಕಾರ್ಯ ಮಾಡಿದ್ದಾರೆ’ ಎಂದರು.</p>.<p>‘ವಿದ್ಯಾರ್ಥಿಗಳಿಗೆ ಶಾಲೆಯಲ್ಲಿ ವ್ಯಕ್ತಿತ್ವ ರೂಪಿಸುವಂಥ ಶಿಕ್ಷಣ ನೀಡುತ್ತಿದ್ದರು. ನಿಜಾಮರ ನಿರಂಕುಶ ಆಡಳಿತ, ಜಜಮನಿ ಪದ್ಧತಿ ಪ್ರತಿಭಟಿಸಿ ಲೇಖನಗಳನ್ನು ಬರೆಯುತ್ತಿದ್ದರು. ಅದಕ್ಕಾಗಿ ಅವರನ್ನು ಗಡಿಪಾರು ಮಾಡಲಾಯಿತು’ ಎಂದು ತಿಳಿಸಿದರು.</p>.<p>‘ಕನ್ನಡದಲ್ಲಿ ನಾಟಕ, ಕಥೆ ಸೇರಿ ಅನೇಕ ಕೃತಿಗಳನ್ನು ರಚಿಸಿ ಕನ್ನಡ ಸಾಹಿತ್ಯಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದರಿಂದ ಜನರು ಅವರನ್ನು ಪಂಡಿತ ಎಂದು ಕರೆದರು’ ಎಂದರು.</p>.<p>ವಕೀಲ ಅಂಬಾಪತಿ ಪಾಟೀಲ, ತಾರಾನಾಥ ಶಿಕ್ಷಣ ಸಂಸ್ಥೆಯ ಪವನಕುಮಾರ ಸುಖಾಣಿ, ಪುರುಷೋತ್ತಮದಾಸ ಇನ್ನಾಣಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.</p>.<p>ಶಿಕ್ಷಕಿ ವಿಜಯಲಕ್ಷ್ಮಿ ನಿರೂಪಿಸಿದರು. ಪ್ರಾಚಾರ್ಯ ಕಾಶಪ್ಪ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಯಚೂರು</strong>: ‘ಪಂಡಿತ ತಾರಾನಾಥರು ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಭದ್ರ ಬುನಾದಿ ಹಾಕುವುದರ ಮೂಲಕ ಶಿಕ್ಷಣಕ್ಕೆ ಮಹತ್ವ ನೀಡಿದ್ದರು’ ಎಂದು ರಾಯಚೂರಿನ ಎಸ್ಎಸ್ಆರ್ಜಿ ಮಹಿಳಾ ಕಾಲೇಜಿನ ಉಪನ್ಯಾಸಕಿ ರಾಜೇಶ್ವರಿ ವಿರಕ್ತಮಠ ಹೇಳಿದರು.</p>.<p>ಇಲ್ಲಿನ ಹಮ್ದರ್ದ್ ಶಾಲೆ ಆವರಣದಲ್ಲಿ ತಾರಾನಾಥ ಶಿಕ್ಷಣ ಸಂಸ್ಥೆ ವತಿಯಿಂದ ನಡೆದ ಪಂಡಿತ ತಾರಾನಾಥರವರ 134ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>‘ಅವರು ಶಿಕ್ಷಣಕ್ಕೆ ಆದ್ಯತೆ ನೀಡಿ ಅಧ್ಯಾಪಕರ ಏಳಿಗೆಗಾಗಿ ಶ್ರಮಿಸಿದರು. ಜೀವನದಲ್ಲಿ ಶಿಕ್ಷಕರಾಗಿಯೇ ಮುಂದುವರಿದರು. ವೃತ್ತಿ ಜೀವನಕ್ಕೆ ಸೀಮಿತವಾಗದೆ ಹಲವು ಸಮಾಜಮುಖಿ ಕಾರ್ಯ ಮಾಡಿದ್ದಾರೆ’ ಎಂದರು.</p>.<p>‘ವಿದ್ಯಾರ್ಥಿಗಳಿಗೆ ಶಾಲೆಯಲ್ಲಿ ವ್ಯಕ್ತಿತ್ವ ರೂಪಿಸುವಂಥ ಶಿಕ್ಷಣ ನೀಡುತ್ತಿದ್ದರು. ನಿಜಾಮರ ನಿರಂಕುಶ ಆಡಳಿತ, ಜಜಮನಿ ಪದ್ಧತಿ ಪ್ರತಿಭಟಿಸಿ ಲೇಖನಗಳನ್ನು ಬರೆಯುತ್ತಿದ್ದರು. ಅದಕ್ಕಾಗಿ ಅವರನ್ನು ಗಡಿಪಾರು ಮಾಡಲಾಯಿತು’ ಎಂದು ತಿಳಿಸಿದರು.</p>.<p>‘ಕನ್ನಡದಲ್ಲಿ ನಾಟಕ, ಕಥೆ ಸೇರಿ ಅನೇಕ ಕೃತಿಗಳನ್ನು ರಚಿಸಿ ಕನ್ನಡ ಸಾಹಿತ್ಯಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದರಿಂದ ಜನರು ಅವರನ್ನು ಪಂಡಿತ ಎಂದು ಕರೆದರು’ ಎಂದರು.</p>.<p>ವಕೀಲ ಅಂಬಾಪತಿ ಪಾಟೀಲ, ತಾರಾನಾಥ ಶಿಕ್ಷಣ ಸಂಸ್ಥೆಯ ಪವನಕುಮಾರ ಸುಖಾಣಿ, ಪುರುಷೋತ್ತಮದಾಸ ಇನ್ನಾಣಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.</p>.<p>ಶಿಕ್ಷಕಿ ವಿಜಯಲಕ್ಷ್ಮಿ ನಿರೂಪಿಸಿದರು. ಪ್ರಾಚಾರ್ಯ ಕಾಶಪ್ಪ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>