ಒಣಗಿದ ಭತ್ತವನ್ನು ಬರ್ಕಗಳ ಮೂಲಕ ಭದ್ರವಾಗಿ ಮುಚ್ಚಿಡಲಾಗಿದೆ. ಬಹುತೇಕ ವರ್ತಕರು, ದಲ್ಲಾಳಿಗಳು ರಾಶಿ ಸ್ಥಳಕ್ಕೆ ತೆರಳಿ ವಹಿವಾಟು ನಡೆಸಲು ಯತ್ನಿಸುತ್ತಿದ್ದು,ಕಡಿಮೆ ದರಕ್ಕೆ ಕೇಳುತ್ತಿದ್ದಾರೆ. ಕಳೆದ ವರ್ಷ ಕೆಲ ದಲ್ಲಾಳಿಗಳು ಭತ್ತ ಖರೀದಿಸಿ ರೈತರಿಗೆ ಹಣ ಪಾವತಿಸದೆ ವಂಚಿಸಿದ್ದಾರೆ. ಹೀಗಾಗಿ ರೈತರು ಯಾವ ನಂಬಿಕೆಯಿಂದ ಭತ್ತ ಮಾರಾಟ ಮಾಡುವುದು ಎಂದು ಚಿಂತೆಗೀಡಾಗಿದ್ದಾರೆ.